ಕುವೆಂಪು ಕಲಿಸಿದ ಮಂತ್ರ-ಮಾಂಗಲ್ಯ ವಿವಾಹ ಪದ್ದತಿ ಅನುಸಿರಿದ ಕೊಪ್ಪಳದ ಜೋಡಿ!
1010 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ ಜಿಲ್ಲೆಯ ಕಾರಟಗಿಯ ಶಂಕರ್ ಹಾಗೂ ಮಾಯಾವತಿ ಜೋಡಿ, ಕವಿ ಕುವೆಂಪು ಅವರ ಕನಸಿನ ಮಂತ್ರ ಮಾಂಗಲ್ಯ ಮದುವೆ ಮಾಡಿಕೊಂಡು ಗಮನ ಸೆಳೆದಿದೆ.ಹೌದು, ಗೊಡ್ಡು ಸಂಪ್ರದಾಯಗಳನ್ನು ಬದಿಗೊತ್ತಿ, ಮನುಷ್ಯ ಜೀವನವೇ ಒಂದು ಸುಮುಹೂರ್ತ ಎಂದು ಎಂದು ಬಗೆದು ಶಂಕರ್ ಹಾಗೂ ಮಾಯಾತಿ ಜೋಡಿ ಮಂತ್ರ ಮಾಂಗಲ್ಯ ಮದುವೆ ಮಾಡಿಕೊಂಡಿತು.
ರಾಷ್ಟ್ರಕವಿ ಕುವೆಂಪುರವರ ಕನಸಿನ ಮಂತ್ರ ಮಾಂಗಲ್ಯ ಸರಳ ವಿವಾಹ ವಿಧಾನದ ಮೂಲಕ, ಕಾರಟಗಿ ತಾಲೂಕಿನ ಗುಡೂರು ಗ್ರಾಮದ ಹುಲಿಗೆಮ್ಮ ಅವರ ಪುತ್ರ ಶಂಕರ್ ಹಾಗೂ ಸಿರಗುಪ್ಪ ತಾಲೂಕಿನ ಇಬ್ರಾಹಿಂಪುರದ ಯಂಕಪ್ಪ ಅವರ ಸುಪುತ್ರಿ ಮಾಯಾವತಿ ಅವರು ವರನ ಸ್ವಗೃಹದಲ್ಲಿ ಸತಿಪತಿಗಳಾದರು. ಇಶಂಕರ್ ಹಾಗೂ ಮಾಯಾವತಿ ಅವರ ಮಂತ್ರ ಮಾಂಗಲ್ಯ ವಿವಾಹಕ್ಕೆ, ವಿಜ್ಞಾನ ಶಿಕ್ಷಕರಾದ ದೇವೇಂದ್ರಪ್ಪ ಜಿರ್ಲಿ ಸಾಕ್ಷಿಯಾದರು. ವಧುವರರಿಗೆ ವಿವಾಹ ಸಂಹಿತೆ ಹಾಗೂ ಆಹಾರ ಸಂಹಿತೆ ಬೋಧನೆ ಮಾಡಲಾಯಿತು.
ಕಾರ್ಮಿಕ ಹೋರಾಟಗಾರರ ಮಂತ್ರ ಮಾಂಗಲ್ಯ- ವೈಚಾರಿಕ ವಿವಾಹ
ಕುವೆಂಪುರವರು ಸ್ವತಃ ತಮ್ಮ ಮಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮತ್ತು ರಾಜೇಶ್ವರಿ ಅವರ ಮದುವೆಯನ್ನು ಇದೇ ಮಾದರಿಯಲ್ಲಿ ಮಾಡಿ ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದಾರೆ. ಅಂದಿನಿಂದ ಇಂದಿನವರೆಗೆ ಸಾವಿರಾರು ಜನರು ಈ ವಿಧಾನವನ್ನು ಅನುಸರಿಸಿ ವಿವಾಹವಾಗಿದ್ದಾರೆ. ಈ ರೀತಿ ಸರಳ ವಿವಾಹದಿಂದ ಲಕ್ಷಾಂತರ ರೂ. ಉಳಿತಾಯವಾಗುತ್ತದೆ ಎಂದು ಜೆರ್ಲಿ ಈ ವೇಳೆ ಹೇಳಿದರು.
ಕುವೆಂಪು ಅವರು 1960 ರ ದಶಕದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ. ವರದಕ್ಷಿಣೆ ತೆಗೆದುಕೊಳ್ಳದೆ, ಶಾಸ್ತ್ರಾಚಾರಗಳಿಗೆ ಕಟ್ಟು ಬೀಳದೆ, ಅಂತಸ್ತಿನ ಪ್ರದರ್ಶನ ಮಾಡಲು ದುಂದು ವೆಚ್ಚ ಮಾಡದೇ ಸರಳವಾಗಿ ಸತಿ- ಪತಿಗಳಾಗುವುದೇ ಮಂತ್ರ ಮಾಂಗಲ್ಯ ವಿವಾಹ ಪದ್ದತಿಯಾಗಿದೆ.
ರಾಷ್ಟ್ರಕವಿ ಕುವೆಂಪುರವರ ಕನಸಿನ ಮಂತ್ರ ಮಾಂಗಲ್ಯ ಸರಳ ವಿವಾಹ ವಿಧಾನದ ಮೂಲಕ, ಕಾರಟಗಿ ತಾಲೂಕಿನ ಗುಡೂರು ಗ್ರಾಮದ ಹುಲಿಗೆಮ್ಮ ಅವರ ಪುತ್ರ ಶಂಕರ್ ಹಾಗೂ ಸಿರಗುಪ್ಪ ತಾಲೂಕಿನ ಇಬ್ರಾಹಿಂಪುರದ ಯಂಕಪ್ಪ ಅವರ ಸುಪುತ್ರಿ ಮಾಯಾವತಿ ಅವರು ವರನ ಸ್ವಗೃಹದಲ್ಲಿ ಸತಿಪತಿಗಳಾದರು. ಇಶಂಕರ್ ಹಾಗೂ ಮಾಯಾವತಿ ಅವರ ಮಂತ್ರ ಮಾಂಗಲ್ಯ ವಿವಾಹಕ್ಕೆ, ವಿಜ್ಞಾನ ಶಿಕ್ಷಕರಾದ ದೇವೇಂದ್ರಪ್ಪ ಜಿರ್ಲಿ ಸಾಕ್ಷಿಯಾದರು. ವಧುವರರಿಗೆ ವಿವಾಹ ಸಂಹಿತೆ ಹಾಗೂ ಆಹಾರ ಸಂಹಿತೆ ಬೋಧನೆ ಮಾಡಲಾಯಿತು.
ಕಾರ್ಮಿಕ ಹೋರಾಟಗಾರರ ಮಂತ್ರ ಮಾಂಗಲ್ಯ- ವೈಚಾರಿಕ ವಿವಾಹ
ಕುವೆಂಪುರವರು ಸ್ವತಃ ತಮ್ಮ ಮಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮತ್ತು ರಾಜೇಶ್ವರಿ ಅವರ ಮದುವೆಯನ್ನು ಇದೇ ಮಾದರಿಯಲ್ಲಿ ಮಾಡಿ ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದಾರೆ. ಅಂದಿನಿಂದ ಇಂದಿನವರೆಗೆ ಸಾವಿರಾರು ಜನರು ಈ ವಿಧಾನವನ್ನು ಅನುಸರಿಸಿ ವಿವಾಹವಾಗಿದ್ದಾರೆ. ಈ ರೀತಿ ಸರಳ ವಿವಾಹದಿಂದ ಲಕ್ಷಾಂತರ ರೂ. ಉಳಿತಾಯವಾಗುತ್ತದೆ ಎಂದು ಜೆರ್ಲಿ ಈ ವೇಳೆ ಹೇಳಿದರು.
ಕುವೆಂಪು ಅವರು 1960 ರ ದಶಕದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ. ವರದಕ್ಷಿಣೆ ತೆಗೆದುಕೊಳ್ಳದೆ, ಶಾಸ್ತ್ರಾಚಾರಗಳಿಗೆ ಕಟ್ಟು ಬೀಳದೆ, ಅಂತಸ್ತಿನ ಪ್ರದರ್ಶನ ಮಾಡಲು ದುಂದು ವೆಚ್ಚ ಮಾಡದೇ ಸರಳವಾಗಿ ಸತಿ- ಪತಿಗಳಾಗುವುದೇ ಮಂತ್ರ ಮಾಂಗಲ್ಯ ವಿವಾಹ ಪದ್ದತಿಯಾಗಿದೆ.