Huligemma Devi Temple: ಹುಲಿಗಿಯ ಹುಲಿಗೆಮ್ಮನ ಸನ್ನಿಧಿಯಲ್ಲಿ ಅದ್ಧೂರಿ ಗೋಪೂಜೆ; ಹಸುವಿಗೆ ಪೂಜೆ ಸಲ್ಲಿಸುವ ಮೂಲಕ ದೀಪಾವಳಿ ಆಚರಣೆ
1005 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿದೀಪಗಳ ಹಬ್ಬ ದೀಪಾವಳಿಯ ಬಲಿ ಪಾಡ್ಯಮಿ ದಿನ ಗೋವುಗಳಿಗೆ ಪೂಜೆ ಮಾಡುವುದು ಪ್ರತೀತಿ. ಅದರಂತೆ ಕೊಪ್ಪಳ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು. ಮುಜರಾಯಿ ಇಲಾಖೆಯಿಂದಲೇ ದೇವಸ್ಥಾನಗಳಲ್ಲಿ ಗೋಪೂಜೆಗೆ ಆದೇಶಿಸಿದ್ದರಿಂದ ಗೋಪೂಜೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಗೋಪೂಜೆ ಮೂಲಕ ದೇವಸ್ಥಾನದ ಅರ್ಚಕರು. ಸಿಬ್ಬಂದಿ ಹಾಗು ಗ್ರಾಮಸ್ಥರು ದೀಪಾವಳಿಯನ್ನು ಸಡಗರದಿಂದ ಆಚರಿಸಿದರು.
ದೇವಸ್ಥಾನಕ್ಕೆ ಬುಧವಾರ ಸಂಜೆ ಆಕಳೊಂದನ್ನು ತಂದು ವಿಶೇಷ ಅಲಂಕಾರ ಮಾಡಲಾಗಿತ್ತು. ಬಳಿಕ ಹುಲಿಗೆಮ್ಮ ದೇಗುಲದ ಆವರಣದಲ್ಲಿ ಹಸುವಿಗೆ ಪೂಜೆ ಮಾಡಿ, ಮಹಿಳೆಯರು ಆರತಿ ಬೆಳಗಿ, ದವಸ ಧಾನ್ಯವನ್ನು ತಿನ್ನಲು ನೀಡಿದರು. ಪ್ರತಿ ವರ್ಷ ಹುಲಿಗೆಮ್ಮ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಗುತ್ತಿತ್ತು. ಈ ವರ್ಷ ಸರಕಾರವೇ ಹಸುವನ್ನು ಪೂಜಿಸಲು ಆದೇಶಿಸಿದ ಹಿನ್ನೆಲೆ ಗೋಪೂಜೆ ಮಾಡಲಾಗಿದೆ.
ದೀಪಾವಳಿ ವಿಶೇಷ: ಹೊಲದಲ್ಲಿ ಹೂವುಗಳನ್ನು ಕಿತ್ತು ರಂಗೋಲಿ ಹಾಕುವ ಲಂಬಾಣಿ ಯುವತಿಯರು
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಮ್ಯಾನೇಜರ್ ಜಗದೀಶ್, ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ವಿಶೇಷ ಸ್ಥಾನಮಾನ, ಪೂಜನೀಯ ಭಾವನೆ ಇದೆ. ಸಾಮಾನ್ಯವಾಗಿ ಜೀವಿಗಳು ಉಸಿರಾಟ ವೇಳೆಯಲ್ಲಿ ಆಮ್ಲಜನಕವನ್ನು ಸೇವಿಸಿ ಇಂಗಾಲದ ಡೈ ಆಕ್ಸೈಡ್ ಹೊರ ಬಿಡುತ್ತವೆ. ಆದರೆ, ಗೋವು ಮಾತ್ರ ಆಮ್ಲಜನಕ ಸೇವಿಸಿ ಆಮ್ಲಜನಕವನ್ನೆ ಹೊರಬಿಡುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಇನ್ನು, ಹುಲಿಗಿ ಗ್ರಾಮಸ್ಥ ಶಶಿಧರ್ ಮೇಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಮನೆ ಮನೆಯಲ್ಲಿಯೂ ಗೋವುಗಳಿರುತ್ತಿದ್ದವು. ಆದರೆ, ಕಾಲ ಬದಲಾಗಿದೆ. ಗೋವುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಗೋವು ಸಂಪತ್ತು ಸಹ ಕಡಿಮೆಯಾಗುತ್ತಿದೆ, ಈ ಸಂದರ್ಭದಲ್ಲಿ ಗೋವುಗಳನ್ನು ಪೂಜಿಸಲು ಸರಕಾರ ನೀಡಿದ ಆದೇಶ ಸ್ವಾಗತಾರ್ಹವಾಗಿದೆ. ಗೋವು ಸಂತತಿ ಬೆಳೆಯಬೇಕು. ಗೋವುಗಳ ಪೂಜೆಗಳು ಮುಂದುವರಿಯಬೇಕೆಂದು ಹೇಳಿದರು.
ದೇವಸ್ಥಾನಕ್ಕೆ ಬುಧವಾರ ಸಂಜೆ ಆಕಳೊಂದನ್ನು ತಂದು ವಿಶೇಷ ಅಲಂಕಾರ ಮಾಡಲಾಗಿತ್ತು. ಬಳಿಕ ಹುಲಿಗೆಮ್ಮ ದೇಗುಲದ ಆವರಣದಲ್ಲಿ ಹಸುವಿಗೆ ಪೂಜೆ ಮಾಡಿ, ಮಹಿಳೆಯರು ಆರತಿ ಬೆಳಗಿ, ದವಸ ಧಾನ್ಯವನ್ನು ತಿನ್ನಲು ನೀಡಿದರು. ಪ್ರತಿ ವರ್ಷ ಹುಲಿಗೆಮ್ಮ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಗುತ್ತಿತ್ತು. ಈ ವರ್ಷ ಸರಕಾರವೇ ಹಸುವನ್ನು ಪೂಜಿಸಲು ಆದೇಶಿಸಿದ ಹಿನ್ನೆಲೆ ಗೋಪೂಜೆ ಮಾಡಲಾಗಿದೆ.
ದೀಪಾವಳಿ ವಿಶೇಷ: ಹೊಲದಲ್ಲಿ ಹೂವುಗಳನ್ನು ಕಿತ್ತು ರಂಗೋಲಿ ಹಾಕುವ ಲಂಬಾಣಿ ಯುವತಿಯರು
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಮ್ಯಾನೇಜರ್ ಜಗದೀಶ್, ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ವಿಶೇಷ ಸ್ಥಾನಮಾನ, ಪೂಜನೀಯ ಭಾವನೆ ಇದೆ. ಸಾಮಾನ್ಯವಾಗಿ ಜೀವಿಗಳು ಉಸಿರಾಟ ವೇಳೆಯಲ್ಲಿ ಆಮ್ಲಜನಕವನ್ನು ಸೇವಿಸಿ ಇಂಗಾಲದ ಡೈ ಆಕ್ಸೈಡ್ ಹೊರ ಬಿಡುತ್ತವೆ. ಆದರೆ, ಗೋವು ಮಾತ್ರ ಆಮ್ಲಜನಕ ಸೇವಿಸಿ ಆಮ್ಲಜನಕವನ್ನೆ ಹೊರಬಿಡುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಇನ್ನು, ಹುಲಿಗಿ ಗ್ರಾಮಸ್ಥ ಶಶಿಧರ್ ಮೇಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಮನೆ ಮನೆಯಲ್ಲಿಯೂ ಗೋವುಗಳಿರುತ್ತಿದ್ದವು. ಆದರೆ, ಕಾಲ ಬದಲಾಗಿದೆ. ಗೋವುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಗೋವು ಸಂಪತ್ತು ಸಹ ಕಡಿಮೆಯಾಗುತ್ತಿದೆ, ಈ ಸಂದರ್ಭದಲ್ಲಿ ಗೋವುಗಳನ್ನು ಪೂಜಿಸಲು ಸರಕಾರ ನೀಡಿದ ಆದೇಶ ಸ್ವಾಗತಾರ್ಹವಾಗಿದೆ. ಗೋವು ಸಂತತಿ ಬೆಳೆಯಬೇಕು. ಗೋವುಗಳ ಪೂಜೆಗಳು ಮುಂದುವರಿಯಬೇಕೆಂದು ಹೇಳಿದರು.