ಗಂಗಾವತಿ: ಅಯೋಧ್ಯೆ-ಅಂಜನಾದ್ರಿ ನಡುವೆ ರೈಲು ಸೇವೆಗೆ ಮನವಿ, ಸಂಸದರ ಭರವಸೆ
1150 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಜನವರಿಯಲ್ಲಿ ಲೋಕಾರ್ಪಣೆಯಾಗಲಿದೆ. ಇದೇ ಸಮಯದಲ್ಲಿ ಶ್ರೀರಾಮನ ಬಂಟ ಹನುಮ ಸ್ಥಳದಿಂದ ಅಯೋಧ್ಯೆಗೆ ಶ್ರೀರಾಮಾಂಜನೇಯ ರೈಲು ಓಡುವ ಸಿದ್ದತೆ ನಡೆದಿದೆ. ಕೇಂದ್ರ ಸರಕಾರದ ರೈಲ್ವೆ ಸಚಿವರು ಒಪ್ಪಿಕೊಂಡರೆ, ಜನವರಿಯಲ್ಲಿ ಅಂಜನಾದ್ರಿಯಿಂದ ಅಯೋಧ್ಯೆಗೆ ನೇರ ರೈಲು ಸಂಚರಿಸಲಿದೆ. ಈ ಬಗ್ಗೆ ಇಲ್ಲಿನ ಭಾಗದ ಜನತೆ ಆಶಯ ಭಾವನೆ ಹೊಂದಿದ್ದಾರೆ.
ಶ್ರೀರಾಮನ ಭಕ್ತ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿಯು ಈಗಾಗಲೇ ಅಯೋಧ್ಯೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮ ಸ್ಥಳ ಅಯೋಧ್ಯೆ ಹಾಗೂ ಶ್ರೀಹನುಮನ ಜನ್ಮ ಸ್ಥಳ ಅಂಜನಾದ್ರಿ ಮಧ್ಯೆ ಸಂಪರ್ಕ ಕೊಂಡಿಯಾಗಿ ರೈಲು ಓಡಾಟದ ಸಿದ್ದತೆ ನಡೆದಿದೆ. ಈ ಕುರಿತು ಈಗಾಗಲೇ ಹಲವು ಬಾರಿ ಪತ್ರ ವ್ಯವಾಹಾರ ನಡೆದಿದೆ.
ಅಂಜನಾದ್ರಿಯಿಂದ 12 ಕಿಮೀ ದೂರದಲ್ಲಿರುವ ಗಂಗಾವತಿಯವರೆಗೂ ಈಗ ರೈಲು ಮಾರ್ಗದ ವ್ಯವಸ್ಥೆ ಇದೆ. ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಈ ಭಾಗದಿಂದ ಅಯೋಧ್ಯೆಗೆ ಹೋಗಲು ರೈಲು ವ್ಯವಸ್ಥೆ ಮಾಡಲಾಗುವುದು. ಈ ರೈಲು ನಿರಂತರವಾಗಿ ಓಡಾಡುವಂತೆ ಹೊಸ ರೈಲು ಆರಂಭಕ್ಕೆ ಪ್ರಯತ್ನ ನಡೆದಿದೆ. ಈ ಕುರಿತು ಮಾತನಾಡಿದ ಸಂಸದ ಸಂಗಣ್ಣ ಕರಡಿ, ''ಕೇಂದ್ರದ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗಿದೆ. ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮತ್ತೊಮ್ಮೆ ರೈಲ್ವೆ ಸಚಿವರನ್ನು ಭೇಟಿಯಾಗಿ ರೈಲು ಆರಂಭಿಸಲು ಮನವಿ ಮಾಡಿಕೊಳ್ಳಲಾಗುವುದು. ಬಹುತೇಕ ರೈಲು ಆರಂಭವಾಗುವ ಭರವಸೆ ಇದೆ'' ಎಂದು ಹೇಳಿದ್ದಾರೆ.
ಅಂಜನಾದ್ರಿಗೆ ರಾಜ್ಯದ ಭಕ್ತರಿಗಿಂತ ಉತ್ತರಭಾರತ ಭಕ್ತರು ಅಧಿಕ. ರಾಮಾಂಜನೇಯ ರೈಲು ಆರಂಭವಾಗುವುದರಿಂದ ಬರುವ ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳು ಒಂದಾಗಲಿವೆ. ರೈಲು ಆರಂಭದಿಂದಾಗಿ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಈ ಕುರಿತು ಮುಂದಿನ ತಿಂಗಳೊಳಗಾಗಿ ಎಲ್ಲವೂ ಸ್ಪಷ್ಟವಾಗಲಿದೆ. ಈ ಭಾಗದ ಜನರ ಕನಸಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.
ಶ್ರೀರಾಮನ ಭಕ್ತ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿಯು ಈಗಾಗಲೇ ಅಯೋಧ್ಯೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮ ಸ್ಥಳ ಅಯೋಧ್ಯೆ ಹಾಗೂ ಶ್ರೀಹನುಮನ ಜನ್ಮ ಸ್ಥಳ ಅಂಜನಾದ್ರಿ ಮಧ್ಯೆ ಸಂಪರ್ಕ ಕೊಂಡಿಯಾಗಿ ರೈಲು ಓಡಾಟದ ಸಿದ್ದತೆ ನಡೆದಿದೆ. ಈ ಕುರಿತು ಈಗಾಗಲೇ ಹಲವು ಬಾರಿ ಪತ್ರ ವ್ಯವಾಹಾರ ನಡೆದಿದೆ.
ಅಂಜನಾದ್ರಿಯಿಂದ 12 ಕಿಮೀ ದೂರದಲ್ಲಿರುವ ಗಂಗಾವತಿಯವರೆಗೂ ಈಗ ರೈಲು ಮಾರ್ಗದ ವ್ಯವಸ್ಥೆ ಇದೆ. ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಈ ಭಾಗದಿಂದ ಅಯೋಧ್ಯೆಗೆ ಹೋಗಲು ರೈಲು ವ್ಯವಸ್ಥೆ ಮಾಡಲಾಗುವುದು. ಈ ರೈಲು ನಿರಂತರವಾಗಿ ಓಡಾಡುವಂತೆ ಹೊಸ ರೈಲು ಆರಂಭಕ್ಕೆ ಪ್ರಯತ್ನ ನಡೆದಿದೆ. ಈ ಕುರಿತು ಮಾತನಾಡಿದ ಸಂಸದ ಸಂಗಣ್ಣ ಕರಡಿ, ''ಕೇಂದ್ರದ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗಿದೆ. ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮತ್ತೊಮ್ಮೆ ರೈಲ್ವೆ ಸಚಿವರನ್ನು ಭೇಟಿಯಾಗಿ ರೈಲು ಆರಂಭಿಸಲು ಮನವಿ ಮಾಡಿಕೊಳ್ಳಲಾಗುವುದು. ಬಹುತೇಕ ರೈಲು ಆರಂಭವಾಗುವ ಭರವಸೆ ಇದೆ'' ಎಂದು ಹೇಳಿದ್ದಾರೆ.
ಅಂಜನಾದ್ರಿಗೆ ರಾಜ್ಯದ ಭಕ್ತರಿಗಿಂತ ಉತ್ತರಭಾರತ ಭಕ್ತರು ಅಧಿಕ. ರಾಮಾಂಜನೇಯ ರೈಲು ಆರಂಭವಾಗುವುದರಿಂದ ಬರುವ ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳು ಒಂದಾಗಲಿವೆ. ರೈಲು ಆರಂಭದಿಂದಾಗಿ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಈ ಕುರಿತು ಮುಂದಿನ ತಿಂಗಳೊಳಗಾಗಿ ಎಲ್ಲವೂ ಸ್ಪಷ್ಟವಾಗಲಿದೆ. ಈ ಭಾಗದ ಜನರ ಕನಸಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.