ಕೊಪ್ಪಳ: ಬರದ ಹಿನ್ನೆಲೆ ನರೇಗಾ ಯೋಜನೆಯಲ್ಲಿ ಕೂಲಿಯ ದಿನಗಳನ್ನು ಹೆಚ್ಚಿಸಲು ಆಗ್ರಹ, ಗುಳೆ ಹೊರಟ ಜನ
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿ
ಕೊಪ್ಪಳ ಜಿಲ್ಲೆಯ ಭೀಕರ ಬರ. ಬರ ಹಿನ್ನೆಲೆಯಲ್ಲಿ ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಇದರಿಂದಾಗಿ ಜನರು ಗುಳೆ ಹೋಗುತ್ತಿದ್ದಾರೆ. ಕೂಲಿಕಾರರಿಗೆ ಉದ್ಯೋಗ ನೀಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲಾಡಳಿತ ಕೆಲಸ ನೀಡುತ್ತಿದೆ. ಆದರೆ ಈ ಬಾರಿ ಕೇಂದ್ರ ಸರಕಾರ ನಿಗಿದಿ ಮಾಡಿದ ವರ್ಷಕ್ಕೆ 100 ದಿನ ಕೂಲಿಯ ದಿನ ಮುಗಿದಿದೆ. ಇದರಿಂದಾಗಿ ಬರದ ಮಧ್ಯೆ ಜನರಿಗೆ ಉದ್ಯೋಗವಿಲ್ಲದಂತಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಗಳು ಕೈಕೊಟ್ಟಿವೆ. ಜಿಲ್ಲೆಯಲ್ಲಿ ಬೆಳೆ ಇಲ್ಲ, ಜನರಿಗೆ ಉದ್ಯೋಗವಿಲ್ಲ. ಉದ್ಯೋಗವಿಲ್ಲದೆ ಜನರು ಉದ್ಯೋಗ ಅರಸಿಕೊಂಡು ಗುಳೆ ಹೋಗಿದ್ದಾರೆ. ಈ ಮಧ್ಯೆ ಕೂಲಿಕಾರರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದಲೂ ಕೂಲಿ ಬೇಕೆಂದವರಿಗೆ ಉದ್ಯೋಗ ಸಿಗುತ್ತಿಲ್ಲ. ಒಂದು ಕಡೆ ಉದ್ಯೋಗವಿಲ್ಲ. ಜನರಿಗೆ ಉದ್ಯೋಗವಿಲ್ಲ. ರಾಜ್ಯ ಸರಕಾರವು ಪ್ರತಿ ಕೂಲಿಕಾರರಿಗೆ 100 ದಿನದಿಂದ 150 ದಿನಕ್ಕೆ ಹೆಚ್ಚಿಸಬೇಕು. ಇಲ್ಲವೇ ರಾಜ್ಯ ಸರಕಾರವೇ ಬರ ಕಾಮಗಾರಿ ಆರಂಭಿಸಬೇಕು. ಈಗ ನೀಡುತ್ತಿರುವ ಆಹಾರ ಧಾನ್ಯ ಹೆಚ್ಚಿಸಬೇಕು. ಅಕ್ಕಿಯೊಂದಿಗೆ ಬೇರೆ ಬೇರೆ ಧಾನ್ಯ ನೀಡಬೇಕೆಂದು ಕೂಲಿಕಾರರು ಆಗ್ರಹಿಸುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ 100 ದಿನ ಉದ್ಯೋಗ ಮಾಡಿದ 3906 ಕುಟುಂಬಗಳಿವೆ. 81-99 ದಿನಗಳಲ್ಲಿ ಕೆಲಸ ಮಾಡಿದ 33292 ಕುಟುಂಬಗಳಿವೆ. 90 ದಿನಗಳ ಕೆಲಸ ಮಾಡಿದವರಿಗೆ ಉದ್ಯೋಗ ನೀಡಲು ಆಗುವುದಿಲ್ಲ. ಈಗಾಗಲೇ ಮಾರ್ಚ್ ತಿಂಗಳಲ್ಲಿದ್ದೇವೆ. ಮಾರ್ಚ್ 20ರ ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಲು ಆಗುವುದಿಲ್ಲ. ಮುಂದಿನ ಏಪ್ರಿಲ್ ನಿಂದ ಕೂಲಿಕಾರರಿಗೆ ಉದ್ಯೋಗ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ ತಿಳಿಸಿದ್ದಾರೆ.
ಭೀಕರ ಬರ ಹಿನ್ನೆಲೆಯಲ್ಲಿ ಈ ವರ್ಷ ನರೇಗಾ ಯೋಜನೆಯಲ್ಲಿ ನೀಡಿದ ಟಾರ್ಗೆಟ್ ಗಿಂತ ಅಧಿಕ ಪ್ರಮಾಣದಲ್ಲಿ ಮಾನವ ದಿನಗಳಲ್ಲಿ ಸೃಜಿಸಲಾಗಿದೆ. ಈ ವರ್ಷ 82 ಲಕ್ಷ ಮಾನವ ದಿನಗಳ ಉದ್ಯೋಗ ನೀಡಬೇಕೆಂಬ ಗುರಿ ಇತ್ತು. ಅದಕ್ಕೆ 93.24 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದರಿಂದಾಗಿ ಶೇ 113 ರಷ್ಟು ಸಾಧನೆ ಮಾಡಲಾಗಿದೆ. ಮುಂದಿನ ವರ್ಷಕ್ಕೆ ಈ ಗುರಿಯನ್ನು 95 ಲಕ್ಷ ಮಾನವ ದಿನಗಳ ಕೆಲಸದ ಟಾರ್ಗೆಟ್ ಇಟ್ಟುಕೊಳ್ಳಲಾಗಿದೆ. ಈ ಕುರಿತು ಏಪ್ರಿಲ್ ತಿಂಗಳ ನಂತರ ಹೊಸದಾಗಿ ಉದ್ಯೋಗ ನೀಡಲಾಗುವುದು ಎಂದು ಜಿಪಂ ಸಿಇಒ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಗಳು ಕೈಕೊಟ್ಟಿವೆ. ಜಿಲ್ಲೆಯಲ್ಲಿ ಬೆಳೆ ಇಲ್ಲ, ಜನರಿಗೆ ಉದ್ಯೋಗವಿಲ್ಲ. ಉದ್ಯೋಗವಿಲ್ಲದೆ ಜನರು ಉದ್ಯೋಗ ಅರಸಿಕೊಂಡು ಗುಳೆ ಹೋಗಿದ್ದಾರೆ. ಈ ಮಧ್ಯೆ ಕೂಲಿಕಾರರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದಲೂ ಕೂಲಿ ಬೇಕೆಂದವರಿಗೆ ಉದ್ಯೋಗ ಸಿಗುತ್ತಿಲ್ಲ. ಒಂದು ಕಡೆ ಉದ್ಯೋಗವಿಲ್ಲ. ಜನರಿಗೆ ಉದ್ಯೋಗವಿಲ್ಲ. ರಾಜ್ಯ ಸರಕಾರವು ಪ್ರತಿ ಕೂಲಿಕಾರರಿಗೆ 100 ದಿನದಿಂದ 150 ದಿನಕ್ಕೆ ಹೆಚ್ಚಿಸಬೇಕು. ಇಲ್ಲವೇ ರಾಜ್ಯ ಸರಕಾರವೇ ಬರ ಕಾಮಗಾರಿ ಆರಂಭಿಸಬೇಕು. ಈಗ ನೀಡುತ್ತಿರುವ ಆಹಾರ ಧಾನ್ಯ ಹೆಚ್ಚಿಸಬೇಕು. ಅಕ್ಕಿಯೊಂದಿಗೆ ಬೇರೆ ಬೇರೆ ಧಾನ್ಯ ನೀಡಬೇಕೆಂದು ಕೂಲಿಕಾರರು ಆಗ್ರಹಿಸುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ 100 ದಿನ ಉದ್ಯೋಗ ಮಾಡಿದ 3906 ಕುಟುಂಬಗಳಿವೆ. 81-99 ದಿನಗಳಲ್ಲಿ ಕೆಲಸ ಮಾಡಿದ 33292 ಕುಟುಂಬಗಳಿವೆ. 90 ದಿನಗಳ ಕೆಲಸ ಮಾಡಿದವರಿಗೆ ಉದ್ಯೋಗ ನೀಡಲು ಆಗುವುದಿಲ್ಲ. ಈಗಾಗಲೇ ಮಾರ್ಚ್ ತಿಂಗಳಲ್ಲಿದ್ದೇವೆ. ಮಾರ್ಚ್ 20ರ ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಲು ಆಗುವುದಿಲ್ಲ. ಮುಂದಿನ ಏಪ್ರಿಲ್ ನಿಂದ ಕೂಲಿಕಾರರಿಗೆ ಉದ್ಯೋಗ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ ತಿಳಿಸಿದ್ದಾರೆ.
ಭೀಕರ ಬರ ಹಿನ್ನೆಲೆಯಲ್ಲಿ ಈ ವರ್ಷ ನರೇಗಾ ಯೋಜನೆಯಲ್ಲಿ ನೀಡಿದ ಟಾರ್ಗೆಟ್ ಗಿಂತ ಅಧಿಕ ಪ್ರಮಾಣದಲ್ಲಿ ಮಾನವ ದಿನಗಳಲ್ಲಿ ಸೃಜಿಸಲಾಗಿದೆ. ಈ ವರ್ಷ 82 ಲಕ್ಷ ಮಾನವ ದಿನಗಳ ಉದ್ಯೋಗ ನೀಡಬೇಕೆಂಬ ಗುರಿ ಇತ್ತು. ಅದಕ್ಕೆ 93.24 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದರಿಂದಾಗಿ ಶೇ 113 ರಷ್ಟು ಸಾಧನೆ ಮಾಡಲಾಗಿದೆ. ಮುಂದಿನ ವರ್ಷಕ್ಕೆ ಈ ಗುರಿಯನ್ನು 95 ಲಕ್ಷ ಮಾನವ ದಿನಗಳ ಕೆಲಸದ ಟಾರ್ಗೆಟ್ ಇಟ್ಟುಕೊಳ್ಳಲಾಗಿದೆ. ಈ ಕುರಿತು ಏಪ್ರಿಲ್ ತಿಂಗಳ ನಂತರ ಹೊಸದಾಗಿ ಉದ್ಯೋಗ ನೀಡಲಾಗುವುದು ಎಂದು ಜಿಪಂ ಸಿಇಒ ತಿಳಿಸಿದ್ದಾರೆ.