ಸಿದ್ದರಾಮಯ್ಯ ಸಾಮಾನ್ಯ ಮುಖ್ಯಮಂತ್ರಿ ಅಲ್ಲ; ಕಾದು ನೋಡೋಣ; ಜನಾರ್ದನ ರೆಡ್ಡಿ
1077 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ಸಿದ್ದರಾಮಯ್ಯ ಸಾಮಾನ್ಯ ಮುಖ್ಯಮಂತ್ರಿ ಅಲ್ಲ. ಅವರು ಹಣಕಾಸು ಖಾತೆಯನ್ನು ನಿರ್ವಹಿಸಿದವರು. ಈಗ ಗ್ಯಾರಂಟಿ ಘೋಷಣೆಗಳನ್ನು ಯಾವ ರೀತಿ ಅನುಷ್ಠಾನಗೊಳಿಸುತ್ತಾರೆ ಎಂಬುವುದನ್ನು ಕಾದು ನೋಡೋಣ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಗಂಗಾವತಿಯಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಹಾಗು ಸಮವಸ್ತ್ರ ವಿತರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸದ ತಕ್ಷಣ ಗ್ಯಾರಂಟಿ ಯೋಜನೆ ಜಾರಿಯಾಗುತ್ತದೆ ಎಂದುಕೊಂಡಿದ್ದೇವು. ಆದರೆ, ಅದು ಆಗಲಿಲ್ಲ. ಇದಾದ ಬಳಿಕ ಜೂನ್ 1 ರಂದು ಜಾರಿ ಆಗುತ್ತೆ ಅಂತಾ ಹೇಳಿದ್ದರು. ಅದು ಆಗಲಿಲ್ಲ ಎಂದರು.
ಇದೀಗ ಗ್ಯಾರಂಟಿ ಯೋಜನೆಗಳ ಜಾರಿಯನ್ನು ಮುಂದೂಡಲಾಗುತ್ತಿದೆ. ಸಿದ್ದರಾಮಯ್ಯ ಅವರು ಸಭೆ ಮೇಲೆ ಸಭೆ ಮಾಡ್ತಾ ಇದ್ದಾರೆ. ಇನ್ನೂ ಬಹಳಷ್ಟು ತೊಂದರೆಗಳಿವೆ. ನಾವು ಕಾದು ನೋಡುತ್ತೇವೆ. ಅದು ಹೇಗೆ ಜಾರಿ ಮಾಡುತ್ತಾರೆ ಅಂತಾ, ಕೊಟ್ಟ ಮಾತು ಉಳಿಸಿಕೊಳ್ತಾರೆ ಅನ್ನೋದನ್ನು ನಾನು ಕಾದು ನೋಡ್ತೆನೆ. ಅಭಿವೃದ್ಧಿ ಹೇಗೆ ಮಾಡ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.
ಗಂಗಾವತಿಯಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಹಾಗು ಸಮವಸ್ತ್ರ ವಿತರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸದ ತಕ್ಷಣ ಗ್ಯಾರಂಟಿ ಯೋಜನೆ ಜಾರಿಯಾಗುತ್ತದೆ ಎಂದುಕೊಂಡಿದ್ದೇವು. ಆದರೆ, ಅದು ಆಗಲಿಲ್ಲ. ಇದಾದ ಬಳಿಕ ಜೂನ್ 1 ರಂದು ಜಾರಿ ಆಗುತ್ತೆ ಅಂತಾ ಹೇಳಿದ್ದರು. ಅದು ಆಗಲಿಲ್ಲ ಎಂದರು.
ಇದೀಗ ಗ್ಯಾರಂಟಿ ಯೋಜನೆಗಳ ಜಾರಿಯನ್ನು ಮುಂದೂಡಲಾಗುತ್ತಿದೆ. ಸಿದ್ದರಾಮಯ್ಯ ಅವರು ಸಭೆ ಮೇಲೆ ಸಭೆ ಮಾಡ್ತಾ ಇದ್ದಾರೆ. ಇನ್ನೂ ಬಹಳಷ್ಟು ತೊಂದರೆಗಳಿವೆ. ನಾವು ಕಾದು ನೋಡುತ್ತೇವೆ. ಅದು ಹೇಗೆ ಜಾರಿ ಮಾಡುತ್ತಾರೆ ಅಂತಾ, ಕೊಟ್ಟ ಮಾತು ಉಳಿಸಿಕೊಳ್ತಾರೆ ಅನ್ನೋದನ್ನು ನಾನು ಕಾದು ನೋಡ್ತೆನೆ. ಅಭಿವೃದ್ಧಿ ಹೇಗೆ ಮಾಡ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.