ಗಂಗಾವತಿಯ ನ್ಯಾಯಾಲಯದಲ್ಲಿ ಲೋಕಾ ಅದಾಲತ್, ಒಂದಾಗಿ ಹೊರಟರು ವಿಚ್ಛೇದನಕ್ಕೆ ಬಂದ ಜೋಡಿಗಳು
1108 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ಸಂಸಾರಿಕ ಜೀವನದಲ್ಲಿ ಸಣ್ಣ ಪುಟ್ಟ ವೈಮನಸ್ಸಿನಿಂದಾಗಿ ಜೊತೆಯಾಗಿ ಬಾಳಲು ಆಗೋದಿಲ್ಲ ಎಂದು ನಿರ್ಧರಿಸಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು. ಅದರಲ್ಲಿ ಒಂದು ಜೋಡಿ 22 ವರ್ಷದಿಂದಲೂ ಜೊತೆಯಾಗಿ ಬಾಳಲು ಆಗೋದಿಲ್ಲ ಎಂದುಕೊಂಡಿದ್ದರು. ಆದರೆ ನ್ಯಾಯಾಧೀಶರ ಸಮಾಲೋಚನೆಯ ನಂತರ ಮತ್ತೆ ಒಂದಾಗಿದ್ದಾರೆ. ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದ ಆರು ಜೋಡಿಗಳು ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದಾರೆ.
ಗಂಗಾವತಿಯ ನ್ಯಾಯಾಲಯದಲ್ಲಿ ಲೋಕಾ ಅದಾಲತ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕೇಸ್ಗಳಲ್ಲಿ ರಾಜಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದೆ. ಆರು ಜೋಡಿ ಮತ್ತೆ ಒಟ್ಟಿಗೆ ಜೀವನ ಮಾಡಿಕೊಂಡು ಹೋಗಲು ಸಮ್ಮತಿಸಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಗಂಡ-ಹೆಂಡತಿ ನಡುವೆ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಪುನಃ ಒಂದಾಗಿ ಜೀವನ ನಡೆಸುವಂತೆ ನ್ಯಾಯಾಧೀಶರು ಸಮಾಲೋಚನೆ ನಡೆಸಿದ್ದರು. ನ್ಯಾಯಾಲಯದಲ್ಲಿ ಹಾರ ಬದಲಿಸಿಕೊಂಡ ದಂಪತಿ, ಪರಸ್ಪರ ಸಿಹಿತಿನ್ನಿಸಿ ಜೊತೆಯಾದರು.
ಸಣ್ಣ ಪುಟ್ಟ ಅಪನಂಬಿಕೆ, ಹೊಂದಾಣಿಕೆ ಕೊರತೆ ಸೇರಿದಂತೆ ನಾನಾ ಕಾರಣಕ್ಕೆ ಸಂಸಾರ ಎಂಬ ಪ್ರಯಾಣದಲ್ಲಿ ಉಂಟಾಗಿದ್ದ ಬಿರುಗಾಳಿಯಿಂದ ಡೈವೋರ್ಸ್ ಗೆ ಹೋಗಿದ್ದ ಆರು ಜೋಡಿಗಳ ಬಾಳಲ್ಲಿ ಇಲ್ಲಿನ ನ್ಯಾಯಾಧೀಶರು ಮರು ಜೀವನಕ್ಕೆ ದಾರಿ ದೀಪ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕವಲು ಹಾದಿಯಲ್ಲಿ ಪಯಣಿಸುತ್ತಿದ್ದ ಆರು ಜೋಡಿಗಳಿಗೆ ಆಪ್ತ ಸಮಾಲೋಚನೆ ಮಾಡಿ ಮತ್ತೆ ಒಂದಾಗಿಸುವ ಕೆಲಸವು ಗಮನ ಸೆಳೆದಿದೆ.
ಕನಕಗಿರಿಯ ಅಂಬಿಕಾ-ಭರಮಣ್ಣ, ತಾಲೂಕಿನ ಕನಕಗಿರಿ ಹೊಸಗುಡ್ಡದ ಶಿವಲಿಂಗಮ್ಮ-ಮುತ್ತಣ್ಣ,ಜಂಗಮರ ಕಲ್ಗುಡಿಯ ಶಿವಮ್ಮ-ಗೂಳ್ಳಪ್ಪ, ಸಿದ್ದಾಪುರದ ಎಂ. ತ್ರಿವೇಣಿ-ರಾಘವೇಂದ್ರ, ವಡ್ಡರಹಟ್ಟಿಯ ಜ್ಯೋತಿ-ರಾಜೇಶ ಅಸಂಗಿ, ಹಾಗೂ ಚಿಕ್ಕಡಂಕನಕಲ್ನ ಬಸವರಾಜ-ಲಕ್ಷ್ಮಿ ಡೈವೋರ್ಸ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಗೌರಮ್ಮ, ಶ್ರೀದೇವಿ, ರಮೇಶ ಗಾಣಿಗೇರ ಹಾಗೂ ಸದಾನಂದ ನಾಯಕ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ದಂಪತಿಗಳ ಮಧ್ಯೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ತಿಳಿ ಹೇಳಿದ ನ್ಯಾಯಾಧೀಶರು, ಡೈವೋರ್ಸ್ ಗಾಗಿ ಅರ್ಜಿ ಸಲ್ಲಿಸಿದ ಬಳಿಕ ಅನುಭವಿಸಿದ ಮಾನಸಿಕ ವೇದನೆ, ಕಳೆದಕೊಂಡ ಹಣ, ಅಮೂಲ್ಯ ಸಮಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ ದಂಪತಿಗಳು ಮತ್ತೆ ಒಂದಾಗಲು ಒಪ್ಪಿಕೊಂಡಿದ್ದಾರೆ.
ಗಂಗಾವತಿಯ ನ್ಯಾಯಾಲಯದಲ್ಲಿ ಲೋಕಾ ಅದಾಲತ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕೇಸ್ಗಳಲ್ಲಿ ರಾಜಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದೆ. ಆರು ಜೋಡಿ ಮತ್ತೆ ಒಟ್ಟಿಗೆ ಜೀವನ ಮಾಡಿಕೊಂಡು ಹೋಗಲು ಸಮ್ಮತಿಸಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಗಂಡ-ಹೆಂಡತಿ ನಡುವೆ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಪುನಃ ಒಂದಾಗಿ ಜೀವನ ನಡೆಸುವಂತೆ ನ್ಯಾಯಾಧೀಶರು ಸಮಾಲೋಚನೆ ನಡೆಸಿದ್ದರು. ನ್ಯಾಯಾಲಯದಲ್ಲಿ ಹಾರ ಬದಲಿಸಿಕೊಂಡ ದಂಪತಿ, ಪರಸ್ಪರ ಸಿಹಿತಿನ್ನಿಸಿ ಜೊತೆಯಾದರು.
ಸಣ್ಣ ಪುಟ್ಟ ಅಪನಂಬಿಕೆ, ಹೊಂದಾಣಿಕೆ ಕೊರತೆ ಸೇರಿದಂತೆ ನಾನಾ ಕಾರಣಕ್ಕೆ ಸಂಸಾರ ಎಂಬ ಪ್ರಯಾಣದಲ್ಲಿ ಉಂಟಾಗಿದ್ದ ಬಿರುಗಾಳಿಯಿಂದ ಡೈವೋರ್ಸ್ ಗೆ ಹೋಗಿದ್ದ ಆರು ಜೋಡಿಗಳ ಬಾಳಲ್ಲಿ ಇಲ್ಲಿನ ನ್ಯಾಯಾಧೀಶರು ಮರು ಜೀವನಕ್ಕೆ ದಾರಿ ದೀಪ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕವಲು ಹಾದಿಯಲ್ಲಿ ಪಯಣಿಸುತ್ತಿದ್ದ ಆರು ಜೋಡಿಗಳಿಗೆ ಆಪ್ತ ಸಮಾಲೋಚನೆ ಮಾಡಿ ಮತ್ತೆ ಒಂದಾಗಿಸುವ ಕೆಲಸವು ಗಮನ ಸೆಳೆದಿದೆ.
ಕನಕಗಿರಿಯ ಅಂಬಿಕಾ-ಭರಮಣ್ಣ, ತಾಲೂಕಿನ ಕನಕಗಿರಿ ಹೊಸಗುಡ್ಡದ ಶಿವಲಿಂಗಮ್ಮ-ಮುತ್ತಣ್ಣ,ಜಂಗಮರ ಕಲ್ಗುಡಿಯ ಶಿವಮ್ಮ-ಗೂಳ್ಳಪ್ಪ, ಸಿದ್ದಾಪುರದ ಎಂ. ತ್ರಿವೇಣಿ-ರಾಘವೇಂದ್ರ, ವಡ್ಡರಹಟ್ಟಿಯ ಜ್ಯೋತಿ-ರಾಜೇಶ ಅಸಂಗಿ, ಹಾಗೂ ಚಿಕ್ಕಡಂಕನಕಲ್ನ ಬಸವರಾಜ-ಲಕ್ಷ್ಮಿ ಡೈವೋರ್ಸ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಗೌರಮ್ಮ, ಶ್ರೀದೇವಿ, ರಮೇಶ ಗಾಣಿಗೇರ ಹಾಗೂ ಸದಾನಂದ ನಾಯಕ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ದಂಪತಿಗಳ ಮಧ್ಯೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ತಿಳಿ ಹೇಳಿದ ನ್ಯಾಯಾಧೀಶರು, ಡೈವೋರ್ಸ್ ಗಾಗಿ ಅರ್ಜಿ ಸಲ್ಲಿಸಿದ ಬಳಿಕ ಅನುಭವಿಸಿದ ಮಾನಸಿಕ ವೇದನೆ, ಕಳೆದಕೊಂಡ ಹಣ, ಅಮೂಲ್ಯ ಸಮಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ ದಂಪತಿಗಳು ಮತ್ತೆ ಒಂದಾಗಲು ಒಪ್ಪಿಕೊಂಡಿದ್ದಾರೆ.