ಬಿಸಿಲಿಗೆ ಕೊಪ್ಪಳದ ಜನರು ತತ್ತರ, ತಂಪು ಪಾನೀಯಗಳಿಗೆ ಭಾರಿ ಡಿಮ್ಯಾಂಡ್
1091 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ಕಳೆದ ನಾಲ್ಕೈದು ವರ್ಷಕ್ಕೆ ಹೊಲಿಸಿದರೆ ಈ ಭಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಸೂರ್ಯನ ಶಾಖಕ್ಕೆ ಕೊಪ್ಪಳವು ನಿಗಿ ನಿಗಿ ಕೆಂಡದಂತಾಗಿದೆ. ಸೂರ್ಯ ನೆತ್ತಿಗೇರುತ್ತಿದ್ಧಂತೆ ಜನರು ಮನೆಯಿಂದ ಹೊರಬರೋಕೆ ಆಗದಷ್ಟು ಬಿಸಿಲಿನ ಝಳವಿದೆ. ಈ ಸಂದರ್ಭದಲ್ಲಿ ಜನ ತಂಪು ಪಾನೀಯಕ್ಕೆ ಮೊರೆ ಹೋಗಿದ್ದಾರೆ. ಆದರೆ, ಎಳನೀರಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ದೇಹ ತಂಪಾಗಿಸಿಕೊಳ್ಳೋಕೆ ಎಳೆನೀರೂ ಸಿಗದೆ ಜನ ಪರದಾಡುವಂತಾಗಿದೆ.
ರಾಜ್ಯದಲ್ಲಿ ಚುನಾವಣೆ ಕಾವು ಇಳಿದಿದೆ, ಆದರೆ ಬೇಸಿಗೆಯ ತಾಪ ಈಶಾನ್ಯ ಭಾಗದಲ್ಲಿ ಚರ್ಚೆಯ ವಿಷಯವಾಗಿದೆ. ಈ ಬಾರಿ ರಣ ಬಿಸಿಲಿನ ಕಾಲ ಎಂಬಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಸಿಲಿನ ಬೇಗೆಗೆ ಜನ ತತ್ತರಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಬೇಸಿಗೆಯಲ್ಲಿ ಸುಮಾರು 37ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿತ್ತು. ಮೂರು ದಿನಗಳಿಂದ ಇಲ್ಲಿ 42.5 ರಿಂದ 43 ಡಿಗ್ರಿ ಸೆಲ್ಸಿಯಸ್ ವರೆಗೂ ಉಷ್ಣಾಂಶ ದಾಖಲಾಗಿದೆ.
ರಾಜ್ಯದಲ್ಲಿ ಚುನಾವಣೆ ಕಾವು ಇಳಿದಿದೆ, ಆದರೆ ಬೇಸಿಗೆಯ ತಾಪ ಈಶಾನ್ಯ ಭಾಗದಲ್ಲಿ ಚರ್ಚೆಯ ವಿಷಯವಾಗಿದೆ. ಈ ಬಾರಿ ರಣ ಬಿಸಿಲಿನ ಕಾಲ ಎಂಬಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಸಿಲಿನ ಬೇಗೆಗೆ ಜನ ತತ್ತರಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಬೇಸಿಗೆಯಲ್ಲಿ ಸುಮಾರು 37ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿತ್ತು. ಮೂರು ದಿನಗಳಿಂದ ಇಲ್ಲಿ 42.5 ರಿಂದ 43 ಡಿಗ್ರಿ ಸೆಲ್ಸಿಯಸ್ ವರೆಗೂ ಉಷ್ಣಾಂಶ ದಾಖಲಾಗಿದೆ.