Illegal Resorts Near Hampi: ತುಂಗಭದ್ರಾ ತೀರದಲ್ಲಿ ಅಕ್ರಮ ರೆಸಾರ್ಟ್, ಸಫಾರಿ? ಅರಣ್ಯ ಭೂಮಿ ಒತ್ತುವರಿ ಆರೋಪ
1007 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ ತಾಲೂಕಿನ ಹಿಟ್ನಾಳ್ ಹೋಬಳಿಯಲ್ಲಿರುವ ತುಂಗಭದ್ರಾ ನದಿ ಪಾತ್ರದಲ್ಲಿ ಎರಡು ರೆಸಾರ್ಟ್ಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು, ಅಕ್ರಮವಾಗಿ ಸಫಾರಿಯನ್ನು ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದಲ್ಲದೇ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಮೀನನ್ನು ಕೂಡ ಒತ್ತುವರಿ ಮಾಡಲಾಗಿದೆ ಎಂದು ಸ್ಥಳೀಯ ಆರ್ಟಿಐ ಕಾರ್ಯಕರ್ತ ಆರೋಪಿಸಿದ್ದಾರೆ.
ಫ್ಲೋ..
ಹೌದು, ಕೊಪ್ಪಳ ಜಿಲ್ಲೆಯ ತುಂಗಭದ್ರಾ ತೀರದಲ್ಲಿ ಅಕ್ರಮ ರೆಸಾರ್ಟ್ ಹಾಗೂ ಸಫಾರಿ ಬಗ್ಗೆ ಸ್ಥಳೀಯ ಆರ್ಟಿಐ ಕಾರ್ಯಕರ್ತ ವಿಜಯ್ ಕುಮಾರ್ ಕೊಪ್ಪಳದಲ್ಲಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಅದಲ್ಲದೇ ರೆಸಾರ್ಟ್ ಮಾಲೀಕರಿಂದ ಬೆದರಿಕೆ ಇದೆ. ಆದರೂ ಸಹ ನಾನು ಲೋಕಾಯುಕ್ತ ಹಾಗೂ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಫ್ಲೋ..
ಪ್ರವಾಸೋದ್ಯಮಕ್ಕೆ ಕೊಪ್ಪಳ ಜಿಲ್ಲೆ ಹೆಸರುವಾಸಿಯಾಗಿದೆ. ಇಲ್ಲಿಗೆ ಹೊರ ರಾಜ್ಯ ಸೇರಿ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ವಿರುಪಾಪುರಗಡ್ಡೆ ಹಾಗೂ ಸುತ್ತಮುತ್ತಲಿನ ರೆಸಾರ್ಟ್, ಹೋಂ ಸ್ಟೇಗಳನ್ನು ತೆರವುಗೊಳಿಸಿದ ಬಳಿಕ ಬೇರೆ ಕಡೆ ರೆಸಾರ್ಟ್, ಹೋಸ್ಟೇ ತಲೆಎತ್ತಿವೆ. ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪೇಟೆ ಬಳಿ ಡಿ ವಲ್ಲಭಚಂದ್ರ ಎಂಬುವವರು ಹಂಪಿ ಬೋಲ್ಡರ್ಸ್ ಹಾಗೂ ಹಂಪಿ ವೀಸ್ಕರ್ ರೆಸಾರ್ಟ್ ಅನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ, ಅದಲ್ಲದೇ ಅಕ್ರಮವಾಗಿ ಸಫಾರಿ ನಡೆಸಲಾಗುತ್ತಿದೆ ಎಂದು ಸಣಾಪುರ ಗ್ರಾಮದ ಆರ್ಟಿಐ ಕಾರ್ಯಕರ್ತ ಕೆ. ವಿಜಯ್ಕುಮಾರ್ ಆರೋಪಿಸಿದ್ದಾರೆ.
ಬೈಟ್:
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಈ ಕುರಿತು ದೂರು ಬಂದಿದೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರೆ, ಈ ಭಾಗದಲ್ಲಿ ಯಾವುದೇ ಕಟ್ಟಡ, ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಅರಣ್ಯ ಭೂಮಿಯಲ್ಲಿ ಅತಿಕ್ರಮಣವನ್ನು ತೆರವುಗೊಳಿಸಲಾಗುವುದು. ಅರಣ್ಯ ಇಲಾಖೆಯಿಂದ ಗಡಿಗೆ ಫೆನ್ಸ್ ಹಾಕಲಾಗುವುದು ಎಂದು ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ದೀಪಿಕಾ ಬಾಜ್ಪೆ ತಿಳಿಸಿದ್ದಾರೆ.
ಫ್ಲೋ..
ಹೌದು, ಕೊಪ್ಪಳ ಜಿಲ್ಲೆಯ ತುಂಗಭದ್ರಾ ತೀರದಲ್ಲಿ ಅಕ್ರಮ ರೆಸಾರ್ಟ್ ಹಾಗೂ ಸಫಾರಿ ಬಗ್ಗೆ ಸ್ಥಳೀಯ ಆರ್ಟಿಐ ಕಾರ್ಯಕರ್ತ ವಿಜಯ್ ಕುಮಾರ್ ಕೊಪ್ಪಳದಲ್ಲಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಅದಲ್ಲದೇ ರೆಸಾರ್ಟ್ ಮಾಲೀಕರಿಂದ ಬೆದರಿಕೆ ಇದೆ. ಆದರೂ ಸಹ ನಾನು ಲೋಕಾಯುಕ್ತ ಹಾಗೂ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಫ್ಲೋ..
ಪ್ರವಾಸೋದ್ಯಮಕ್ಕೆ ಕೊಪ್ಪಳ ಜಿಲ್ಲೆ ಹೆಸರುವಾಸಿಯಾಗಿದೆ. ಇಲ್ಲಿಗೆ ಹೊರ ರಾಜ್ಯ ಸೇರಿ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ವಿರುಪಾಪುರಗಡ್ಡೆ ಹಾಗೂ ಸುತ್ತಮುತ್ತಲಿನ ರೆಸಾರ್ಟ್, ಹೋಂ ಸ್ಟೇಗಳನ್ನು ತೆರವುಗೊಳಿಸಿದ ಬಳಿಕ ಬೇರೆ ಕಡೆ ರೆಸಾರ್ಟ್, ಹೋಸ್ಟೇ ತಲೆಎತ್ತಿವೆ. ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪೇಟೆ ಬಳಿ ಡಿ ವಲ್ಲಭಚಂದ್ರ ಎಂಬುವವರು ಹಂಪಿ ಬೋಲ್ಡರ್ಸ್ ಹಾಗೂ ಹಂಪಿ ವೀಸ್ಕರ್ ರೆಸಾರ್ಟ್ ಅನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ, ಅದಲ್ಲದೇ ಅಕ್ರಮವಾಗಿ ಸಫಾರಿ ನಡೆಸಲಾಗುತ್ತಿದೆ ಎಂದು ಸಣಾಪುರ ಗ್ರಾಮದ ಆರ್ಟಿಐ ಕಾರ್ಯಕರ್ತ ಕೆ. ವಿಜಯ್ಕುಮಾರ್ ಆರೋಪಿಸಿದ್ದಾರೆ.
ಬೈಟ್:
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಈ ಕುರಿತು ದೂರು ಬಂದಿದೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರೆ, ಈ ಭಾಗದಲ್ಲಿ ಯಾವುದೇ ಕಟ್ಟಡ, ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಅರಣ್ಯ ಭೂಮಿಯಲ್ಲಿ ಅತಿಕ್ರಮಣವನ್ನು ತೆರವುಗೊಳಿಸಲಾಗುವುದು. ಅರಣ್ಯ ಇಲಾಖೆಯಿಂದ ಗಡಿಗೆ ಫೆನ್ಸ್ ಹಾಕಲಾಗುವುದು ಎಂದು ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ದೀಪಿಕಾ ಬಾಜ್ಪೆ ತಿಳಿಸಿದ್ದಾರೆ.