ಗಂಗಾವತಿ: ಬಳ್ಳಾರಿಯಲ್ಲಿ ಶ್ರೀರಾಮುಲುರನ್ನು ಶಾಸಕರನ್ನಾಗಿ ಮಾಡಿದ್ದು ನಾನು: ಜನಾರ್ದನ ರೆಡ್ಡಿ
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿ
''ಬಳ್ಳಾರಿಯ ಸ್ಲಮ್ನಲ್ಲಿ ಹುಟ್ಟಿರುವ ಶ್ರೀರಾಮುಲುರನ್ನು ಕರೆದುಕೊಂಡು ಬಂದು ರಾಜ್ಯ ಮಟ್ಟದ ನಾಯಕನನ್ನಾಗಿ ಮಾಡಿದ್ದು ನಾನು'' ಎಂದು ಗಂಗಾವತಿಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ''ಬಳ್ಳಾರಿಯಲ್ಲಿ ಶ್ರೀರಾಮುಲುರನ್ನು ಶಾಸಕರನ್ನಾಗಿ ಮಾಡಿದ್ದು ನಾನು. ಸಿರಗುಪ್ಪಾದಲ್ಲಿ ಸೋಮಲಿಂಗಪ್ಪರನ್ನು ಶಾಸಕರನ್ನಾಗಿ ಮಾಡಿದ್ದು ನಾನು. ಎಸ್ಟಿಗೆ ಮೀಸಲಾತಿ ಇಲ್ಲದ ಸಂದರ್ಭದಲ್ಲೂ ನಾಯಕ ಸಮಾಜದವರನ್ನು ಶಾಸಕರನ್ನಾಗಿ ಮಾಡಿದ್ದು ನಾನು'' ಎಂದರು.
''ಶ್ರೀರಾಮುಲು ಹಾಗೂ ನನಗೆ ರಾಜಕೀಯ ಏನೇ ಆಗಿರಬಹುದು. ಶ್ರೀರಾಮುಲುರಿಗೆ ರಾಜಕೀಯ ಅನ್ಯಾಯವಾಗಿರಬಹುದು. ಆದರೆ ನಾಯಕ ಸಮಾಜದ ಒಬ್ಬರನ್ನು ಬೆಳೆಸಿದ ಹೆಮ್ಮೆ ಇದೆ. ರಾಜ್ಯದಲ್ಲಿ ವಾಲ್ಮೀಕಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ರಾಜ್ಯದಾದ್ಯಂತ ಆಚರಿಸಲು ಹಾಗೂ ಸರಕಾರಿ ರಜೆ ಘೋಷಿಸುವಂತೆ ಯಡಿಯೂರಪ್ಪ ಅವರಿಗೆ ಕ್ಯಾಬಿನೆಟ್ನಲ್ಲಿ ಒತ್ತಾಯಿಸಿದ್ದು ನಾನು ಹಾಗು ಶ್ರೀರಾಮುಲು'' ಎಂದರು.
ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 2 ಕೋಟಿ ರೂಪಾಯಿ, ತಾಲೂಕಾ ಕೇಂದ್ರದಲ್ಲಿ ಒಂದು ಕೋಟಿ ರೂ., ಹೋಬಳಿಯಲ್ಲಿ 50 ಲಕ್ಷ ರೂಪಾಯಿಯಲ್ಲಿ ವಾಲ್ಮೀಕಿ ಭವನ ಮಾಡಿಸಿದ ಹೆಮ್ಮೆ ಇದೆ. ಬಳ್ಳಾರಿಯಲ್ಲಿ 8 ಕೋಟಿ ರೂಪಾಯಿಯಲ್ಲಿ ವಾಲ್ಮೀಕಿ ಭವನ, 25 ಅಡಿ ಎತ್ತರದ ಮಹರ್ಷಿ ವಾಲ್ಮೀಕಿ ಮೂರ್ತಿ ಸ್ಥಾಪಿಸಿದ ಹೆಮ್ಮೆ ಇದೆ. ಕಿಷ್ಕಿಂದದಲ್ಲಿ ಶ್ರೀರಾಮಚಂದ್ರ ನಾಲ್ಕು ತಿಂಗಳು ಚಾತುರ್ಮಾಸ್ಯ ಮಾಡಿದ್ದರು. ಅಂಜನಾದ್ರಿಯಲ್ಲಿ 5000 ಜನ ಕೂಡುವಂಥ ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಗಂಗಾವತಿಯಲ್ಲಿ ಸುಂದರ ವಾಲ್ಮೀಕಿ ಮೂರ್ತಿ ಹಾಗೂ ವಾಲ್ಮೀಕಿ ಜನರಿಗಾಗಿ ಕಾಲೋನಿ ಮಾಡಲಾಗುವುದು ಎಂದು ಹೇಳಿದರು.
ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ''ಬಳ್ಳಾರಿಯಲ್ಲಿ ಶ್ರೀರಾಮುಲುರನ್ನು ಶಾಸಕರನ್ನಾಗಿ ಮಾಡಿದ್ದು ನಾನು. ಸಿರಗುಪ್ಪಾದಲ್ಲಿ ಸೋಮಲಿಂಗಪ್ಪರನ್ನು ಶಾಸಕರನ್ನಾಗಿ ಮಾಡಿದ್ದು ನಾನು. ಎಸ್ಟಿಗೆ ಮೀಸಲಾತಿ ಇಲ್ಲದ ಸಂದರ್ಭದಲ್ಲೂ ನಾಯಕ ಸಮಾಜದವರನ್ನು ಶಾಸಕರನ್ನಾಗಿ ಮಾಡಿದ್ದು ನಾನು'' ಎಂದರು.
''ಶ್ರೀರಾಮುಲು ಹಾಗೂ ನನಗೆ ರಾಜಕೀಯ ಏನೇ ಆಗಿರಬಹುದು. ಶ್ರೀರಾಮುಲುರಿಗೆ ರಾಜಕೀಯ ಅನ್ಯಾಯವಾಗಿರಬಹುದು. ಆದರೆ ನಾಯಕ ಸಮಾಜದ ಒಬ್ಬರನ್ನು ಬೆಳೆಸಿದ ಹೆಮ್ಮೆ ಇದೆ. ರಾಜ್ಯದಲ್ಲಿ ವಾಲ್ಮೀಕಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ರಾಜ್ಯದಾದ್ಯಂತ ಆಚರಿಸಲು ಹಾಗೂ ಸರಕಾರಿ ರಜೆ ಘೋಷಿಸುವಂತೆ ಯಡಿಯೂರಪ್ಪ ಅವರಿಗೆ ಕ್ಯಾಬಿನೆಟ್ನಲ್ಲಿ ಒತ್ತಾಯಿಸಿದ್ದು ನಾನು ಹಾಗು ಶ್ರೀರಾಮುಲು'' ಎಂದರು.
ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 2 ಕೋಟಿ ರೂಪಾಯಿ, ತಾಲೂಕಾ ಕೇಂದ್ರದಲ್ಲಿ ಒಂದು ಕೋಟಿ ರೂ., ಹೋಬಳಿಯಲ್ಲಿ 50 ಲಕ್ಷ ರೂಪಾಯಿಯಲ್ಲಿ ವಾಲ್ಮೀಕಿ ಭವನ ಮಾಡಿಸಿದ ಹೆಮ್ಮೆ ಇದೆ. ಬಳ್ಳಾರಿಯಲ್ಲಿ 8 ಕೋಟಿ ರೂಪಾಯಿಯಲ್ಲಿ ವಾಲ್ಮೀಕಿ ಭವನ, 25 ಅಡಿ ಎತ್ತರದ ಮಹರ್ಷಿ ವಾಲ್ಮೀಕಿ ಮೂರ್ತಿ ಸ್ಥಾಪಿಸಿದ ಹೆಮ್ಮೆ ಇದೆ. ಕಿಷ್ಕಿಂದದಲ್ಲಿ ಶ್ರೀರಾಮಚಂದ್ರ ನಾಲ್ಕು ತಿಂಗಳು ಚಾತುರ್ಮಾಸ್ಯ ಮಾಡಿದ್ದರು. ಅಂಜನಾದ್ರಿಯಲ್ಲಿ 5000 ಜನ ಕೂಡುವಂಥ ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಗಂಗಾವತಿಯಲ್ಲಿ ಸುಂದರ ವಾಲ್ಮೀಕಿ ಮೂರ್ತಿ ಹಾಗೂ ವಾಲ್ಮೀಕಿ ಜನರಿಗಾಗಿ ಕಾಲೋನಿ ಮಾಡಲಾಗುವುದು ಎಂದು ಹೇಳಿದರು.