ಮೆಕ್ಕೆಜೋಳ ಬಿತ್ತನೆಯಾಗಿ 70 ದಿನ ಕಳೆದರೂ ಮಳೆ ಇಲ್ಲ, ಒಣಗಿದ ಬೆಳೆ ತೆಗೆಯುತ್ತಿರುವ ಕೊಪ್ಪಳ ರೈತರು
1071 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ಬಿತ್ತನೆ ಮಾಡಿ ಎರಡು ತಿಂಗಳಾಗಿದೆ. ಆಗಾಗ ಮಳೆಯಾಗಿದ್ದರೂ ಸಂಪೂರ್ಣ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆಯು ಕಾಳು ಕಟ್ಟುತ್ತಿಲ್ಲ. ಈಗಿರುವ ಬೆಳೆಯಿಂದ ಒಂದು ಹಿಡಿ ಕಾಳು ಸಹ ಬರುವುದಿಲ್ಲ. ಇದರಿಂದ ರೈತರು ತಮ್ಮ ಹೊಲದಲ್ಲಿದ್ದ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹಿಸುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ವಿನೋದ ತಮ್ಮ ಜಮೀನಿನಲ್ಲಿ 8 ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ 70-80 ದಿನವಾಗಿದೆ. ಇನ್ನೊಂದು ತಿಂಗಳಲ್ಲಿ ಕಟಾವು ಹಂತಕ್ಕೆ ಬರಬೇಕಿತ್ತು. ಆದರೆ ಮೆಕ್ಕೆಜೋಳವು ಕಾಳು ಕಟ್ಟಿಲ್ಲ. ಅವಧಿ ಮೀರಿದ್ದರಿಂದ ಟ್ರ್ಯಾಕ್ಟರ್ ಮೂಲಕ ತಾವೇ ಬೆಳೆದ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 20ರಿಂದ 30 ಸಾವಿರಕ್ಕೂ ಅಧಿಕ ಖರ್ಚು ಮಾಡಿರುವ ರೈತರಿಗೆ ಈಗ ಭೂಮಿಯಲ್ಲಿ ಒಂದು ರೂಪಾಯಿ ಆದಾಯವೂ ಬರುವುದಿಲ್ಲ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ರೈತರು ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಕೊಪ್ಪಳ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹಿಸುತ್ತಿದ್ದಾರೆ. ಈ ಕುರಿತು ಬೆಟಗೇರಿಯ ರೈತ ಏಳುಕೊಟೇಶ ಕೋಮಲಾಪುರ ಕೊಪ್ಪಳ ತಾಲೂಕನ್ನು ಬರಪೀಡತ ತಾಲೂಕು ಎಂದು ಘೋಷಿಸಲು ಆಗ್ರಹಿಸಿ ಟ್ವೀಟ್ ಮೂಲಕವೂ ಸಿಎಂ ಹಾಗೂ ಸಚಿವರಿಗೆ ಆಗ್ರಹಿಸಿದ್ದಾರೆ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ವಿನೋದ ತಮ್ಮ ಜಮೀನಿನಲ್ಲಿ 8 ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ 70-80 ದಿನವಾಗಿದೆ. ಇನ್ನೊಂದು ತಿಂಗಳಲ್ಲಿ ಕಟಾವು ಹಂತಕ್ಕೆ ಬರಬೇಕಿತ್ತು. ಆದರೆ ಮೆಕ್ಕೆಜೋಳವು ಕಾಳು ಕಟ್ಟಿಲ್ಲ. ಅವಧಿ ಮೀರಿದ್ದರಿಂದ ಟ್ರ್ಯಾಕ್ಟರ್ ಮೂಲಕ ತಾವೇ ಬೆಳೆದ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 20ರಿಂದ 30 ಸಾವಿರಕ್ಕೂ ಅಧಿಕ ಖರ್ಚು ಮಾಡಿರುವ ರೈತರಿಗೆ ಈಗ ಭೂಮಿಯಲ್ಲಿ ಒಂದು ರೂಪಾಯಿ ಆದಾಯವೂ ಬರುವುದಿಲ್ಲ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ರೈತರು ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಕೊಪ್ಪಳ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹಿಸುತ್ತಿದ್ದಾರೆ. ಈ ಕುರಿತು ಬೆಟಗೇರಿಯ ರೈತ ಏಳುಕೊಟೇಶ ಕೋಮಲಾಪುರ ಕೊಪ್ಪಳ ತಾಲೂಕನ್ನು ಬರಪೀಡತ ತಾಲೂಕು ಎಂದು ಘೋಷಿಸಲು ಆಗ್ರಹಿಸಿ ಟ್ವೀಟ್ ಮೂಲಕವೂ ಸಿಎಂ ಹಾಗೂ ಸಚಿವರಿಗೆ ಆಗ್ರಹಿಸಿದ್ದಾರೆ.