ಕೊಪ್ಪಳ ಜಿಲ್ಲೆಯಲ್ಲಿ ಗುಳೆ ಹೊರಟ ಜನ, ಬದುಕಿಗಾಗಿ ಗಂಟು-ಮೂಟೆ ಹೊತ್ತು ದೂರದ ಊರಿಗೆ ಪ್ರಯಾಣ
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿ
ಮಳೆ ಬರದ ಬೆಳೆ ಬೆಳೆಯೋಕೆ ಆಗುತ್ತಿಲ್ಲ, ಬೆಳೆ ಬರದೆ ಕೃಷಿ ಚಟುವಟಿಕೆಗಳೆಲ್ಲ ನಿಂತು ಹೋಗಿವೆ. ಕೃಷಿಗೆ ಸಂಬಂಧಿಸಿದ ಕೆಲಸಗಳನ್ನೇ ನೆಚ್ಚಿಕೊಂಡ ಜನರು ಈಗ ಊರು ಬಿಟ್ಟು ದೂರದೂರಿಗೆ ಗುಳಿ ಹೊರಟಿದ್ದಾರೆ. ಗಂಟು-ಮೂಟೆಗಳನ್ನು ತಲೆಯ ಮೇಲೆ ಹೊತ್ತು ಸಾಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಕೊಪ್ಪಳ ಜಿಲ್ಲೆಗೂ ಭೀಕರ ಬರಗಾಲದ ತಾಪ ತಟ್ಟಿದೆ. ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಎರಡೂ ಬೆಳೆಗಳಿಗೆ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಈ ಮಧ್ಯೆ ಬೆಳೆ ಇಲ್ಲದೆ ಜನ ಹೊಟ್ಟೆ ಪಾಡಿಗಾಗಿ ದೂರದ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳು ಬಣಗುಡುತ್ತಿವೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ತಮ್ಮದಲ್ಲದ ಮತ್ತೊಂದು ಜಾಗಕ್ಕೆ ವಲಸೆ ಹೋಗುವ ಜನರು, ಸಿಕ್ಕ ಕೆಲಸಗಳನ್ನು ಮಾಡುತ್ತ ದಿನ ಸಾಗಿಸುತ್ತಾರೆ.
ಮುಂಗಾರು ಹಂಗಾಮಿನಲ್ಲಿ ಶೇಕಡ 25ರಷ್ಟು ಮಳೆ ಕೊರತೆಯಾಗಿದೆ. ಈಗ ಹಿಂಗಾರು ಹಂಗಾಮು, ಈ ದಿನಗಳಲ್ಲಿ ಮಳೆಯಾಗಬೇಕು. ಆದರೆ ಇಲ್ಲಿಯವರೆಗೂ ಮಳೆ ಬರುವ ಲಕ್ಷಣಗಳೂ ಕಂಡಿಲ್ಲ. ಇದರಿಂದಾಗಿ ಎರಡು ಹಂಗಾಮಿನ ಬೆಳೆಗಳು ಬಾರದ ಸ್ಥಿತಿ ಎದುರಾಗಿದೆ. ರೈತರು ಬದುಕಿಗಾಗಿ ದೂರದ ಪ್ರದೇಶಗಳಿಗೆ ದುಡಿಯಲು ಹೋಗುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಶೇಕಡ 30 ಕ್ಕಿಂತ ಹೆಚ್ಚು ಜನ ಕೆಲಸ ಅರಸಿಕೊಂಡು ಬೆಂಗಳೂರು, ಮಂಗಳೂರು, ಬಾಂಬೇ, ತಮಿಳುನಾಡು, ಮೈಸೂರು, ರತ್ನಗಿರಿಗೆ ದುಡಿಯಲು ಹೋಗಿದ್ದಾರೆ. ಇದರಿಂದಾಗಿ ಬಹುತೇಕ ಗ್ರಾಮಗಳು ಖಾಲಿ ಖಾಲಿಯಾಗಿವೆ.
ವಯಸ್ಸಾದವರು, ಚಿಕ್ಕ ಮಕ್ಕಳನ್ನು ಬಿಟ್ಟು ದುಡಿಯಲು ಹೋಗಿದ್ದಾರೆ. ಇನ್ನೂ ಬಹಳಷ್ಟು ಕುಟುಂಬಗಳು ಮನೆಗೆ ಬೀಗ ಹಾಕಿ ಗುಳೆ ಹೋಗಿದ್ದಾರೆ.
ಬಹಳಷ್ಟು ಕಡೆ ಶಾಲೆಗೆ ಹೋಗುವ ಮಕ್ಕಳನ್ನೂ ಸಹ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಶಾಲೆಯಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಆದರೆ, ಬರ ಪರಿಹಾರ ಕೊಡುವುದು, ಬರ ಕಾಮಗಾರಿ ನಡೆಸುವುದು ಶುರುವಾಗಿಲ್ಲ. ನರೇಗಾ ಯೋಜನೆಯಲ್ಲಿ ಸಮರ್ಪಕ ಕೆಲಸ ಸಿಗುತ್ತಿಲ್ಲ. ಹೊಟ್ಟೆಪಾಡಿಗಾಗಿ ಜನ ಗುಳೆ ಹೋಗುವ ಮಾರ್ಗ ಕಂಡುಕೊಂಡಿದ್ದಾರೆ. ಸರಕಾರ ಆದಷ್ಟು ಬೇಗ ಬರ ಕಾಮಗಾರಿ ನಡೆಸಬೇಕಿದೆ. ನರೇಗಾ ಯೋಜನೆಯಲ್ಲಿ ನಿತ್ಯ ಕೆಲಸ ಸಿಗುವಂತಾದರೆ, ಇದ್ದಲ್ಲಿಯೇ ಜನರಿಗೆ ಜೀವನೋಪಾಯ ಸಿಕ್ಕಂತಾಗುತ್ತದೆ.
ಕೊಪ್ಪಳ ಜಿಲ್ಲೆಗೂ ಭೀಕರ ಬರಗಾಲದ ತಾಪ ತಟ್ಟಿದೆ. ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಎರಡೂ ಬೆಳೆಗಳಿಗೆ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಈ ಮಧ್ಯೆ ಬೆಳೆ ಇಲ್ಲದೆ ಜನ ಹೊಟ್ಟೆ ಪಾಡಿಗಾಗಿ ದೂರದ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳು ಬಣಗುಡುತ್ತಿವೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ತಮ್ಮದಲ್ಲದ ಮತ್ತೊಂದು ಜಾಗಕ್ಕೆ ವಲಸೆ ಹೋಗುವ ಜನರು, ಸಿಕ್ಕ ಕೆಲಸಗಳನ್ನು ಮಾಡುತ್ತ ದಿನ ಸಾಗಿಸುತ್ತಾರೆ.
ಮುಂಗಾರು ಹಂಗಾಮಿನಲ್ಲಿ ಶೇಕಡ 25ರಷ್ಟು ಮಳೆ ಕೊರತೆಯಾಗಿದೆ. ಈಗ ಹಿಂಗಾರು ಹಂಗಾಮು, ಈ ದಿನಗಳಲ್ಲಿ ಮಳೆಯಾಗಬೇಕು. ಆದರೆ ಇಲ್ಲಿಯವರೆಗೂ ಮಳೆ ಬರುವ ಲಕ್ಷಣಗಳೂ ಕಂಡಿಲ್ಲ. ಇದರಿಂದಾಗಿ ಎರಡು ಹಂಗಾಮಿನ ಬೆಳೆಗಳು ಬಾರದ ಸ್ಥಿತಿ ಎದುರಾಗಿದೆ. ರೈತರು ಬದುಕಿಗಾಗಿ ದೂರದ ಪ್ರದೇಶಗಳಿಗೆ ದುಡಿಯಲು ಹೋಗುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಶೇಕಡ 30 ಕ್ಕಿಂತ ಹೆಚ್ಚು ಜನ ಕೆಲಸ ಅರಸಿಕೊಂಡು ಬೆಂಗಳೂರು, ಮಂಗಳೂರು, ಬಾಂಬೇ, ತಮಿಳುನಾಡು, ಮೈಸೂರು, ರತ್ನಗಿರಿಗೆ ದುಡಿಯಲು ಹೋಗಿದ್ದಾರೆ. ಇದರಿಂದಾಗಿ ಬಹುತೇಕ ಗ್ರಾಮಗಳು ಖಾಲಿ ಖಾಲಿಯಾಗಿವೆ.
ವಯಸ್ಸಾದವರು, ಚಿಕ್ಕ ಮಕ್ಕಳನ್ನು ಬಿಟ್ಟು ದುಡಿಯಲು ಹೋಗಿದ್ದಾರೆ. ಇನ್ನೂ ಬಹಳಷ್ಟು ಕುಟುಂಬಗಳು ಮನೆಗೆ ಬೀಗ ಹಾಕಿ ಗುಳೆ ಹೋಗಿದ್ದಾರೆ.
ಬಹಳಷ್ಟು ಕಡೆ ಶಾಲೆಗೆ ಹೋಗುವ ಮಕ್ಕಳನ್ನೂ ಸಹ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಶಾಲೆಯಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಆದರೆ, ಬರ ಪರಿಹಾರ ಕೊಡುವುದು, ಬರ ಕಾಮಗಾರಿ ನಡೆಸುವುದು ಶುರುವಾಗಿಲ್ಲ. ನರೇಗಾ ಯೋಜನೆಯಲ್ಲಿ ಸಮರ್ಪಕ ಕೆಲಸ ಸಿಗುತ್ತಿಲ್ಲ. ಹೊಟ್ಟೆಪಾಡಿಗಾಗಿ ಜನ ಗುಳೆ ಹೋಗುವ ಮಾರ್ಗ ಕಂಡುಕೊಂಡಿದ್ದಾರೆ. ಸರಕಾರ ಆದಷ್ಟು ಬೇಗ ಬರ ಕಾಮಗಾರಿ ನಡೆಸಬೇಕಿದೆ. ನರೇಗಾ ಯೋಜನೆಯಲ್ಲಿ ನಿತ್ಯ ಕೆಲಸ ಸಿಗುವಂತಾದರೆ, ಇದ್ದಲ್ಲಿಯೇ ಜನರಿಗೆ ಜೀವನೋಪಾಯ ಸಿಕ್ಕಂತಾಗುತ್ತದೆ.