ರೈತರು 5 ಲಕ್ಷ ರೂಪಾಯಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ? ಶಿವಾನಂದ ಪಾಟೀಲ್ಗೆ ರೈತರ ಪ್ರಶ್ನೆ
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿ
''ರೈತರು ಬರ ಬರಲಿ ಎಂದು ಬಯಸುತ್ತಾರೆ'' ಎಂದಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರನ್ನು ಸ್ಥಾನದಿಂದ ವಜಾ ಮಾಡಬೇಕು. ಸಿದ್ದರಾಮಯ್ಯನವರಿಗೆ ಗ್ಯಾರಂಟಿ ಯೋಜನೆಗಳಿಗಿಂತ ರೈತರ ಪರವಾದ ಯೋಜನೆಗಳನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.
ಸಕ್ಕರೆ ಹಾಗೂ ಎಪಿಎಂಸಿ ಸಚಿವರಾಗಿರುವ ಶಿವಾನಂದ ಪಾಟೀಲ್ ಈ ಹಿಂದೆ, ರೈತರು 5 ಲಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿ ವಿವಾದ ಎಳೆದುಕೊಂಡಿದ್ದರು. ಈಗ ಮತ್ತೆ ಸಾಲ ಮನ್ನಾ ಆಗುತ್ತದೆ ಎಂಬ ಕಾರಣಕ್ಕೆ ರೈತರು ಬರ ಬರಲಿ ಎಂದು ಬಯಸುತ್ತಾರೆ ಎಂದಿದ್ದಾರೆ. ಶಿವಾನಂದ ಪಾಟೀಲರ ಹೇಳಿಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯರೇಹಂಚಿನಾಳದಲ್ಲಿ ರೈತ ಮುಖಂಡರು ರೈತರ ಈಗಿನ ಸ್ಥಿತಿ ಏನು ಎಂಬುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯರೇಹಂಚಿನಾಳದ ರೈತ ಮುಖಂಡ ಅಂದಪ್ಪ ಕೋಳೂರು ಎಂಬುವವರು ಕಳೆದ ನಾಲ್ಕೈದು ವರ್ಷದಲ್ಲಿ ಮೇಲಿಂದ ಮೇಲೆ ಬರ ಬಂದಿದೆ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಯು ವೈಫಲ್ಯ ಕಂಡಿದೆ. ಬಿತ್ತನೆ ಮಾಡಿದ ಬೆಳೆಯು ಒಣಗಿ ಹೋಗಿದೆ, ಜಗತ್ತಿಗೆ ಅನ್ನ ನೀಡುವ ರೈತರ ಬೆಳೆಗಾಗಿ ಸಾಲ ಮಾಡಿಕೊಂಡಿದ್ದಾನೆ. ಸರಕಾರದಿಂದ ಬರಬೇಕಾದ ಬೆಳೆ ವಿಮೆ ಬಂದಿಲ್ಲ. ಇಂಥ ಸಂಕಷ್ಟ ಸ್ಥಿತಿಯಲ್ಲಿ ನಾವಿದ್ದೇವೆ. ಒಂದು ವೇಳೆ ಉತ್ತಮ ಮಳೆಯಾಗಿ ಬೆಳೆ ಬಂದರೆ ನಿಮ್ಮ ಸಾಲ ಎಷ್ಟು ಅದನ್ನು ನಾವು ತೀರಿಸುತ್ತಿವೆ. ರೈತರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಬ್ಬ ರೈತ ಮುಖಂಡ ಬಸವರಾಜ ಹೂಗಾರ ನಾವೇನು ನಿಮಗೆ ಗ್ಯಾರಂಟಿ ಯೋಜನೆ ನೀಡಿ ಎಂದು ಹೇಳಿಲ್ಲ. ಗ್ಯಾರಂಟಿ ಯೋಜನೆ ನೀಡಿದ್ದರೂ ನಿಮ್ಮಪ್ಪನ ಮನೆಯಿಂದ ನೀಡಿಲ್ಲ. ರೈತರು ಬೆಳೆಯದಿದ್ದರೆ ಎಲ್ಲಿಗೆ ಹೋಗುತ್ತೀರಿ. ಸಿದ್ದರಾಮಯ್ಯನವರು ಮೊದಲು ಇಂಥ ಸಚಿವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.
ಸಕ್ಕರೆ ಹಾಗೂ ಎಪಿಎಂಸಿ ಸಚಿವರಾಗಿರುವ ಶಿವಾನಂದ ಪಾಟೀಲ್ ಈ ಹಿಂದೆ, ರೈತರು 5 ಲಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿ ವಿವಾದ ಎಳೆದುಕೊಂಡಿದ್ದರು. ಈಗ ಮತ್ತೆ ಸಾಲ ಮನ್ನಾ ಆಗುತ್ತದೆ ಎಂಬ ಕಾರಣಕ್ಕೆ ರೈತರು ಬರ ಬರಲಿ ಎಂದು ಬಯಸುತ್ತಾರೆ ಎಂದಿದ್ದಾರೆ. ಶಿವಾನಂದ ಪಾಟೀಲರ ಹೇಳಿಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯರೇಹಂಚಿನಾಳದಲ್ಲಿ ರೈತ ಮುಖಂಡರು ರೈತರ ಈಗಿನ ಸ್ಥಿತಿ ಏನು ಎಂಬುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯರೇಹಂಚಿನಾಳದ ರೈತ ಮುಖಂಡ ಅಂದಪ್ಪ ಕೋಳೂರು ಎಂಬುವವರು ಕಳೆದ ನಾಲ್ಕೈದು ವರ್ಷದಲ್ಲಿ ಮೇಲಿಂದ ಮೇಲೆ ಬರ ಬಂದಿದೆ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಯು ವೈಫಲ್ಯ ಕಂಡಿದೆ. ಬಿತ್ತನೆ ಮಾಡಿದ ಬೆಳೆಯು ಒಣಗಿ ಹೋಗಿದೆ, ಜಗತ್ತಿಗೆ ಅನ್ನ ನೀಡುವ ರೈತರ ಬೆಳೆಗಾಗಿ ಸಾಲ ಮಾಡಿಕೊಂಡಿದ್ದಾನೆ. ಸರಕಾರದಿಂದ ಬರಬೇಕಾದ ಬೆಳೆ ವಿಮೆ ಬಂದಿಲ್ಲ. ಇಂಥ ಸಂಕಷ್ಟ ಸ್ಥಿತಿಯಲ್ಲಿ ನಾವಿದ್ದೇವೆ. ಒಂದು ವೇಳೆ ಉತ್ತಮ ಮಳೆಯಾಗಿ ಬೆಳೆ ಬಂದರೆ ನಿಮ್ಮ ಸಾಲ ಎಷ್ಟು ಅದನ್ನು ನಾವು ತೀರಿಸುತ್ತಿವೆ. ರೈತರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಬ್ಬ ರೈತ ಮುಖಂಡ ಬಸವರಾಜ ಹೂಗಾರ ನಾವೇನು ನಿಮಗೆ ಗ್ಯಾರಂಟಿ ಯೋಜನೆ ನೀಡಿ ಎಂದು ಹೇಳಿಲ್ಲ. ಗ್ಯಾರಂಟಿ ಯೋಜನೆ ನೀಡಿದ್ದರೂ ನಿಮ್ಮಪ್ಪನ ಮನೆಯಿಂದ ನೀಡಿಲ್ಲ. ರೈತರು ಬೆಳೆಯದಿದ್ದರೆ ಎಲ್ಲಿಗೆ ಹೋಗುತ್ತೀರಿ. ಸಿದ್ದರಾಮಯ್ಯನವರು ಮೊದಲು ಇಂಥ ಸಚಿವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.