ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ ಅಪಾರ ಪ್ರಮಾಣದ ಧಾನ್ಯ ಬಳಕೆ, ಲಕ್ಷಾಂತರ ಜನರಿಗೆ ಪ್ರಸಾದ
1107 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ 15 ದಿನಗಳು ನಡೆದ ಶ್ರೀ ಮಠದ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸವಿದಿದ್ದಾರೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಆಹಾರ ಧಾನ್ಯ ಬಳಕೆಯಾಗಿದೆ. ಆರು ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಮಹಾದಾಸೋಹದಲ್ಲಿ ಸಾವಿರಾರು ಭಕ್ತಾದಿಗಳು ಏಕಕಾಲದಲ್ಲಿ ಪ್ರಸಾದ ಸೇವಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಜನದಟ್ಟಣೆಯಾಗದಂತೆ ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷಚೇತನರಿಗೆ, ಹಾಗೂ ಹಿರಿಯನಾಗರಿಕರಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನೂ ಕೂಡ ಮಾಡಲಾಗಿತ್ತು.
ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಇರುವ ಮಹಾದಾಸೋಹವು ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಹಾಗೂ ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿತ್ತು. ಪ್ರಸಾದ ವಿತರಣೆಗೆ 27 ಕೌಂಟರಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ 40 ಕೌಂಟರಗಳು ಅನ್ನ ಸಾರು, 36 ಕೌಂಟರ್ಗಳಲ್ಲಿ ಸಿಹಿ ಪದಾರ್ಥ ವಿತರಣೆಗೆ ಮೀಸಲಾಗಿದ್ದವು.
ಸುಮಾರು 500 ಕ್ವಿಂಟಲ್ನಷ್ಟು ಮಾದಲಿ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗಿದೆ. ಈ ಜಾತ್ರೆಯ ಮಹಾದಾಸೋಹದಲ್ಲಿ ಹಸಿದು ಬಂದ ಭಕ್ತರಿಗೆ ಸಂತೃಪ್ತಿಯಾಗುವಂತಹ ರೊಟ್ಟಿ, ಪಲ್ಯ, ಅನ್ನ, ಸಾಂಬರ್, ಕಡ್ಲಿಚಟ್ನಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿಚಟ್ನಿ, ಉಪ್ಪಿನಕಾಯಿ, ಸಿಹಿ ಪದಾರ್ಥಗಳಾದ ಹುಗ್ಗಿ, ಸಿಹಿ ಬೂಂದಿ, ಶೇಂಗಾ ಹೋಳಿಗಿ, ಖರ್ಜಿಕಾಯಿ, ಮೈಸೂರು ಪಾಕ್, ರವೆಉಂಡಿ ಮುಂತಾದವುಗಳನ್ನು ಪ್ರಸಾದದಲ್ಲಿ ವಿತರಿಸಲಾಗಿತ್ತು.
ಮಹಾದಾಸೋಹದಲ್ಲಿ ಪ್ರಾರಂಭದಿಂದ ಮುಕ್ತಾಯದವರೆಗೆ ಖರ್ಚಾಗಿರುವ ಸಾಮಾಗ್ರಿಗಳ ಅಂದಾಜು ವಿವರಣೆ ಇಲ್ಲಿದೆ. ರೊಟ್ಟಿ ಸುಮಾರು 15 ರಿಂದ 16 ಲಕ್ಷ, ಶೇಂಗಾ ಹೋಳಿಗಿ 10 ಲಕ್ಷ, ಮಿರ್ಚಿ 5 ಲಕ್ಷ, ಅಕ್ಕಿ 1200 ಕ್ವಿಂಟಾಲ್, ಸಿಹಿ ಪದಾರ್ಥಗಳು 900 ಕ್ವಿಂಟಾಲ್, ತರಕಾರಿ 400 ಕ್ವಿಂಟಾಲ್, ದ್ವಿದಳ ಧಾನ್ಯಗಳು 350 ಕ್ವಿಂಟಾಲ್, ಹಾಲು 15 ಸಾವಿರ ಲೀಟರ್, ತುಪ್ಪ 1000 ಕೆ.ಜಿ., ಉಪ್ಪಿನಕಾಯಿ 5000 ಕೆ.ಜಿ. ಪುಠಾಣಿಚಟ್ನಿ 15 ಕ್ವಿಂಟಾಲ್, ಕೆಂಪು ಚಟ್ನಿ 5 ಕ್ವಿಂಟಾಲ್ ಹಾಗೂ 20 ಕ್ವಿಂಟಾಲ್ ಕಡ್ಲೇಬೇಳೆ ಖರ್ಚಾಗಿದೆ.
ಈಗ ಜಾತ್ರಾ ದಾಸೋಹ ಮುಕ್ತಾಯವಾಗಿದೆ. ಆದರೆ ಮಠದ ದಾಸೋಹ ಭವನದಲ್ಲಿ ನಿತ್ಯ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಇರುತ್ತದೆ. ಈ ದಿನಗಳಲ್ಲಿ ನಿತ್ಯವೂ ಸಾವಿರಾರು ಜನರು ಪ್ರಸಾದ ಸೇವಿಸುತ್ತಾರೆ.
ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಇರುವ ಮಹಾದಾಸೋಹವು ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಹಾಗೂ ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿತ್ತು. ಪ್ರಸಾದ ವಿತರಣೆಗೆ 27 ಕೌಂಟರಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ 40 ಕೌಂಟರಗಳು ಅನ್ನ ಸಾರು, 36 ಕೌಂಟರ್ಗಳಲ್ಲಿ ಸಿಹಿ ಪದಾರ್ಥ ವಿತರಣೆಗೆ ಮೀಸಲಾಗಿದ್ದವು.
ಸುಮಾರು 500 ಕ್ವಿಂಟಲ್ನಷ್ಟು ಮಾದಲಿ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗಿದೆ. ಈ ಜಾತ್ರೆಯ ಮಹಾದಾಸೋಹದಲ್ಲಿ ಹಸಿದು ಬಂದ ಭಕ್ತರಿಗೆ ಸಂತೃಪ್ತಿಯಾಗುವಂತಹ ರೊಟ್ಟಿ, ಪಲ್ಯ, ಅನ್ನ, ಸಾಂಬರ್, ಕಡ್ಲಿಚಟ್ನಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿಚಟ್ನಿ, ಉಪ್ಪಿನಕಾಯಿ, ಸಿಹಿ ಪದಾರ್ಥಗಳಾದ ಹುಗ್ಗಿ, ಸಿಹಿ ಬೂಂದಿ, ಶೇಂಗಾ ಹೋಳಿಗಿ, ಖರ್ಜಿಕಾಯಿ, ಮೈಸೂರು ಪಾಕ್, ರವೆಉಂಡಿ ಮುಂತಾದವುಗಳನ್ನು ಪ್ರಸಾದದಲ್ಲಿ ವಿತರಿಸಲಾಗಿತ್ತು.
ಮಹಾದಾಸೋಹದಲ್ಲಿ ಪ್ರಾರಂಭದಿಂದ ಮುಕ್ತಾಯದವರೆಗೆ ಖರ್ಚಾಗಿರುವ ಸಾಮಾಗ್ರಿಗಳ ಅಂದಾಜು ವಿವರಣೆ ಇಲ್ಲಿದೆ. ರೊಟ್ಟಿ ಸುಮಾರು 15 ರಿಂದ 16 ಲಕ್ಷ, ಶೇಂಗಾ ಹೋಳಿಗಿ 10 ಲಕ್ಷ, ಮಿರ್ಚಿ 5 ಲಕ್ಷ, ಅಕ್ಕಿ 1200 ಕ್ವಿಂಟಾಲ್, ಸಿಹಿ ಪದಾರ್ಥಗಳು 900 ಕ್ವಿಂಟಾಲ್, ತರಕಾರಿ 400 ಕ್ವಿಂಟಾಲ್, ದ್ವಿದಳ ಧಾನ್ಯಗಳು 350 ಕ್ವಿಂಟಾಲ್, ಹಾಲು 15 ಸಾವಿರ ಲೀಟರ್, ತುಪ್ಪ 1000 ಕೆ.ಜಿ., ಉಪ್ಪಿನಕಾಯಿ 5000 ಕೆ.ಜಿ. ಪುಠಾಣಿಚಟ್ನಿ 15 ಕ್ವಿಂಟಾಲ್, ಕೆಂಪು ಚಟ್ನಿ 5 ಕ್ವಿಂಟಾಲ್ ಹಾಗೂ 20 ಕ್ವಿಂಟಾಲ್ ಕಡ್ಲೇಬೇಳೆ ಖರ್ಚಾಗಿದೆ.
ಈಗ ಜಾತ್ರಾ ದಾಸೋಹ ಮುಕ್ತಾಯವಾಗಿದೆ. ಆದರೆ ಮಠದ ದಾಸೋಹ ಭವನದಲ್ಲಿ ನಿತ್ಯ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಇರುತ್ತದೆ. ಈ ದಿನಗಳಲ್ಲಿ ನಿತ್ಯವೂ ಸಾವಿರಾರು ಜನರು ಪ್ರಸಾದ ಸೇವಿಸುತ್ತಾರೆ.