ಕೊಪ್ಪಳ: ಹುಲಿಗೆಮ್ಮ ದೇವಿ ಹುಂಡಿಯಲ್ಲಿ ತಿಂಗಳಲ್ಲೇ ಕೋಟಿ ರೂಪಾಯಿ ಸಂಗ್ರಹ
2050 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ಮಹಿಳೆಯರು ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯನ್ನು ರಾಜ್ಯ ಸರಕಾರವು ಜಾರಿಗೊಳಿಸಿದ ಬೆನ್ನಲ್ಲೇ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರು ಸಂಖ್ಯೆಯೂ ಹೆಚ್ಚಿದೆ. ಇದರಿಂದಾಗಿ ಭಕ್ತರು ದೇವಸ್ಥಾನಗಳಿಗೆ ಅರ್ಪಿಸುವ ಭಕ್ತಿಯ ಕಾಣಿಕೆಯೂ ಹೆಚ್ಚಿದೆ. ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಗೆ ಹತ್ತಿರ ಹತ್ತಿರ ಕೋಟಿ ರೂಪಾಯಿಯಷ್ಟು ಕಾಣಿಕೆ ಸಲ್ಲಿಕೆಯಾಗಿದೆ.
ಆದಿ ಪರಾಶಕ್ತಿ ಎಂದು ಕರೆಸಿಕೊಳ್ಳುವ ಶಕ್ತಿ ದೇವತೆ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ 'ಶಕ್ತಿ ಯೋಜನೆ'ಯು ಬಲ ನೀಡಿದೆ. ಈಗ ದೇವಸ್ಥಾನಕ್ಕೆ ಮಹಿಳೆಯರ ದಂಡೆ ಹರಿದು ಬರುತ್ತಿದೆ. ಸಾಮಾನ್ಯವಾಗಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನ ಲಕ್ಷಾಂತರ ಜನ ಭಕ್ತರು ಹುಲಿಗೆಮ್ಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಈಗ ನಿತ್ಯವೂ ಜನ ಹುಲಿಗಿಗೆ ಬರುತ್ತಿದ್ದಾರೆ. ಇದರಿಂದಾಗಿ ಹುಲಿಗೆಮ್ಮ ದೇವಸ್ಥಾನವು ಸದಾ ಭಕ್ತರಿಂದ ತುಂಬಿರುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರು ದೇವಿಗೆ ತಮ್ಮ ಹರಿಕೆಯನ್ನು ಸಲ್ಲಿಸುತ್ತಿದ್ದಾರೆ.
ಬುಧುವಾರ ಹುಲಿಗೆಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಟ್ಟು 99 ಲಕ್ಷದ ಎಪ್ಪತ್ತು ಸಾವರಿ ರೂಪಾಯಿ ನಗದು ಸಂಗ್ರಹವನ್ನು ಎಣಿಸಲಾಗಿದೆ. ಇದರೊಂದಿಗೆ 225 ಗ್ರಾಂ ಬಂಗಾರ, 14 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಮೇನಲ್ಲಿ ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ 1.02 ಕೋಟಿ ರೂಪಾಯಿ ನಗದು, 350 ಗ್ರಾಂ ಬಂಗಾರ ಹಾಗೂ 15 ಕೆಜಿ ಬೆಳ್ಳಿ ಸಂಗ್ರಹವಾಗಿತ್ತು. ಕಳೆದ ತಿಂಗಳು ದೇವಿಯ ಜಾತ್ರೆ ಇತ್ತು. ಜಾತ್ರೆಯ ಸಂದರ್ಭದಲ್ಲಿ ಸಹಜವಾಗಿ ಬಹಳಷ್ಟು ಜನ ಬರುತ್ತಾರೆ. ಜಾತ್ರೆಯ ನಂತರವೂ ಇದೇ ಮೊದಲ ಬಾರಿಗೆ ನಿತ್ಯವೂ ಅಪಾರ ಪ್ರಮಾಣದ ಭಕ್ತರು ಬರುತ್ತಿರುವುದಾಗಿ ಇಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆದಿ ಪರಾಶಕ್ತಿ ಎಂದು ಕರೆಸಿಕೊಳ್ಳುವ ಶಕ್ತಿ ದೇವತೆ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ 'ಶಕ್ತಿ ಯೋಜನೆ'ಯು ಬಲ ನೀಡಿದೆ. ಈಗ ದೇವಸ್ಥಾನಕ್ಕೆ ಮಹಿಳೆಯರ ದಂಡೆ ಹರಿದು ಬರುತ್ತಿದೆ. ಸಾಮಾನ್ಯವಾಗಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನ ಲಕ್ಷಾಂತರ ಜನ ಭಕ್ತರು ಹುಲಿಗೆಮ್ಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಈಗ ನಿತ್ಯವೂ ಜನ ಹುಲಿಗಿಗೆ ಬರುತ್ತಿದ್ದಾರೆ. ಇದರಿಂದಾಗಿ ಹುಲಿಗೆಮ್ಮ ದೇವಸ್ಥಾನವು ಸದಾ ಭಕ್ತರಿಂದ ತುಂಬಿರುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರು ದೇವಿಗೆ ತಮ್ಮ ಹರಿಕೆಯನ್ನು ಸಲ್ಲಿಸುತ್ತಿದ್ದಾರೆ.
ಬುಧುವಾರ ಹುಲಿಗೆಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಟ್ಟು 99 ಲಕ್ಷದ ಎಪ್ಪತ್ತು ಸಾವರಿ ರೂಪಾಯಿ ನಗದು ಸಂಗ್ರಹವನ್ನು ಎಣಿಸಲಾಗಿದೆ. ಇದರೊಂದಿಗೆ 225 ಗ್ರಾಂ ಬಂಗಾರ, 14 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಮೇನಲ್ಲಿ ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ 1.02 ಕೋಟಿ ರೂಪಾಯಿ ನಗದು, 350 ಗ್ರಾಂ ಬಂಗಾರ ಹಾಗೂ 15 ಕೆಜಿ ಬೆಳ್ಳಿ ಸಂಗ್ರಹವಾಗಿತ್ತು. ಕಳೆದ ತಿಂಗಳು ದೇವಿಯ ಜಾತ್ರೆ ಇತ್ತು. ಜಾತ್ರೆಯ ಸಂದರ್ಭದಲ್ಲಿ ಸಹಜವಾಗಿ ಬಹಳಷ್ಟು ಜನ ಬರುತ್ತಾರೆ. ಜಾತ್ರೆಯ ನಂತರವೂ ಇದೇ ಮೊದಲ ಬಾರಿಗೆ ನಿತ್ಯವೂ ಅಪಾರ ಪ್ರಮಾಣದ ಭಕ್ತರು ಬರುತ್ತಿರುವುದಾಗಿ ಇಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.