ಕೊಪ್ಪಳ: ಹುಲಿಗೆಮ್ಮ ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಳ, ಅಭಿವೃದ್ಧಿ ಕಾಣದ ಮೂಲಭೂತ ಸೌಲಭ್ಯ
1043 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ದೇವಸ್ಥಾನಗಳು ಫುಲ್ ರಷ್ ಇವೆ. ಆದರೆ, ಕೊಪ್ಪಳದ ಹುಲಿಗಿಯ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಮೂಲಭೂತ ಸೌಲಭ್ಯದಿಂದ ಬೇಸರಗೊಳ್ಳುತ್ತಿದ್ದಾರೆ. ಆಡಳಿತ ಮಂಡಳಿ ಅಭಿವೃದ್ದಿಗಾಗಿ ನೀಲನಕ್ಷೆ ಸಿದ್ದಪಡಿಸಿದೆ. ಆದರೆ ಸರಕಾರದ ಅನುಮತಿ ಸಿಗದೆ ಇನ್ನೂ ಅಭಿವೃದ್ದಿಯಾಗುತ್ತಿಲ್ಲ.
ಕರ್ನಾಟಕ, ಆಂಧ್ರ, ತೆಲಂಗಾಣ ಹಾಗು ಮಹಾರಾಷ್ಟ್ರದಿಂದ ಲಕ್ಷಾಂತರ ಜನರು ಬರುವ ಆದಿ ಪರಾಶಕ್ತಿ ಶ್ರೀ ಹುಲಿಗೆಮ್ಮ ದೇವಸ್ಥಾನ ಅಭಿವೃದ್ದಿ ಕುರಿತು ದಶಕಗಳಿಂದ ಕೇಳಿ ಬರುತ್ತಿದೆ. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಮೂಲಭೂತ ಸೌಲಭ್ಯ ಕೊರತೆ ಇದೆ. ರಸ್ತೆಯಲ್ಲಿಯೇ ಮಲಗುವ ಅನಿವಾರ್ಯತೆ ಇದೆ. ಮಂಗಳವಾರ. ಶುಕ್ರವಾರ ಹಾಗು ಪ್ರತಿ ಹುಣ್ಣಿಮೆಯ ದಿನ ದೇವಸ್ಥಾನಕ್ಕೆ ಸರಿಸುಮಾರು ಒಂದು, ಒಂದೂವರೆ ಲಕ್ಷ ಜನ ಭಕ್ತರು ಬರುತ್ತಾರೆ. ಇತ್ತೀಚಿಗೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ದೇವಸ್ಥಾನಕ್ಕೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ. ಬಂದ ಭಕ್ತರು ಇಲ್ಲಿ ಅವ್ಯವಸ್ಥೆಯಿಂದಾಗಿ ಪರದಾಡುವಂತಾಗಿದೆ.
ಈ ಮಧ್ಯೆ ಹತ್ತು ವರ್ಷಗಳ ಹಿಂದೆ ದೇವಸ್ಥಾನದ ಗರ್ಭ ಗುಡಿ ಸೇರಿ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶದಿಂದ ನೀಲನಕ್ಷೆ ಸಿದ್ದಪಡಿಸಲಾಗಿದೆ. ಧಾರ್ಮಿಕ ಪರಿಷತ್ತು ಸಹ ಈ ನೀಲನಕ್ಷೆಯನ್ನು ಒಪ್ಪಿಕೊಂಡಿದೆ. ಈಗ ನೀಲನಕ್ಷೆಯ ಪ್ರಕಾರ ಅಭಿವೃದ್ದಿ ಪಡಿಸಬೇಕು. ಆದರೆ ಸರಕಾರದ ನಿರ್ಲಕ್ಷ್ಯದಿಂದಾಗಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ.
ಕರ್ನಾಟಕ, ಆಂಧ್ರ, ತೆಲಂಗಾಣ ಹಾಗು ಮಹಾರಾಷ್ಟ್ರದಿಂದ ಲಕ್ಷಾಂತರ ಜನರು ಬರುವ ಆದಿ ಪರಾಶಕ್ತಿ ಶ್ರೀ ಹುಲಿಗೆಮ್ಮ ದೇವಸ್ಥಾನ ಅಭಿವೃದ್ದಿ ಕುರಿತು ದಶಕಗಳಿಂದ ಕೇಳಿ ಬರುತ್ತಿದೆ. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಮೂಲಭೂತ ಸೌಲಭ್ಯ ಕೊರತೆ ಇದೆ. ರಸ್ತೆಯಲ್ಲಿಯೇ ಮಲಗುವ ಅನಿವಾರ್ಯತೆ ಇದೆ. ಮಂಗಳವಾರ. ಶುಕ್ರವಾರ ಹಾಗು ಪ್ರತಿ ಹುಣ್ಣಿಮೆಯ ದಿನ ದೇವಸ್ಥಾನಕ್ಕೆ ಸರಿಸುಮಾರು ಒಂದು, ಒಂದೂವರೆ ಲಕ್ಷ ಜನ ಭಕ್ತರು ಬರುತ್ತಾರೆ. ಇತ್ತೀಚಿಗೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ದೇವಸ್ಥಾನಕ್ಕೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ. ಬಂದ ಭಕ್ತರು ಇಲ್ಲಿ ಅವ್ಯವಸ್ಥೆಯಿಂದಾಗಿ ಪರದಾಡುವಂತಾಗಿದೆ.
ಈ ಮಧ್ಯೆ ಹತ್ತು ವರ್ಷಗಳ ಹಿಂದೆ ದೇವಸ್ಥಾನದ ಗರ್ಭ ಗುಡಿ ಸೇರಿ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶದಿಂದ ನೀಲನಕ್ಷೆ ಸಿದ್ದಪಡಿಸಲಾಗಿದೆ. ಧಾರ್ಮಿಕ ಪರಿಷತ್ತು ಸಹ ಈ ನೀಲನಕ್ಷೆಯನ್ನು ಒಪ್ಪಿಕೊಂಡಿದೆ. ಈಗ ನೀಲನಕ್ಷೆಯ ಪ್ರಕಾರ ಅಭಿವೃದ್ದಿ ಪಡಿಸಬೇಕು. ಆದರೆ ಸರಕಾರದ ನಿರ್ಲಕ್ಷ್ಯದಿಂದಾಗಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ.