ಕಾಂಗ್ರೆಸ್ ಸರಕಾರ ಬೀಳುತ್ತೆ, ಜನಾರ್ದನರೆಡ್ಡಿ ಕೊಪ್ಪಳ ಉಸ್ತುವಾರಿ ಸಚಿವರಾಗುತ್ತಾರೆ: ಬಸವರಾಜ ದಡೇಸಗೂರು ಭವಿಷ್ಯ!
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿ
ಕೊಪ್ಪಳ: ಜೂನ್ ನಂತರ ರಾಜ್ಯ ಸರಕಾರ ಬೀಳುತ್ತೆ. ಗಾಲಿ ಜನಾರ್ದನರೆಡ್ಡಿ ಅವರು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗುತ್ತಾರೆ. ಬೇಕಿದ್ದರೆ ರಕ್ತದಲ್ಲಿ ಬರೆದು ಕೊಡುತ್ತೀನಿ ಎಂದು ಮಾಜಿ ಶಾಸಕ ಬಸವರಾಜ ದಡೇಸಗೂರು ಹೇಳಿದರು.
ಅವರು ಬುಧವಾರ ಮರಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬಸವರಾಜ ದಡೇಸೂಗೂರುಗೆ ರಾಜಕೀಯ ಗಂಧಗಾಳಿ ಗೊತ್ತಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳುತ್ತಿದ್ದಾರೆ. ದೇವರು ಒಳ್ಳೆಯದು ಮಾಡಲಿ. ತಂಗಡಗಿಯಷ್ಟು ಮುಠ್ಠಾಳ ನಾನಲ್ಲ. ಕನಕಗಿರಿ ಕ್ಷೇತ್ರದಲ್ಲಿ ಕೊಲೆ ಮಾಡಿಸಿದ್ದು ಯಾರಾದರೂ ಇದ್ದರೆ ಅದು ಶಿವರಾಜ ತಂಗಡಗಿ. ಲೂಟಿ ಮಾಡಿದ್ದು, ಸಣ್ಣ ನೀರಾವರಿ ಇಲಾಖೆಯಲ್ಲಿ 40 ಕೋಟಿ ಲೂಟಿ ಮಾಡಿದ್ದಾರೆ ಎಂದು ತಂಗಡಗಿ ವಿರುದ್ಧ ಆರೋಪಿಸಿದರು.
''ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಯಾಕೆ ಸಿದ್ದರಾಮಯ್ಯ ಸೋತಿಲ್ಲವಾ? ನನ್ನ ಮೇಲಿನ ಕೋಪದಿಂದ ಜನರು ನನ್ನನ್ನು 2023ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ. 2028ರಲ್ಲಿ ನಾನು ಮತ್ತೆ ಗೆಲ್ಲುತ್ತೇನೆ. ಜೂನ್ನಲ್ಲಿ ಕಾಂಗ್ರೆಸ್ ಸರಕಾರ ಬಿದ್ದು ಹೋಗುತ್ತದೆ. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಆಪರೇಷನ್ ಆಗುತ್ತದೆಯೋ, ಹೊಲಿಗೆ ಹಾಕುತ್ತೇವೆಯೋ ನೋಡಿ... ಬರುವ ಜೂನ್ನಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ .ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗುತ್ತಾರೆ. ಇದನ್ನು ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಡಬಲ್ ಇಂಜಿನ್ ಸರಕಾರ ಬರುತ್ತದೆ'' ಎಂದು ಹೇಳಿದರು.
ಅವರು ಬುಧವಾರ ಮರಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬಸವರಾಜ ದಡೇಸೂಗೂರುಗೆ ರಾಜಕೀಯ ಗಂಧಗಾಳಿ ಗೊತ್ತಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳುತ್ತಿದ್ದಾರೆ. ದೇವರು ಒಳ್ಳೆಯದು ಮಾಡಲಿ. ತಂಗಡಗಿಯಷ್ಟು ಮುಠ್ಠಾಳ ನಾನಲ್ಲ. ಕನಕಗಿರಿ ಕ್ಷೇತ್ರದಲ್ಲಿ ಕೊಲೆ ಮಾಡಿಸಿದ್ದು ಯಾರಾದರೂ ಇದ್ದರೆ ಅದು ಶಿವರಾಜ ತಂಗಡಗಿ. ಲೂಟಿ ಮಾಡಿದ್ದು, ಸಣ್ಣ ನೀರಾವರಿ ಇಲಾಖೆಯಲ್ಲಿ 40 ಕೋಟಿ ಲೂಟಿ ಮಾಡಿದ್ದಾರೆ ಎಂದು ತಂಗಡಗಿ ವಿರುದ್ಧ ಆರೋಪಿಸಿದರು.
''ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಯಾಕೆ ಸಿದ್ದರಾಮಯ್ಯ ಸೋತಿಲ್ಲವಾ? ನನ್ನ ಮೇಲಿನ ಕೋಪದಿಂದ ಜನರು ನನ್ನನ್ನು 2023ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ. 2028ರಲ್ಲಿ ನಾನು ಮತ್ತೆ ಗೆಲ್ಲುತ್ತೇನೆ. ಜೂನ್ನಲ್ಲಿ ಕಾಂಗ್ರೆಸ್ ಸರಕಾರ ಬಿದ್ದು ಹೋಗುತ್ತದೆ. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಆಪರೇಷನ್ ಆಗುತ್ತದೆಯೋ, ಹೊಲಿಗೆ ಹಾಕುತ್ತೇವೆಯೋ ನೋಡಿ... ಬರುವ ಜೂನ್ನಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ .ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗುತ್ತಾರೆ. ಇದನ್ನು ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಡಬಲ್ ಇಂಜಿನ್ ಸರಕಾರ ಬರುತ್ತದೆ'' ಎಂದು ಹೇಳಿದರು.