ಎಂಬಿ ಪಾಟೀಲ್ ಏನು ಗೃಹ ಮಂತ್ರಿನೋ, ಮುಖ್ಯಮುಂತ್ರಿನೋ: ಸಂಸದ ಸಂಗಣ್ಣ ಕರಡಿ
1061 views
koppal ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ರಾಜ್ಯದಲ್ಲಿ ಏನು ಎಮರ್ಜೆನ್ಸಿ ಇದೆಯಾ? ಜನರಿಗೆ ಮಾತನಾಡುವ ವಾಕ್ ಸ್ವಾತಂತ್ರ್ಯ ಇಲ್ಲವಾ? ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
''ಚಕ್ರವರ್ತಿ ಸೂಲಿಬೇಲಿಯವರನ್ನು ಜೈಲಿಗೆ ಹಾಕುತ್ತೀನಿ ಎನ್ನುವ ಎಂಬಿ ಪಾಟೀಲ, ಹಾಗಾದರೆ ಇವರೇನು ಗೃಹ ಮಂತ್ರಿಗಳಾ? ಇಲ್ಲ ಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ಎ ಬಿ ಪಾಟೀಲ ಸೇರಿ ಹಲವರು ಉದ್ದಟತನದಿಂದ ಮಾತನಾಡುತ್ತಿದ್ದಾರೆ, ದಬ್ಬಾಳಿಕೆ ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.
ಹಿಂದಿನ ಸರಕಾರದ ಹಗರಣಗಳನ್ನು ತನಿಖೆ ಮಾಡುತ್ತೀನಿ ಎನ್ನುತ್ತಾರೆ. ತನಿಖೆ ಮಾಡಲಿ, ನಮ್ಮದೇನೂ ವಿರೋಧವಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹ ತನಿಖೆ ಮಾಡಲಿ ಎಂದಿದ್ದಾರೆ. ಮೇಲ್ನೋಟಕ್ಕೆ ದ್ವೇಷ ರಾಜಕಾರಣ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು. ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಗೋವುಗಳ ಬಗ್ಗೆ ಜನರಲ್ಲಿ ಪೂಜನೀಯ ಭಾವನೆ ಇದೆ. ಗೋ ಮೂತ್ರ ಕೃಷಿಕರ ಭೂಮಿಗೆ ಬೇಕು, ಗೋವುಗಳ ಉತ್ಪನ್ನಗಳು ಶ್ರೇಷ್ಠವಾಗಿವೆ. ಗೋವು ಸಾಕಾಣಿಕೆಗೆ ಉತ್ತೇಜನ ನೀಡಬೇಕು. ಆದರೆ, ಮುದಿ ಗೋವುಗಳನ್ನು ಕಡಿಯುತ್ತೇವೆ ಎನ್ನುತ್ತಾರೆ. ಕಾನೂನು ಅರಿತವರು ಈ ರೀತಿ ಮಾತನಾಡಬಾರದು ಎಂದರು.
''ಚಕ್ರವರ್ತಿ ಸೂಲಿಬೇಲಿಯವರನ್ನು ಜೈಲಿಗೆ ಹಾಕುತ್ತೀನಿ ಎನ್ನುವ ಎಂಬಿ ಪಾಟೀಲ, ಹಾಗಾದರೆ ಇವರೇನು ಗೃಹ ಮಂತ್ರಿಗಳಾ? ಇಲ್ಲ ಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ಎ ಬಿ ಪಾಟೀಲ ಸೇರಿ ಹಲವರು ಉದ್ದಟತನದಿಂದ ಮಾತನಾಡುತ್ತಿದ್ದಾರೆ, ದಬ್ಬಾಳಿಕೆ ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.
ಹಿಂದಿನ ಸರಕಾರದ ಹಗರಣಗಳನ್ನು ತನಿಖೆ ಮಾಡುತ್ತೀನಿ ಎನ್ನುತ್ತಾರೆ. ತನಿಖೆ ಮಾಡಲಿ, ನಮ್ಮದೇನೂ ವಿರೋಧವಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹ ತನಿಖೆ ಮಾಡಲಿ ಎಂದಿದ್ದಾರೆ. ಮೇಲ್ನೋಟಕ್ಕೆ ದ್ವೇಷ ರಾಜಕಾರಣ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು. ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಗೋವುಗಳ ಬಗ್ಗೆ ಜನರಲ್ಲಿ ಪೂಜನೀಯ ಭಾವನೆ ಇದೆ. ಗೋ ಮೂತ್ರ ಕೃಷಿಕರ ಭೂಮಿಗೆ ಬೇಕು, ಗೋವುಗಳ ಉತ್ಪನ್ನಗಳು ಶ್ರೇಷ್ಠವಾಗಿವೆ. ಗೋವು ಸಾಕಾಣಿಕೆಗೆ ಉತ್ತೇಜನ ನೀಡಬೇಕು. ಆದರೆ, ಮುದಿ ಗೋವುಗಳನ್ನು ಕಡಿಯುತ್ತೇವೆ ಎನ್ನುತ್ತಾರೆ. ಕಾನೂನು ಅರಿತವರು ಈ ರೀತಿ ಮಾತನಾಡಬಾರದು ಎಂದರು.