ಕೊಪ್ಪಳ: ಎರಡು ವರ್ಷದಿಂದ ಪಡಿತರ ಅಕ್ಕಿ ಗುಣಮಟ್ಟ ಕುಸಿತ, ಮಹಿಳೆಯರ ದೂರು
1064 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ರಾಜ್ಯದಲ್ಲಿ ಈಗ ಅನ್ನಭಾಗ್ಯದ ಮೂಲಕ 10 ಕೆಜಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಸರಕಾರ ಜಾರಿಗೆ ತಂದಿದೆ. ಅಕ್ಕಿ ಲಭ್ಯತೆ ಕೊರತೆ ಹಿನ್ನೆಲೆಯಲ್ಲಿ ಸರಕಾರ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸುತ್ತಿದೆ. ''ಈಗ ನೀಡುತ್ತಿರುವ ಅಕ್ಕಿ ತೀರಾ ಕಳಪೆಯಾಗಿದೆ. ಅಕ್ಕಿಯು ಪ್ಲಾಸ್ಟಿಕ್ ಮಾದರಿಯಲ್ಲಿದೆ. ಈ ಅಕ್ಕಿಯಿಂದ ಅನ್ನ ಮಾಡಿ ಊಟ ಮಾಡಿದರೆ ಅನಾರೋಗ್ಯ ಉಂಟಾಗುತ್ತಿದೆ. ನೀವು ನಮಗೆ 2000 ರೂಪಾಯಿ ಕೊಡೋದು ಬೇಡ. ಉತ್ತಮವಾದ ಅಕ್ಕಿ ನೀಡಿ'' ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.
ಪಡಿತರದಲ್ಲಿ ನೀಡುವ ಅಕ್ಕಿಯು ತೀರಾ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3.56 ಲಕ್ಷ ಪಡಿತರ ಕಾರ್ಡುದಾರರಿದ್ದು, ಒಟ್ಟು ಹನ್ನೆರಡು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪಡಿತರದಲ್ಲಿ ಅಕ್ಕಿ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು 1.03 ಲಕ್ಷ ಕ್ವಿಂಟಾಲ್ ಅಕ್ಕಿಯನ್ನು ಬಡವರಿಗೆ ವಿತರಿಸಲಾಗುತ್ತಿದೆ. ಆದರೆ, ಈ ಅಕ್ಕಿ ಈಗ ಬಡವರು ಊಟ ಮಾಡಲು ಆಗದಷ್ಟು ಕಳಪೆಯಾಗಿವೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಎರಡು ವರ್ಷಗಳ ಹಿಂದೆ ವಿತರಿಸುತ್ತಿದ್ದ ಅಕ್ಕಿ ಉತ್ತಮವಾಗಿರುತ್ತಿತ್ತು. ಆದರೆ ಈಗ ನೀಡುತ್ತಿರುವ ಅಕ್ಕಿಯು ನೀರಿನಲ್ಲಿ ಹಾಕಿದರೆ ಬಹುತೇಕ ತೇಲುತ್ತದೆ. ಅಕ್ಕಿ ಕುದಿಸಿದರೂ ಬೆಯ್ಯುವುದಿಲ್ಲ. ಇದು ಪ್ಲಾಸ್ಟಿಕ್ ಮಾದರಿಯಲ್ಲಿದೆ. ಈ ಅಕ್ಕಿ ಅನ್ನವನ್ನು ಊಟ ಮಾಡಿದರೆ ಅನಾರೋಗ್ಯ ಒಳಗಾಗ್ತಿದ್ದೇವೆ. ಈ ಅಕ್ಕಿ ಊಟ ಮಾಡಲು ಆಗೋದಿಲ್ಲ. ಕೊಡುವುದಾದರೆ ಉತ್ತಮವಾದ ಅಕ್ಕಿ ನೀಡಿ. ನೀವು ನೀಡುವ 2000 ರೂಪಾಯಿ ನಮಗೆ ಬೇಡ, ಹೊಟ್ಟೆ ತುಂಬುವಂಥ ಅಕ್ಕಿ ನೀಡಿ ಎಂದು ಭಾಗ್ಯನಗರದ ಮಹಿಳೆಯರು ಕಳಪೆ ಅಕ್ಕಿಯನ್ನು ಪ್ರದರ್ಶಿಸಿದರು.
ಅನ್ನ ಭಾಗ್ಯ ಯೋಜನೆಯ ಅಕ್ಕಿ ಸಂಗ್ರಹಿಸುವಾಗ ಗುಣಮಟ್ಟದ ಅಕ್ಕಿಯನ್ನು ಖರೀದಿಸಿ ಸಂಗ್ರಹಿಸಬೇಕು. ಬಡವರಿಗೆ ನೀಡುವ ಅಕ್ಕಿ ಗುಣಮಟ್ಟದಾಗಿರಲಿ ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ. ಆದರೆ, ತೇಲುವಂಥಿರುವ, ಪ್ಲಾಸ್ಟಿಕ್ ರೀತಿ ಕಾಣುವ ಈ ಅಕ್ಕಿಯ ಬಗ್ಗೆ ಈ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ''ಇದು ಪ್ಲಾಸ್ಟಿಕ್ ಅಲ್ಲ ಸಾರವರ್ಧಿತ ಅಕ್ಕಿ'' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಒಂದು ಕ್ವಿಂಟಾಲ್ ಅಕ್ಕಿಗೆ ಒಂದು ಕೆಜಿಯಷ್ಟು ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತದೆ. ಆದರೆ, ಇಲ್ಲಿನ ಸಮಸ್ಯೆ ಬರೀ ಸಾರವರ್ಧಿತ ಅಕ್ಕಿಯದಾ? ಅಥವಾ ಕಳಪೆ ಅಕ್ಕಿಯದಾ, ಅದನ್ನು ಅಧಿಕಾರಿಗಳೇ ಹೇಳಬೇಕಿದೆ.
ಪಡಿತರದಲ್ಲಿ ನೀಡುವ ಅಕ್ಕಿಯು ತೀರಾ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3.56 ಲಕ್ಷ ಪಡಿತರ ಕಾರ್ಡುದಾರರಿದ್ದು, ಒಟ್ಟು ಹನ್ನೆರಡು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪಡಿತರದಲ್ಲಿ ಅಕ್ಕಿ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು 1.03 ಲಕ್ಷ ಕ್ವಿಂಟಾಲ್ ಅಕ್ಕಿಯನ್ನು ಬಡವರಿಗೆ ವಿತರಿಸಲಾಗುತ್ತಿದೆ. ಆದರೆ, ಈ ಅಕ್ಕಿ ಈಗ ಬಡವರು ಊಟ ಮಾಡಲು ಆಗದಷ್ಟು ಕಳಪೆಯಾಗಿವೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಎರಡು ವರ್ಷಗಳ ಹಿಂದೆ ವಿತರಿಸುತ್ತಿದ್ದ ಅಕ್ಕಿ ಉತ್ತಮವಾಗಿರುತ್ತಿತ್ತು. ಆದರೆ ಈಗ ನೀಡುತ್ತಿರುವ ಅಕ್ಕಿಯು ನೀರಿನಲ್ಲಿ ಹಾಕಿದರೆ ಬಹುತೇಕ ತೇಲುತ್ತದೆ. ಅಕ್ಕಿ ಕುದಿಸಿದರೂ ಬೆಯ್ಯುವುದಿಲ್ಲ. ಇದು ಪ್ಲಾಸ್ಟಿಕ್ ಮಾದರಿಯಲ್ಲಿದೆ. ಈ ಅಕ್ಕಿ ಅನ್ನವನ್ನು ಊಟ ಮಾಡಿದರೆ ಅನಾರೋಗ್ಯ ಒಳಗಾಗ್ತಿದ್ದೇವೆ. ಈ ಅಕ್ಕಿ ಊಟ ಮಾಡಲು ಆಗೋದಿಲ್ಲ. ಕೊಡುವುದಾದರೆ ಉತ್ತಮವಾದ ಅಕ್ಕಿ ನೀಡಿ. ನೀವು ನೀಡುವ 2000 ರೂಪಾಯಿ ನಮಗೆ ಬೇಡ, ಹೊಟ್ಟೆ ತುಂಬುವಂಥ ಅಕ್ಕಿ ನೀಡಿ ಎಂದು ಭಾಗ್ಯನಗರದ ಮಹಿಳೆಯರು ಕಳಪೆ ಅಕ್ಕಿಯನ್ನು ಪ್ರದರ್ಶಿಸಿದರು.
ಅನ್ನ ಭಾಗ್ಯ ಯೋಜನೆಯ ಅಕ್ಕಿ ಸಂಗ್ರಹಿಸುವಾಗ ಗುಣಮಟ್ಟದ ಅಕ್ಕಿಯನ್ನು ಖರೀದಿಸಿ ಸಂಗ್ರಹಿಸಬೇಕು. ಬಡವರಿಗೆ ನೀಡುವ ಅಕ್ಕಿ ಗುಣಮಟ್ಟದಾಗಿರಲಿ ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ. ಆದರೆ, ತೇಲುವಂಥಿರುವ, ಪ್ಲಾಸ್ಟಿಕ್ ರೀತಿ ಕಾಣುವ ಈ ಅಕ್ಕಿಯ ಬಗ್ಗೆ ಈ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ''ಇದು ಪ್ಲಾಸ್ಟಿಕ್ ಅಲ್ಲ ಸಾರವರ್ಧಿತ ಅಕ್ಕಿ'' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಒಂದು ಕ್ವಿಂಟಾಲ್ ಅಕ್ಕಿಗೆ ಒಂದು ಕೆಜಿಯಷ್ಟು ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತದೆ. ಆದರೆ, ಇಲ್ಲಿನ ಸಮಸ್ಯೆ ಬರೀ ಸಾರವರ್ಧಿತ ಅಕ್ಕಿಯದಾ? ಅಥವಾ ಕಳಪೆ ಅಕ್ಕಿಯದಾ, ಅದನ್ನು ಅಧಿಕಾರಿಗಳೇ ಹೇಳಬೇಕಿದೆ.