ಬಳ್ಳಾರಿಯಲ್ಲಿ ಶ್ರೀರಾಮುಲು ಸೋಲ್ತಾರೆ ಅಂತಾ ಸರ್ವೇ ಹೇಳಿದೆ ; ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ
1106 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಗಂಗಾವತಿ (ಕೊಪ್ಪಳ) : ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಬಿಜೆಪಿ ಟಿಕೆಟ್ ನೀಡಿದರೆ ಸೋಲ್ತಾರೆ ಎಂಬ ವರದಿ ಬಂದಿದೆ. ಅದಕ್ಕೆ ಟಿಕೆಟ್ ನೀಡಬಾರದು ಅನ್ನೋ ಲೆಕ್ಕಾಚಾರದಲ್ಲಿ ಬಿಜೆಪಿಯವರಿದ್ದಾರೆ. ನನಗೂ ಬಿಜೆಪಿಗೇನು ಸಂಬಂಧ? ನಾನ್ಯಾಕೆ ಶ್ರೀರಾಮುಲುಗೆ ಟಿಕೆಟ್ ನೀಡೋದಕ್ಕೆ ವಿರೋಧ ವ್ಯಕ್ತಪಡಿಸಲಿ ಎಂದು ಗಂಗಾವತಿಯ ಕೆಆರ್ಪಿಪಿ ಶಾಸಕ ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.
ಶ್ರೀರಾಮುಲುಗೆ ಬಿಜೆಪಿ ಟಿಕೆಟ್ ನೀಡಲು ಜನಾರ್ದನ ರೆಡ್ಡಿ ವಿರೋಧ ಎಂಬ ವಿಚಾರಕ್ಕೆ ಆನೆಗುಂದಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷನು ಅಲ್ಲ, ಆ ಪಕ್ಷದ ಕೋರ್ ಕಮಿಟಿಯಲ್ಲಿ ಕೂಡ ಇಲ್ಲ, ಬಿಜೆಪಿಯ ಮಿತ್ರಪಕ್ಷದಲ್ಲಿಯೂ ನಾನು ಇಲ್ಲ. ಹೀಗಾಗಿ ನಾನು ಶ್ರೀರಾಮುಲುಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದೇನೆ ಎನ್ನುವುದು ಸುಳ್ಳು ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ಜವಾಬ್ದಾರಿ ತಗೊಂಡು ಬಂದವರಿಗೆ ಸರ್ವೇ ರಿಪೋರ್ಟ್ ಬಂದಿದೆ. ಬಳ್ಳಾರಿಯಲ್ಲಿ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದರೆ ಸೋಲ್ತಾರೆ ಎಂದು ಸರ್ವೇ ರಿಪೋರ್ಟ್ ಬಂದಿದೆ. ಹೀಗಾಗಿ ಶ್ರೀರಾಮುಲುಗೆ ಟಿಕೆಟ್ ನೀಡಬಾರದು ಅನ್ನೋ ಲೆಕ್ಕಾಚಾರ ಇರಬಹುದು. ವಿಧಾನಸಭೆ ಚುನಾವಣೆಯಲ್ಲಿ ಕೂಡಾ ಎಲ್ಲಾ ಸರ್ವೇಗಳಲ್ಲಿ ಕೂಡ ಶ್ರೀರಾಮುಲು ಸೋಲ್ತಾರೆ ಎಂದು ಬಂದಿತ್ತು ಎಂದರು.
ಶ್ರೀರಾಮುಲು ಸೋತರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತೆ ಅಂತ ಜವಾಬ್ದಾರಿ ತೆಗೆದುಕೊಂಡವರಿಗೆ ಆತಂಕ ಇದೆ. ನಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎನ್ನುವ ಭಯವಿದೆ. ಇನ್ನು, ದೆಹಲಿಯಲ್ಲಿ ಇನ್ನೊಂದು ವರ್ಗವಿದೆ. ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿ ತೆಗೆದುಕೊಂಡವರಿಗೆ ವಿರೋಧ ಮಾಡೋ ಬಣವಿದೆ. ಅವರಿಗೆ ಶ್ರೀರಾಮುಲುಗೆ ಟಿಕೆಟ್ ಕೊಡಿಸಿ, ಗೆದ್ದರೇ ನಮ್ಮ ಕ್ಯಾಂಡಿಡೇಟ್ ಗೆಲ್ತಾನೆ. ಸೋತರೆ ರಾಜ್ಯದಲ್ಲಿ ಜವಾಬ್ದಾರಿ ತೆಗೆದುಕೊಂಡವರ ಮೇಲೆ ತೆಂಗಿನಕಾಯಿ ಒಡೆದಂತಾಗುತ್ತದೆ ಅಂತ ಕೂತಿದ್ದಾರೆ ಎಂದರು.
ಬಿಜೆಪಿಗೂ ಜನಾರ್ದನ ರೆಡ್ಡಿಗೂ ಏನು ಸಂಬಂಧ? ಇಬ್ಬರ ಜಗಳ ತಂದು ನನ್ನ ತಲೆಗೆ ಕಟ್ಟೋದು ಸರಿಯಲ್ಲ. ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಬಿಂಬಿಸುತ್ತಿದ್ದಾರೆ. ಹೀಗೆ ಮುಂದುವರಿಸಿದ್ರೆ ನಾನು ಗಂಭೀರವಾಗಿ ಮಾತನಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಬಿಜೆಪಿಯಲ್ಲಿ ಬಿಎಲ್ ಸಂತೋಷ್ ಬಣ ಮತ್ತು ಬಿವೈ ವಿಜಯೇಂದ್ರ ಬಣದ ನಡುವಿನ ಗುದ್ದಾಟವನ್ನು ಜನಾರ್ದನ ರೆಡ್ಡಿ ಪ್ರಸ್ತಾಪಿಸಿದರು.
ನಾನು ಬಿಜೆಪಿ ಜೊತೆ ಮೈತ್ರಿಗೆ ನಾಲ್ಕು ಸ್ಥಾನ ಕೇಳಿದ್ದೇನೆ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಕಲ್ಯಾಣ ರಾಜ್ಯದ ಪ್ರಗತಿ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯಲು ಈ ರೀತಿ ಅಪಪ್ರಚಾರ ಮಾಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಬರೋರನ್ನು ನಿಲ್ಲಿಸಲು ಕೆಲ ಬಿಜೆಪಿ ನಾಯಕರು ಈ ರೀತಿ ಮಾಡ್ತಿದ್ದಾರೆ. ಅನವಶ್ಯಕವಾಗಿ ನನ್ನ ಹೆಸರನ್ನು ಎಳೆದು ತರಬಾರದು. ನಾನು ನೇರವಾಗಿ ಹೃದಯದಿಂದ ರಾಜಕೀಯ ಮಾಡ್ತೇನೆ. ದಿಲ್ಲಿ ವ್ಯಕ್ತಿ ಮತ್ತು ರಾಜ್ಯದ ಕುಟುಂಬದ ಜಗಳದಲ್ಲಿ ಬೇರೆಯವರನ್ನು ವಿಲನ್ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಶ್ರೀರಾಮುಲುಗೆ ಬಿಜೆಪಿ ಟಿಕೆಟ್ ನೀಡಲು ಜನಾರ್ದನ ರೆಡ್ಡಿ ವಿರೋಧ ಎಂಬ ವಿಚಾರಕ್ಕೆ ಆನೆಗುಂದಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷನು ಅಲ್ಲ, ಆ ಪಕ್ಷದ ಕೋರ್ ಕಮಿಟಿಯಲ್ಲಿ ಕೂಡ ಇಲ್ಲ, ಬಿಜೆಪಿಯ ಮಿತ್ರಪಕ್ಷದಲ್ಲಿಯೂ ನಾನು ಇಲ್ಲ. ಹೀಗಾಗಿ ನಾನು ಶ್ರೀರಾಮುಲುಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದೇನೆ ಎನ್ನುವುದು ಸುಳ್ಳು ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ಜವಾಬ್ದಾರಿ ತಗೊಂಡು ಬಂದವರಿಗೆ ಸರ್ವೇ ರಿಪೋರ್ಟ್ ಬಂದಿದೆ. ಬಳ್ಳಾರಿಯಲ್ಲಿ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದರೆ ಸೋಲ್ತಾರೆ ಎಂದು ಸರ್ವೇ ರಿಪೋರ್ಟ್ ಬಂದಿದೆ. ಹೀಗಾಗಿ ಶ್ರೀರಾಮುಲುಗೆ ಟಿಕೆಟ್ ನೀಡಬಾರದು ಅನ್ನೋ ಲೆಕ್ಕಾಚಾರ ಇರಬಹುದು. ವಿಧಾನಸಭೆ ಚುನಾವಣೆಯಲ್ಲಿ ಕೂಡಾ ಎಲ್ಲಾ ಸರ್ವೇಗಳಲ್ಲಿ ಕೂಡ ಶ್ರೀರಾಮುಲು ಸೋಲ್ತಾರೆ ಎಂದು ಬಂದಿತ್ತು ಎಂದರು.
ಶ್ರೀರಾಮುಲು ಸೋತರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತೆ ಅಂತ ಜವಾಬ್ದಾರಿ ತೆಗೆದುಕೊಂಡವರಿಗೆ ಆತಂಕ ಇದೆ. ನಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎನ್ನುವ ಭಯವಿದೆ. ಇನ್ನು, ದೆಹಲಿಯಲ್ಲಿ ಇನ್ನೊಂದು ವರ್ಗವಿದೆ. ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿ ತೆಗೆದುಕೊಂಡವರಿಗೆ ವಿರೋಧ ಮಾಡೋ ಬಣವಿದೆ. ಅವರಿಗೆ ಶ್ರೀರಾಮುಲುಗೆ ಟಿಕೆಟ್ ಕೊಡಿಸಿ, ಗೆದ್ದರೇ ನಮ್ಮ ಕ್ಯಾಂಡಿಡೇಟ್ ಗೆಲ್ತಾನೆ. ಸೋತರೆ ರಾಜ್ಯದಲ್ಲಿ ಜವಾಬ್ದಾರಿ ತೆಗೆದುಕೊಂಡವರ ಮೇಲೆ ತೆಂಗಿನಕಾಯಿ ಒಡೆದಂತಾಗುತ್ತದೆ ಅಂತ ಕೂತಿದ್ದಾರೆ ಎಂದರು.
ಬಿಜೆಪಿಗೂ ಜನಾರ್ದನ ರೆಡ್ಡಿಗೂ ಏನು ಸಂಬಂಧ? ಇಬ್ಬರ ಜಗಳ ತಂದು ನನ್ನ ತಲೆಗೆ ಕಟ್ಟೋದು ಸರಿಯಲ್ಲ. ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಬಿಂಬಿಸುತ್ತಿದ್ದಾರೆ. ಹೀಗೆ ಮುಂದುವರಿಸಿದ್ರೆ ನಾನು ಗಂಭೀರವಾಗಿ ಮಾತನಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಬಿಜೆಪಿಯಲ್ಲಿ ಬಿಎಲ್ ಸಂತೋಷ್ ಬಣ ಮತ್ತು ಬಿವೈ ವಿಜಯೇಂದ್ರ ಬಣದ ನಡುವಿನ ಗುದ್ದಾಟವನ್ನು ಜನಾರ್ದನ ರೆಡ್ಡಿ ಪ್ರಸ್ತಾಪಿಸಿದರು.
ನಾನು ಬಿಜೆಪಿ ಜೊತೆ ಮೈತ್ರಿಗೆ ನಾಲ್ಕು ಸ್ಥಾನ ಕೇಳಿದ್ದೇನೆ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಕಲ್ಯಾಣ ರಾಜ್ಯದ ಪ್ರಗತಿ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯಲು ಈ ರೀತಿ ಅಪಪ್ರಚಾರ ಮಾಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಬರೋರನ್ನು ನಿಲ್ಲಿಸಲು ಕೆಲ ಬಿಜೆಪಿ ನಾಯಕರು ಈ ರೀತಿ ಮಾಡ್ತಿದ್ದಾರೆ. ಅನವಶ್ಯಕವಾಗಿ ನನ್ನ ಹೆಸರನ್ನು ಎಳೆದು ತರಬಾರದು. ನಾನು ನೇರವಾಗಿ ಹೃದಯದಿಂದ ರಾಜಕೀಯ ಮಾಡ್ತೇನೆ. ದಿಲ್ಲಿ ವ್ಯಕ್ತಿ ಮತ್ತು ರಾಜ್ಯದ ಕುಟುಂಬದ ಜಗಳದಲ್ಲಿ ಬೇರೆಯವರನ್ನು ವಿಲನ್ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.