ಸಿಎಂ ಸಿದ್ದರಾಮಯ್ಯಗೆ 'ಮಗನೇ' ಎಂದ ಅನಂತಕುಮಾರ ಹೆಗಡೆ, ಸಚಿವ ಶಿವರಾಜ್ ತಂಗಡಗಿ ಸಿಡಿಮಿಡಿ
1222 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ, ಇದೇ ರೀತಿ ಮಾತನಾಡಿದರೆ 'ಮಗನೇ' ಅಲ್ಲಿಗೆ ಬಂದು ಉತ್ತರ ಹೇಳುತ್ತೀನಿ ಎಂದು ಸಚಿವ ಶಿವರಾಜ ತಂಗಡಗಿ ಏಕವಚನದಲ್ಲಿ ಎಚ್ಚರಿಕೆ ನೀಡಿದ್ದಾರೆ. ಅವರು ಕಾರಟಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
''ಹಿರಿಯರು ನಮಗೆ ಸಂಸ್ಕಾರ ಕಲಿಸಿದ್ದಾರೆ. ನಿಮ್ಮ ಭಾಷೆಗಿಂತ ಕೆಟ್ಟದಾಗಿ ಮಾತನಾಡೋದಕ್ಕೆ ಬರುತ್ತೆ. ನಾವು ಉತ್ತರ ಕರ್ನಾಟಕದವರು, ನಮ್ಮ ಶೈಲಿಯ ಮಾತು ನಿಮಗೆ ಗೊತ್ತಿದೆ. ನೀನು ಸಿದ್ದರಾಮಯ್ಯ ಸಾಹೇಬರ ಕಾಲಿನ ಧೂಳಿನ ಸಮನಲ್ಲ, ಸಿದ್ದರಾಮಯ್ಯ ಅವರಷ್ಟು ರಾಜಕೀಯ ಅನುಭವದಷ್ಟು ವಯಸ್ಸಾಗಿಲ್ಲ. ನಾವು ಈ ಮಾತು ಹೇಳಬಾರದು. ಆದರೆ ಅನಿವಾರ್ಯವಾಗಿ ಈ ಪದ ಪ್ರಯೋಗ ಮಾಡಿದ್ದೇನೆ'' ಎಂದರು.
''ಅನಂತಕುಮಾರ ಈಗ ವೈಲೆಂಟ್ ಆಗಿದ್ದೇನೆ ಎನ್ನುತ್ತಾರೆ. ನಿಮ್ಮ ವೈಲೆಂಟ್ ನಮಗೆ ಗೊತ್ತಿಲ್ಲೇನು. ಚುನಾವಣೆ ಬಂದಾಗ ದೇವರು, ಮಂತ್ರಾಕ್ಷತೆ ನೆನಪಾಗುತ್ತೆ. ನಿಮಗೆ ಜನರ ಹಸಿವಿನ ಬಗ್ಗೆ ಏನು ಗೊತ್ತಿದೆ. ಮುಂದೆ ನಮ್ಮ ನಾಯಕರ ಬಗ್ಗೆ ಮಾತನಾಡಿದರೆ, ಹುಷಾರ್'' ಎಂದು ಎಚ್ಚರಿಕೆ ನೀಡಿದರು. ಪ್ರಿಯಾಂಕಾ ಗಾಂಧಿ ಕೊಪ್ಪಳದಿಂದ ಸ್ಪರ್ಧಿಸಿದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷದಿಂದ ಸಮೀಕ್ಷೆಗಳು ನಡೆದಿರುತ್ತವೆ. ಸಮೀಕ್ಷೆಯ ನಂತರ ವರಿಷ್ಠರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಬಂದರೆ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವಾಗಿದ್ದು, ರಾಯರಡ್ಡಿ ಅವರಿಂದ ಬಿಜೆಪಿಯವರಿಂದ ಯಾವುದೇ ಅಭಿವೃದ್ದಿಯಾಗಿಲ್ಲ. ಬರುವ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಗೆಲ್ಲಲಿದೆ ಎಂದರು.
''ಹಿರಿಯರು ನಮಗೆ ಸಂಸ್ಕಾರ ಕಲಿಸಿದ್ದಾರೆ. ನಿಮ್ಮ ಭಾಷೆಗಿಂತ ಕೆಟ್ಟದಾಗಿ ಮಾತನಾಡೋದಕ್ಕೆ ಬರುತ್ತೆ. ನಾವು ಉತ್ತರ ಕರ್ನಾಟಕದವರು, ನಮ್ಮ ಶೈಲಿಯ ಮಾತು ನಿಮಗೆ ಗೊತ್ತಿದೆ. ನೀನು ಸಿದ್ದರಾಮಯ್ಯ ಸಾಹೇಬರ ಕಾಲಿನ ಧೂಳಿನ ಸಮನಲ್ಲ, ಸಿದ್ದರಾಮಯ್ಯ ಅವರಷ್ಟು ರಾಜಕೀಯ ಅನುಭವದಷ್ಟು ವಯಸ್ಸಾಗಿಲ್ಲ. ನಾವು ಈ ಮಾತು ಹೇಳಬಾರದು. ಆದರೆ ಅನಿವಾರ್ಯವಾಗಿ ಈ ಪದ ಪ್ರಯೋಗ ಮಾಡಿದ್ದೇನೆ'' ಎಂದರು.
''ಅನಂತಕುಮಾರ ಈಗ ವೈಲೆಂಟ್ ಆಗಿದ್ದೇನೆ ಎನ್ನುತ್ತಾರೆ. ನಿಮ್ಮ ವೈಲೆಂಟ್ ನಮಗೆ ಗೊತ್ತಿಲ್ಲೇನು. ಚುನಾವಣೆ ಬಂದಾಗ ದೇವರು, ಮಂತ್ರಾಕ್ಷತೆ ನೆನಪಾಗುತ್ತೆ. ನಿಮಗೆ ಜನರ ಹಸಿವಿನ ಬಗ್ಗೆ ಏನು ಗೊತ್ತಿದೆ. ಮುಂದೆ ನಮ್ಮ ನಾಯಕರ ಬಗ್ಗೆ ಮಾತನಾಡಿದರೆ, ಹುಷಾರ್'' ಎಂದು ಎಚ್ಚರಿಕೆ ನೀಡಿದರು. ಪ್ರಿಯಾಂಕಾ ಗಾಂಧಿ ಕೊಪ್ಪಳದಿಂದ ಸ್ಪರ್ಧಿಸಿದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷದಿಂದ ಸಮೀಕ್ಷೆಗಳು ನಡೆದಿರುತ್ತವೆ. ಸಮೀಕ್ಷೆಯ ನಂತರ ವರಿಷ್ಠರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಬಂದರೆ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವಾಗಿದ್ದು, ರಾಯರಡ್ಡಿ ಅವರಿಂದ ಬಿಜೆಪಿಯವರಿಂದ ಯಾವುದೇ ಅಭಿವೃದ್ದಿಯಾಗಿಲ್ಲ. ಬರುವ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಗೆಲ್ಲಲಿದೆ ಎಂದರು.