ಜೂನ್ ಬಂದರೂ ಮಳೆಯಾಗಿಲ್ಲ, ಬಿತ್ತನೆಗೆ ಭೂಮಿ ಹದ ಮಾಡಿ ಮುಗಿಲು ನೋಡುತ್ತಿರುವ ರೈತ
1071 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಜೂನ್ ಬಂದರೂ ಮಳೆಯಾಗಿಲ್ಲ. ಒಣಪ್ರದೇಶದ ರೈತರು ಬಿತ್ತನೆಗೆ ಭೂಮಿ ಹದ ಮಾಡಿಕೊಂಡು ಈಗ ಮುಗಿಲು ನೋಡುತ್ತಾ ಕುಳಿತಕೊಳ್ಳುವಂತಾಗಿದೆ. ಇನ್ನೂ ಒಂದು ವಾರದಲ್ಲಿ ಮಳೆಯಾಗದಿದ್ದರೆ ಮುಂಗಾರು ಹಂಗಾಮು ಸಂಪೂರ್ಣವಾಗಿ ವಿಫಲವಾಗುವ ಸಾಧ್ಯತೆ ಇದೆ.
ಶೇ 70 ರಷ್ಟು ಪ್ರದೇಶ ಮಳೆಯಾಶ್ರಿತದಲ್ಲಿ ಬೆಳೆಯುವ ಭೂಮಿ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಶೇ 80 ರಷ್ಟು ಪ್ರದೇಶವು ಕೆಂಪು ಮಣ್ಣಿನಿಂದ ಕೂಡಿದೆ. ಕೆಂಪು ಮಣ್ಣು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಮಾತ್ರ ಬಿತ್ತನೆ ಮಾಡುತ್ತಾರೆ. ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಕೈಕೊಡುವ ಸಾಧ್ಯತೆ ಇದೆ. ಈಗಾಗಲೇ ರೋಹಿಣಿ ಮಳೆ ಹೋಗಿ ಮೃಗಶಿರ ಮಳೆ ಬರುತ್ತಿದೆ. ಭರಣಿ ಹಾಗೂ ರೋಹಿಣಿ ಮಳೆಗೆ ಬಿತ್ತನೆ ಮಾಡಿದರೆ ಮುಂಗಾರು ಬೆಳೆಯು ಬರುತ್ತಿದೆ. ಆದರೆ ಜೂನ್ ಬಂದರೂ ಮಳೆಯಾಗದೆ ಇರುವದರಿಂದ ರೈತರು ಈ ವರ್ಷ ಬರ ಬರುತ್ತದೆಯೇ ಎಂಬ ಆತಂಕದಲ್ಲಿದ್ದಾರೆ.
ಈಗಾಗಲೇ ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿದ್ದಾರೆ. ಸಕಾಲಕ್ಕೆ ಮಳೆಯಾಗಿದ್ದರೆ ಜೋಳ, ಹೆಸರು ಬಿತ್ತನೆ ಮಾಡುತ್ತಿದ್ದರು, ಆದರೆ ಮಳೆಯಾಗಿಲ್ಲ. ಮುಂದಿನ ದಿನಗಳಲ್ಲಿ ಮೆಕ್ಕೆಜೋಳ ಹಾಗು ಸಜ್ಜೆ ಮಾತ್ರ ಬೆಳೆಯಬಹುದು ಎನ್ನುತ್ತಾರೆ. ಮುಂಗಾರು ಪೂರ್ವ ಜಿಲ್ಲೆಯಲ್ಲಿ 12040 ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಈ ಬಾರಿ ಅಧಿಕ ಬಿಸಲು ಇರುವುದರಿಂದ ಹತ್ತಿಯ ಇಳುವರಿ ಸಹ ಕಡಿಮೆಯಾಗಿ ಹತ್ತಿಗಾಗಿ ಮಾಡಿರುವ ಖರ್ಚು ಸಹ ಬರುವುದಿಲ್ಲ ಎಂಬುದು ರೈತರ ಅಳಲು.
ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯು ವಾಡಿಕೆಯಂತೆ 63.4 ಮಳೆಯಾಗಬೇಕಿತ್ತು. ಆದರೆ ಆಗಿದ್ದು 52 ಎಂ ಎಂ ಮಳೆಯೆ ಮಳೆ ಕೊರತೆಯಾಗಿದ್ದರಿಂದ ಈಗ ಬಿತ್ತನೆ ಮಾಡಬಾರದೆಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶೇ 70 ರಷ್ಟು ಪ್ರದೇಶ ಮಳೆಯಾಶ್ರಿತದಲ್ಲಿ ಬೆಳೆಯುವ ಭೂಮಿ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಶೇ 80 ರಷ್ಟು ಪ್ರದೇಶವು ಕೆಂಪು ಮಣ್ಣಿನಿಂದ ಕೂಡಿದೆ. ಕೆಂಪು ಮಣ್ಣು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಮಾತ್ರ ಬಿತ್ತನೆ ಮಾಡುತ್ತಾರೆ. ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಕೈಕೊಡುವ ಸಾಧ್ಯತೆ ಇದೆ. ಈಗಾಗಲೇ ರೋಹಿಣಿ ಮಳೆ ಹೋಗಿ ಮೃಗಶಿರ ಮಳೆ ಬರುತ್ತಿದೆ. ಭರಣಿ ಹಾಗೂ ರೋಹಿಣಿ ಮಳೆಗೆ ಬಿತ್ತನೆ ಮಾಡಿದರೆ ಮುಂಗಾರು ಬೆಳೆಯು ಬರುತ್ತಿದೆ. ಆದರೆ ಜೂನ್ ಬಂದರೂ ಮಳೆಯಾಗದೆ ಇರುವದರಿಂದ ರೈತರು ಈ ವರ್ಷ ಬರ ಬರುತ್ತದೆಯೇ ಎಂಬ ಆತಂಕದಲ್ಲಿದ್ದಾರೆ.
ಈಗಾಗಲೇ ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿದ್ದಾರೆ. ಸಕಾಲಕ್ಕೆ ಮಳೆಯಾಗಿದ್ದರೆ ಜೋಳ, ಹೆಸರು ಬಿತ್ತನೆ ಮಾಡುತ್ತಿದ್ದರು, ಆದರೆ ಮಳೆಯಾಗಿಲ್ಲ. ಮುಂದಿನ ದಿನಗಳಲ್ಲಿ ಮೆಕ್ಕೆಜೋಳ ಹಾಗು ಸಜ್ಜೆ ಮಾತ್ರ ಬೆಳೆಯಬಹುದು ಎನ್ನುತ್ತಾರೆ. ಮುಂಗಾರು ಪೂರ್ವ ಜಿಲ್ಲೆಯಲ್ಲಿ 12040 ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಈ ಬಾರಿ ಅಧಿಕ ಬಿಸಲು ಇರುವುದರಿಂದ ಹತ್ತಿಯ ಇಳುವರಿ ಸಹ ಕಡಿಮೆಯಾಗಿ ಹತ್ತಿಗಾಗಿ ಮಾಡಿರುವ ಖರ್ಚು ಸಹ ಬರುವುದಿಲ್ಲ ಎಂಬುದು ರೈತರ ಅಳಲು.
ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯು ವಾಡಿಕೆಯಂತೆ 63.4 ಮಳೆಯಾಗಬೇಕಿತ್ತು. ಆದರೆ ಆಗಿದ್ದು 52 ಎಂ ಎಂ ಮಳೆಯೆ ಮಳೆ ಕೊರತೆಯಾಗಿದ್ದರಿಂದ ಈಗ ಬಿತ್ತನೆ ಮಾಡಬಾರದೆಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.