ನನ್ನ ಬಗ್ಗೆ ಮಾತನಾಡಲು ಮಧು ಬಂಗಾರಪ್ಪಗೆ ಯೋಗ್ಯತೆ ಇಲ್ಲ; ಪ್ರಣವಾನಂದ ಶ್ರೀ ಕಿಡಿ
1170 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಸಚಿವ ಮಧು ಬಂಗಾರಪ್ಪ ವರ್ತಿಸುತ್ತಿದ್ದಾರೆ ಎಂದು ಈಡಿಗ ಸಮುದಾಯದ ಶ್ರೀ ಪ್ರಣವಾನಂದ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿದ ಸ್ವಾಮೀಜಿ, ಸಚಿವ ಸ್ಥಾನ ಇದೆ ಅಂತ ಹೆದರಿಸಬಹುದು. ಸ್ವಾಮೀಜಿಯನ್ನು ಸೈಡ್ಲೈನ್ ಮಾಡಬಹುದು ಅಂತ ತಿಳಿದಿರಬಹುದು. ಆದ್ರೆ ಅದು ಅಸಾಧ್ಯ ಎಂದು ಕಿಡಿಕಾರಿದ ಅವರು, ಈಡಿಗ ಸಮಾಜಕ್ಕೆ ಮಧುಬಂಗಾರಪ್ಪ ಕೊಡುಗೆ ಏನು..?, ಸಮುದಾಯವನ್ನೇ ಎತ್ತಿಕಟ್ಟುವ, ಬೇರೆ ದಿಕ್ಕಿಗೆ ಎಳೆಯುವ ಕೆಲಸ ಮಧುಬಂಗಾರಪ್ಪ ಮಾಡ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರು ಈಡಿಗ ಸಮುದಾಯವನ್ನು ಒಡೆಯುವಂತಹ ಕೆಲಸ ಮಾಡ್ತಿದ್ದಾರೆ. ಮಧು ಬಂಗಾರಪ್ಪ ಅವರನ್ನು ಮುಂದೆ ಇಟ್ಟುಕೊಂಡು ಸಮಾಜ ಒಡೆಯುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡ್ತಿದ್ದಾರೆ, ಈ ಕುರಿತು ತಕ್ಷಣವೇ ಡಿ.ಕೆ.ಶಿವಕುಮಾರ್ ಮಧ್ಯವಹಿಸಬೇಕು. ಸಮಾಜದಲ್ಲಿ ಸರ್ಕಾರ ಬಾರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮಧುಬಂಗಾರಪ್ಪಗೆ ಸಚಿವ ಸ್ಥಾನ ಸಿಕ್ಕಿರೋದು ಸಮಾಜದ ಕೋಟಾದಿಂದ. ಅದನ್ನು ಮಧುಬಂಗಾರಪ್ಪ ಮರೆಯಬಾರದು. ಪ್ರಣಾವನಾಂದ ಸ್ವಾಮೀಜಿಯನ್ನು ಸೈಡ್ಲೈನ್ ಮಾಡೋದು ಮಧುಬಂಗಾರಪ್ಪ ಅವರ ಜೀವನದಲ್ಲೇ ಅಸಾಧ್ಯ. ನನ್ನ ಬಗ್ಗೆ ಮಾತನಾಡೋಕೆ ಮಧುಬಂಗಾರಪ್ಪರಿಗೆ ಏನು ಯೋಗ್ಯತೆ ಇದೆ. ಅವರಿಗೆ ಹಕ್ಕು ಕೂಡ ಇಲ್ಲ ಎಂದು ಸ್ವಾಮಿಜಿ ವಾಗ್ಗಾಳಿ ಮಾಡಿದರು. ಮಧುಬಂಗಾರಪ್ಪ ಅವರ ನೆಲೆ ಯಾವುದು. ಒಂದು ಸಾರಿ ಬಿಜೆಪಿ, ಒಂದು ಸಾರಿ ಜೆಡಿಎಸ್, ಒಂದು ಸಾರಿ ಕಾಂಗ್ರೆಸ್ ಇವರ ಸ್ಟಾಂಡ್ ಯಾವುದು ಎಂದು ಪ್ರಶ್ನಿಸಿದ ಸ್ವಾಮೀಜಿ. ಇನ್ನೂ ಕಾಂತರಾಜು ಅವರ ವರದಿ ಜಾರಿ ಆಗಬೇಕು. ಜಾರಿ ಆದಾಗ ಹಿಂದುಳಿದ ವರ್ಗದ ಜನ್ರಿಗೆ ಅನುಕೂಲ ಆಗಲಿದೆ ಎಂದು ಸ್ವಾಮೀಜಿ ಹೇಳಿದರು.
ಗಂಗಾವತಿಯಲ್ಲಿ ಮಾತನಾಡಿದ ಸ್ವಾಮೀಜಿ, ಸಚಿವ ಸ್ಥಾನ ಇದೆ ಅಂತ ಹೆದರಿಸಬಹುದು. ಸ್ವಾಮೀಜಿಯನ್ನು ಸೈಡ್ಲೈನ್ ಮಾಡಬಹುದು ಅಂತ ತಿಳಿದಿರಬಹುದು. ಆದ್ರೆ ಅದು ಅಸಾಧ್ಯ ಎಂದು ಕಿಡಿಕಾರಿದ ಅವರು, ಈಡಿಗ ಸಮಾಜಕ್ಕೆ ಮಧುಬಂಗಾರಪ್ಪ ಕೊಡುಗೆ ಏನು..?, ಸಮುದಾಯವನ್ನೇ ಎತ್ತಿಕಟ್ಟುವ, ಬೇರೆ ದಿಕ್ಕಿಗೆ ಎಳೆಯುವ ಕೆಲಸ ಮಧುಬಂಗಾರಪ್ಪ ಮಾಡ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರು ಈಡಿಗ ಸಮುದಾಯವನ್ನು ಒಡೆಯುವಂತಹ ಕೆಲಸ ಮಾಡ್ತಿದ್ದಾರೆ. ಮಧು ಬಂಗಾರಪ್ಪ ಅವರನ್ನು ಮುಂದೆ ಇಟ್ಟುಕೊಂಡು ಸಮಾಜ ಒಡೆಯುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡ್ತಿದ್ದಾರೆ, ಈ ಕುರಿತು ತಕ್ಷಣವೇ ಡಿ.ಕೆ.ಶಿವಕುಮಾರ್ ಮಧ್ಯವಹಿಸಬೇಕು. ಸಮಾಜದಲ್ಲಿ ಸರ್ಕಾರ ಬಾರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮಧುಬಂಗಾರಪ್ಪಗೆ ಸಚಿವ ಸ್ಥಾನ ಸಿಕ್ಕಿರೋದು ಸಮಾಜದ ಕೋಟಾದಿಂದ. ಅದನ್ನು ಮಧುಬಂಗಾರಪ್ಪ ಮರೆಯಬಾರದು. ಪ್ರಣಾವನಾಂದ ಸ್ವಾಮೀಜಿಯನ್ನು ಸೈಡ್ಲೈನ್ ಮಾಡೋದು ಮಧುಬಂಗಾರಪ್ಪ ಅವರ ಜೀವನದಲ್ಲೇ ಅಸಾಧ್ಯ. ನನ್ನ ಬಗ್ಗೆ ಮಾತನಾಡೋಕೆ ಮಧುಬಂಗಾರಪ್ಪರಿಗೆ ಏನು ಯೋಗ್ಯತೆ ಇದೆ. ಅವರಿಗೆ ಹಕ್ಕು ಕೂಡ ಇಲ್ಲ ಎಂದು ಸ್ವಾಮಿಜಿ ವಾಗ್ಗಾಳಿ ಮಾಡಿದರು. ಮಧುಬಂಗಾರಪ್ಪ ಅವರ ನೆಲೆ ಯಾವುದು. ಒಂದು ಸಾರಿ ಬಿಜೆಪಿ, ಒಂದು ಸಾರಿ ಜೆಡಿಎಸ್, ಒಂದು ಸಾರಿ ಕಾಂಗ್ರೆಸ್ ಇವರ ಸ್ಟಾಂಡ್ ಯಾವುದು ಎಂದು ಪ್ರಶ್ನಿಸಿದ ಸ್ವಾಮೀಜಿ. ಇನ್ನೂ ಕಾಂತರಾಜು ಅವರ ವರದಿ ಜಾರಿ ಆಗಬೇಕು. ಜಾರಿ ಆದಾಗ ಹಿಂದುಳಿದ ವರ್ಗದ ಜನ್ರಿಗೆ ಅನುಕೂಲ ಆಗಲಿದೆ ಎಂದು ಸ್ವಾಮೀಜಿ ಹೇಳಿದರು.