ಬೆಳಕಿನ ಚಿತ್ತಾರ ; ಅತ್ಯಂತ ವೈಭವದಿಂದ ಜರುಗಿದ ಕೊಪ್ಪಳ ಗವಿಮಠ ತೆಪ್ಪೋತ್ಸವ..!
1095 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ : ಜಿಲ್ಲೆಯ ಗವಿಮಠದಲ್ಲಿ ತೆಪ್ಪೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಜನರ ಮಧ್ಯೆ ದೀಪಗಳಿಂದ ಅಲಂಕೃತವಾಗಿರುವ ತೆಪ್ಪ ಕೆರೆಯಲ್ಲಿ ತೇಲಾಡಿತು. ಈ ಸಂದರ್ಭದಲ್ಲಿ ಗಂಗಾರತಿಯನ್ನು ಕೂಡ ಮಾಡಲಾಯಿತು.
ದಕ್ಷಿಣ ಭಾರತ ಮಹಾಕುಂಬಮೇಳ ಎಂಬ ಖ್ಯಾತಿ ಹೊಂದಿರುವ ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಜಾತ್ರಾತೋತ್ಸವ ವಿಜೃಂಭಣೆಯಿಂದ ಆರಂಭವಾಗಿದೆ. ಈ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ಕಳೆದ ಮೂರು ವರ್ಷಗಳಿಂದ ಮಠದ ಆವರಣದಲ್ಲಿಯ ಕೆರೆಯಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಯುತ್ತಾ ಇದೆ. ಈ ಬಾರಿಯೂ ಕೂಡ ತೆಪ್ಪೋತ್ಸವ ಅತ್ಯಂತ ಅದ್ದೂರಿಯಾಗಿ ನಡೆದಿದೆ.
ಜಾತ್ರೆಯ ಹಿನ್ನೆಲೆಯಲ್ಲಿ ಮಠದಲ್ಲಿ ದೀಪಾಲಂಕಾರ ಜೋರಾಗಿದೆ. ದೀಪಗಳಿಂದ ಅಲಂಕೃತಗೊಂಡಿರುವ ತೆಪ್ಪವನ್ನು ಕೆರೆಯಲ್ಲಿ ತೇಲಿ ಬಿಟ್ಟಿದ್ದರು. ಭಕ್ತರು ಬಣ್ಣ ಬಣ್ಣದ ತೆಪ್ಪವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಕೆರೆಯ ಅಂಗಳದಲ್ಲಿರುವ ಈಶ್ವರ ದೇವಸ್ಥಾನ ಸೇರಿ ಕೆರೆಯ ದಡದಲ್ಲಿ ಹರಿಯಾಣದಿಂದ ಬಂದ ಅರ್ಚಕರು ಗಂಗಾರತಿ ಬೆಳಗಿದರು.
ದಕ್ಷಿಣ ಭಾರತ ಮಹಾಕುಂಬಮೇಳ ಎಂಬ ಖ್ಯಾತಿ ಹೊಂದಿರುವ ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಜಾತ್ರಾತೋತ್ಸವ ವಿಜೃಂಭಣೆಯಿಂದ ಆರಂಭವಾಗಿದೆ. ಈ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ಕಳೆದ ಮೂರು ವರ್ಷಗಳಿಂದ ಮಠದ ಆವರಣದಲ್ಲಿಯ ಕೆರೆಯಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಯುತ್ತಾ ಇದೆ. ಈ ಬಾರಿಯೂ ಕೂಡ ತೆಪ್ಪೋತ್ಸವ ಅತ್ಯಂತ ಅದ್ದೂರಿಯಾಗಿ ನಡೆದಿದೆ.
ಜಾತ್ರೆಯ ಹಿನ್ನೆಲೆಯಲ್ಲಿ ಮಠದಲ್ಲಿ ದೀಪಾಲಂಕಾರ ಜೋರಾಗಿದೆ. ದೀಪಗಳಿಂದ ಅಲಂಕೃತಗೊಂಡಿರುವ ತೆಪ್ಪವನ್ನು ಕೆರೆಯಲ್ಲಿ ತೇಲಿ ಬಿಟ್ಟಿದ್ದರು. ಭಕ್ತರು ಬಣ್ಣ ಬಣ್ಣದ ತೆಪ್ಪವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಕೆರೆಯ ಅಂಗಳದಲ್ಲಿರುವ ಈಶ್ವರ ದೇವಸ್ಥಾನ ಸೇರಿ ಕೆರೆಯ ದಡದಲ್ಲಿ ಹರಿಯಾಣದಿಂದ ಬಂದ ಅರ್ಚಕರು ಗಂಗಾರತಿ ಬೆಳಗಿದರು.