ಕೊಪ್ಪಳ: ಕುಡಿಯುವ ನೀರಿಗೆ ತುಂಗಭದ್ರಾ ಮೂಲ, ಒಣಗಿದ ನದಿಯಿಂದ ಹತ್ತಾರು ಗ್ರಾಮಗಳ ಜನರು ತತ್ತರ
1105 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಿಂದಾಗಿ ಅವಧಿಯ ಮುನ್ನವೇ ತುಂಗಭದ್ರಾ ನದಿ ಒಣಗಿದೆ. ನದಿಯ ನೀರನ್ನೇ ಆಶ್ರಯಿಸಿದ ಕೊಪ್ಪಳ ಹಾಗೂ ಕುಕನೂರು ತಾಲೂಕಿನ 38 ಗ್ರಾಮಗಳಿಗೆ ಈಗಾಗಲೇ ಕುಡಿವ ನೀರಿಗೆ ಹಾಹಾಕಾರ ಎದ್ದಿದೆ.
ಸಾಮಾನ್ಯವಾಗಿ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಏಪ್ರಿಲ್ ಅಂತ್ಯಕ್ಕೆ ಅಲ್ಲಲ್ಲಿ ನದಿಯು ಒಣಗುತ್ತಿತ್ತು. ಆದರೆ ಫೆಬ್ರುವರಿ ತಿಂಗಳಿಂದಲೇ ನದಿಯಲ್ಲಿ ನೀರು ಪೂರ್ಣ ಬತ್ತಿ ಹೋಗಿದೆ. ಇದರಿಂದಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿವ ನೀರಿಗೆ ಕೊರತೆ ಉಂಟಾಗಿದೆ. 10 ವರ್ಷಗಳ ಹಿಂದೆ ಆರಂಭವಾದ ನಿಲೋಗಿಪುರ ಹಾಗೂ 38 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆಯಿಂದ ನೀರು ಪೂರೈಸಲಾಗುತ್ತಿತ್ತು. ಇದರಿಂದಾಗಿ ಕೊಪ್ಪಳ ತಾಲೂಕಿನ ಅಳವಂಡಿ, ಕವಲೂರು, ಕುಕನೂರು, ಇಟಗಿ ಗ್ರಾಮ ಸೇರಿ ಇತರ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುತ್ತಿತ್ತು. ಆದರೆ ಈ ಬಾರಿ ಅವಧಿ ಮುನ್ನವೇ ತುಂಗಭದ್ರಾ ನದಿ ಒಣಗಿದ್ದರಿಂದ ಈ ಗ್ರಾಮಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ.
ಲಕ್ಷಕ್ಕೂ ಹೆಚ್ಚು ಜನರು ಮುಂದಿನ ಮೂರು ತಿಂಗಳು ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಈ ಮಧ್ಯೆ ಜಿಲ್ಲಾಡಳಿತವು ನಿಲೋಗಿಪುರದಲ್ಲಿ ಈ ಮೊದಲು ಇದ್ದ ನಾಲ್ಕು ಕೊಳವೆಬಾವಿಯೊಂದಿಗೆ ಇನ್ನೂ ನಾಲ್ಕು ಕೊಳವೆ ಬಾವಿಗಳನ್ನು ಕೊರೆಸಿದ್ದು ಇಲ್ಲಿಂದ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಕುಕನೂರು ತಾಲೂಕಿನಲ್ಲಿ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಿಂಗಟಾಲೂರು, ಭದ್ರಾ ಜಲಾಶಯದಿಂದ 1.5 ಟಿಎಂಸಿ ನೀರನ್ನು ಇಷ್ಟರಲ್ಲಿಯೇ ನದಿಗೆ ಬಿಡಲಾಗುವುದು. ಈ ಸಂದರ್ಭದಲ್ಲಿ ನದಿಯಲ್ಲಿ ಒಡ್ಡು ಹಾಕಿಕೊಂಡು ಮುಂದಿನ ದಿನಗಳವರೆಗೂ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಈ ಬಾರಿಯ ಭೀಕರ ಬರವು ಜನ ಜಾನುವಾರುಗಳನ್ನು ತತ್ತರಿಸುವಂತೆ ಮಾಡಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದ್ದ ಜಿಲ್ಲಾಡಳಿತವು ಈಗ ಕುಡಿವ ನೀರಿಗಾಗಿ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದೆ. ಶೀಘ್ರವೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸುವಂತೆ ಜನರು ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಏಪ್ರಿಲ್ ಅಂತ್ಯಕ್ಕೆ ಅಲ್ಲಲ್ಲಿ ನದಿಯು ಒಣಗುತ್ತಿತ್ತು. ಆದರೆ ಫೆಬ್ರುವರಿ ತಿಂಗಳಿಂದಲೇ ನದಿಯಲ್ಲಿ ನೀರು ಪೂರ್ಣ ಬತ್ತಿ ಹೋಗಿದೆ. ಇದರಿಂದಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿವ ನೀರಿಗೆ ಕೊರತೆ ಉಂಟಾಗಿದೆ. 10 ವರ್ಷಗಳ ಹಿಂದೆ ಆರಂಭವಾದ ನಿಲೋಗಿಪುರ ಹಾಗೂ 38 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆಯಿಂದ ನೀರು ಪೂರೈಸಲಾಗುತ್ತಿತ್ತು. ಇದರಿಂದಾಗಿ ಕೊಪ್ಪಳ ತಾಲೂಕಿನ ಅಳವಂಡಿ, ಕವಲೂರು, ಕುಕನೂರು, ಇಟಗಿ ಗ್ರಾಮ ಸೇರಿ ಇತರ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುತ್ತಿತ್ತು. ಆದರೆ ಈ ಬಾರಿ ಅವಧಿ ಮುನ್ನವೇ ತುಂಗಭದ್ರಾ ನದಿ ಒಣಗಿದ್ದರಿಂದ ಈ ಗ್ರಾಮಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ.
ಲಕ್ಷಕ್ಕೂ ಹೆಚ್ಚು ಜನರು ಮುಂದಿನ ಮೂರು ತಿಂಗಳು ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಈ ಮಧ್ಯೆ ಜಿಲ್ಲಾಡಳಿತವು ನಿಲೋಗಿಪುರದಲ್ಲಿ ಈ ಮೊದಲು ಇದ್ದ ನಾಲ್ಕು ಕೊಳವೆಬಾವಿಯೊಂದಿಗೆ ಇನ್ನೂ ನಾಲ್ಕು ಕೊಳವೆ ಬಾವಿಗಳನ್ನು ಕೊರೆಸಿದ್ದು ಇಲ್ಲಿಂದ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಕುಕನೂರು ತಾಲೂಕಿನಲ್ಲಿ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಿಂಗಟಾಲೂರು, ಭದ್ರಾ ಜಲಾಶಯದಿಂದ 1.5 ಟಿಎಂಸಿ ನೀರನ್ನು ಇಷ್ಟರಲ್ಲಿಯೇ ನದಿಗೆ ಬಿಡಲಾಗುವುದು. ಈ ಸಂದರ್ಭದಲ್ಲಿ ನದಿಯಲ್ಲಿ ಒಡ್ಡು ಹಾಕಿಕೊಂಡು ಮುಂದಿನ ದಿನಗಳವರೆಗೂ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಈ ಬಾರಿಯ ಭೀಕರ ಬರವು ಜನ ಜಾನುವಾರುಗಳನ್ನು ತತ್ತರಿಸುವಂತೆ ಮಾಡಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದ್ದ ಜಿಲ್ಲಾಡಳಿತವು ಈಗ ಕುಡಿವ ನೀರಿಗಾಗಿ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದೆ. ಶೀಘ್ರವೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸುವಂತೆ ಜನರು ಆಗ್ರಹಿಸಿದ್ದಾರೆ.