ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಸಂಪರ್ಕ ಬಂದ್ ; ಯಾಕೆ ಗೊತ್ತಾ..?
ಫ್ಲೋ..
ಮಂಡ್ಯ ನಗರದಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ಹೆದ್ದಾರಿಯಿಂದ ಮಂಡ್ಯ ನಗರಕ್ಕೆ ಬರಲು ಅನುಕೂಲವಾಗುವಂತೆ ಇಂಡುವಾಳು ಗ್ರಾಮದ ಬಳಿ ಎಂಟ್ರಿ, ಎಕ್ಸಿಟ್ ನೀಡಲಾಗಿದೆ. ಇನ್ನು ಶ್ರೀರಂಗಪಟ್ಟಣ, ಮೈಸೂರಿಗೆ ಹೋಗುವವರು ಹೆದ್ದಾರಿ ಪ್ರವೇಶಿಸಿದರೆ ಗಣಂಗೂರು ಬಳಿಯ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿಸಲೇಬೇಕು. ಇಲ್ಲವೇ ಸರ್ವಿಸ್ ರಸ್ತೆಯನ್ನು ಅವಲಂಬಿಸಬೇಕಿದೆ.
ಫ್ಲೋ..
ಈವರೆಗೆ ಮಂಡ್ಯದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿಇಂಡುವಾಳು, ಕಾಳೇನಹಳ್ಳಿ, ತೂಬಿನಕೆರೆ, ಗರುಡನ ಉಕ್ಕಡ ಬಳಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಎಂಟ್ರಿ, ಎಕ್ಸಿಟ್ ನೀಡಲಾಗಿತ್ತು. ಹಾಗೆಯೇ ಮೈಸೂರಿನಿಂದ ಮಂಡ್ಯಗೆ ಬರುವ ಮಾರ್ಗದಲ್ಲಿ ನಾಗನಹಳ್ಳಿ ಗೇಟ್, ಗರುಡನ ಉಕ್ಕಡ, ಬ್ಯಾಡರಹಳ್ಳಿ ಗೇಟ್, ತೂಬಿನಕೆರೆ, ಕಾಳೇನಹಳ್ಳಿ, ಸುಂಡಹಳ್ಳಿ, ಇಂಡುವಾಳು ಬಳಿ ಎಂಟ್ರಿ-ಎಕ್ಸಿಟ್ ಕೊಡಲಾಗಿತ್ತು. ಆದ್ರೆ ಈಗ ಈ ಎಂಟ್ರಿ ಎಕ್ಸಿಟ್ಗಳನ್ನು ಬಹುತೇಕ ಕ್ಲೋಸ್ ಮಾಡಲಾಗಿದೆ. ಮಂಡ್ಯದಿಂದ ಶ್ರೀರಂಗಪಟ್ಟಣ, ಮೈಸೂರಿಗೆ ಕಾರು ಹಾಗೂ ಇತರ ವಾಹನಗಳಲ್ಲಿ ಸಂಚರಿಸುವವರು ಟೋಲ್ ಪಾವತಿಸಿಯೇ ಹೆದ್ದಾರಿಯಲ್ಲಿ ಸಾಗುವಂತೆ ಮಾಡಲಾಗಿದೆ. ಮಂಡ್ಯದಿಂದ ಮೈಸೂರಿಗೆ ಹೋಗುವವರು ಇಂಡುವಾಳು ಬಳಿ ಹೆದ್ದಾರಿ ಪ್ರವೇಶಿಸಿದರೆ ಟೋಲ್ ಪಾವತಿಸುವುದು ಅನಿವಾರ್ಯವಾಗಿದೆ.
ಫ್ಲೋ..
ಈವರೆಗೆ ಕಾರು ಪ್ರಯಾಣಿಕರು ಇಂಡುವಾಳು ಬಳಿ ಹೆದ್ದಾರಿ ಪ್ರವೇಶಿಸಿ, ತೂಬಿನಕೆರೆ ಬಳಿ ಸರ್ವಿಸ್ಗೆ ಹೋಗುತ್ತಿದ್ದರು. ಮತ್ತೆ ಗರುಡನ ಉಕ್ಕಡ ಬಳಿ ಹೆದ್ದಾರಿ ಪ್ರವೇಶಿಸಿ ಮೈಸೂರಿಗೆ ಹೋಗುತ್ತಿದ್ದರು. ತೂಬಿನಕೆರೆ ಮತ್ತು ಗರುಡನ ಉಕ್ಕಡ ನಡುವೆ ಎಂಟತ್ತು ಕಿ.ಮೀ. ದೂರವನ್ನು ಸರ್ವಿಸ್ ರಸ್ತೆಯಲ್ಲಿ ಕ್ರಮಿಸಿದರೆ ಮತ್ತೆ ಗರುಡನ ಉಕ್ಕಡದಿಂದ ಮೈಸೂರಿಗೆ ಸುಲಭವಾಗಿ ಹೋಗಬಹುದಿತ್ತು. ಹಾಗೆಯೇ ಮೈಸೂರಿನಿಂದ ಮಂಡ್ಯಗೆ ಬರುವವರು ನಗುವನಹಳ್ಳಿ ಗೇಟ್ವರೆಗೆ ಹೆದ್ದಾರಿಯಲ್ಲಿ ಬಂದು, ಸರ್ವಿಸ್ ರಸ್ತೆಗೆ ಹೋಗುತ್ತಿದ್ದರು. ಮತ್ತೆ ಶ್ರೀರಂಗಪಟ್ಟಣ ಮಾರ್ಗವಾಗಿ ಸಂಚರಿಸಿ ಬ್ಯಾಡರಹಳ್ಳಿ ಗೇಟ್ ಬಳಿ ಹೆದ್ದಾರಿ ಪ್ರವೇಶಿಸಿ ಇಂಡುವಾಳು ಬಳಿ ಸರ್ವಿಸ್ ರಸ್ತೆಗೆ ಬಂದು ಮಂಡ್ಯಗೆ ಆಗಮಿಸುತ್ತಿದ್ದರು. ಆದರೀಗ ನಗುವನಹಳ್ಳಿ ಗೇಟ್ ಬಳಿ ಮಾತ್ರವೇ ಎಂಟ್ರಿ, ಎಕ್ಸಿಟ್ ನೀಡಲಾಗಿತ್ತು.
ಫ್ಲೋ..
ಅದೂ ಅಲ್ಲಿನ ಹೋಟೆಲ್ನವರ ವ್ಯವಹಾರಕ್ಕೆ ಅನುಕೂಲವಾಗುವಂತೆ ಹೋಟೆಲ್ಗಳ ಮುಂದೆಯೇ ಹೆದ್ದಾರಿಯಿಂದ ಆಗಮನ, ಪ್ರವೇಶ ಮಾರ್ಗಗಳನ್ನು ನಿರ್ಮಿಸಲಾಗಿತ್ತು. ಗರುಡನ ಉಕ್ಕಡ ಬಳಿ ಹೆದ್ದಾರಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದ್ದು, ನಿರ್ಗಮನ ದ್ವಾರವನ್ನು ರಸ್ತೆ ವಿಭಜಕ ಬ್ಲಾಕ್ಗಳಿಂದ ಬಂದ್ ಮಾಡಲಾಗಿದೆ. ಬ್ಯಾಡರಹಳ್ಳಿ ಗೇಟ್, ತೂಬಿನಕೆರೆ ಬಳಿಯ ಎಂಟ್ರಿಗಳನ್ನು ಇದೇ ರೀತಿ ಬಂದ್ ಮಾಡಲಾಗಿದೆ. ಮಂಡ್ಯ ನಗರಕ್ಕೆ ಹತ್ತಿರದಲ್ಲಿರುವ ಕಾಳೇನಹಳ್ಳಿ-ಯಲಿಯೂರು ಗೇಟ್ ಬಳಿ ಆಗಮನ, ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಫ್ಲೋ..
ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಹೆದ್ದಾರಿಗೆ ಕಲ್ಪಿಸಿದ ಆಗಮನ, ನಿರ್ಗಮನ ದ್ವಾರಗಳನ್ನು ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತೂಬಿನಕೆರೆ, ಕಾಳೇನಹಳ್ಳಿ, ಇಂಡುವಾಳು ಸೇರಿದಂತೆ ಹಲವೆಡೆ ಚರಂಡಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಶ್ರೀರಂಗಪಟ್ಟಣದ ಬೈಪಾಸ್ ರಸ್ತೆಯಲ್ಲೂ ಚರಂಡಿ ಕಾಮಗಾರಿಗಳು ಅವೈಜ್ಞಾನಿಕವಾಗಿವೆ. ಅಲ್ಲದೇ ಸರ್ವಿಸ್ ರಸ್ತೆಯಲ್ಲಿ ಪ್ರತಿ ಗ್ರಾಮಗಳ ಬಳಿಯೂ ಅಂಡರ್ಪಾಸ್ ಸಮೀಪದಲ್ಲಿಅವೈಜ್ಞಾನಿಕವಾಗಿ ಎತ್ತರವಾದ ಹಂಫ್ಸ್ಗಳನ್ನು ಹಾಕಲಾಗಿದೆ. ಇವು ಅಪಘಾತಕ್ಕೆ ಕಾರಣವಾಗುತ್ತಿವೆ, ಪರಿಸ್ಥಿತಿ ಹೀಗಿದ್ದಾಗ್ಯೂ ಆಗಮನ, ನಿರ್ಗಮನ ಪ್ರವೇಶ ದ್ವಾರಗಳನ್ನು ಬಂದ್ ಮಾಡಿರುವುದು ಸರಿಯಲ್ಲವೆಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.