ನಮ್ಮ ಸಂಸದೆ ಸುಮಲತಾ ಕೇಕ್ ತಿನ್ನಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ ; ರವೀಂದ್ರ ಶ್ರೀಕಂಠಯ್ಯ
1095 views
ಮಂಡ್ಯ ವಿಡಿಯೋಗಳಿಗೆ ಚಂದಾದಾರರಾಗಿಮಂಡ್ಯ: ಸಂಸದೆ ಸುಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ. ಕಟ್ಟೆ ಬಿರುಕಿನ ಬಗ್ಗೆ ಇರುವ ಆಸಕ್ತಿ ಖಾಲಿಯಾಗ್ತಿರೋದ್ರ ಬಗ್ಗೆ ಇಲ್ಲ. ನಮ್ಮ ಸಂಸದರು ಹೋರಾಟದ ನೇತೃತ್ವ ವಹಿಸಬೇಕಿತ್ತು. ಆದರೆ ಬರ್ತ್ ಡೇ ಆಚರಿಸಿಕೊಂಡು, ಕೇಕ್ ತಿನ್ನಿಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಫೈವ್ ಸ್ಟಾರ್ ಹೋಟೆಲ್ನಲ್ಲಿ ಬರ್ತ್ ಡೇ ಆಚರಿಸುವುದರಲ್ಲಿ ಬ್ಯುಸಿ ಇದ್ದಾರೆ. ಎಂಪಿ ಅವರು ಕೇವಲ ಕ್ವಾರಿಗಳ ವಿಚಾರದಲ್ಲಿ ಧ್ವನಿ ಎತ್ತಿದ್ರು. ರೈತ ಪರ ನಿಲ್ಲಬೇಕಾದ ವೇಳೆ ಬರ್ತ್ ಡೇ ಆಚರಿಸಿಕೊಳ್ಳುತ್ತಾ ಬ್ಯುಸಿಯಿದ್ದಾರೆ. ಇಂತಹ ನಡವಳಿಕೆ ನಿಜಕ್ಕೂ ಆಶ್ಚರ್ಯ ತಂದಿದೆ. ಇವರನ್ನ ಗೆಲ್ಲಿಸಿದ ಜನ ಯಾಕಾದ್ರು ಗೆಲ್ಲಿಸಿದ್ವಿ ಅಂತಿದ್ದಾರೆ ಎಂದು ಸಂಸದೆ ಸುಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಶನಿವಾರದಿಂದ ಬೃಹತ್ ಹೋರಾಟ ಮಾಡುತ್ತೇವೆ, ರೈತರ ಸಮಸ್ಯೆ ಕೇಳುವ ಆಸಕ್ತಿ ಈ ಸರ್ಕಾರಕ್ಕೆ ಇಲ್ಲ. ಕಳೆದ ಸಲ ನೀರು ಬಿಟ್ಟಾಗಲೇ ಅಚ್ಚರಿಯಾಯ್ತು. ಯಾವ ಉದ್ದೇಶಕ್ಕೆ ನೀರು ಬಿಟ್ಟಿದ್ದಾರೆ ಅಂತಾ ಅಚ್ಚರಿಯಾಯ್ತು, ಸರ್ವ ಪಕ್ಷ ಸಭೆಯಲ್ಲಿ ರೈತರ ಹಿತ ಕಾಯುವುದಾಗಿ ಹೇಳಿತ್ತು. ನಿನ್ನೆ ರಾತ್ರಿಯಿಂದಲೇ ಮತ್ತೆ ನೀರು ಬಿಡ್ತಿದ್ದಾರೆ. ಎಲ್ಲಾ ಸರ್ಕಾರಗಳ ನೀರು ಬಿಟ್ಟಿವೆ ಸತ್ಯ. ಆದ್ರೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನೀರು ಬಿಟ್ಟಿರೋದು. ನಮ್ಮ ಅವಶ್ಯಕತೆ ಎತ್ತಿ ಹಿಡಿಯುವ ಕೆಲಸವನ್ನ ಸರ್ಕಾರ ಮಾಡ್ತಿಲ್ಲ. ಕಟ್ಟು ಪದ್ಧತಿ ಅಂತೇಳಿ ಮೊದಲು ಹೇಳಿದರು. ಕಟ್ಟು ಪದ್ಧತಿಯಲ್ಲಿ ನೀರು ಬಿಡೋದ್ರಿಂದ ಬೆಳೆ ಉಳಿಸಲು ಆಗಲ್ಲ. ಈ ಸರ್ಕಾರಕ್ಕೆ ರೈತರ ಕಂಡರೆ ಉದಾಸೀನ. ರೈತರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.
ಫೈವ್ ಸ್ಟಾರ್ ಹೋಟೆಲ್ನಲ್ಲಿ ಬರ್ತ್ ಡೇ ಆಚರಿಸುವುದರಲ್ಲಿ ಬ್ಯುಸಿ ಇದ್ದಾರೆ. ಎಂಪಿ ಅವರು ಕೇವಲ ಕ್ವಾರಿಗಳ ವಿಚಾರದಲ್ಲಿ ಧ್ವನಿ ಎತ್ತಿದ್ರು. ರೈತ ಪರ ನಿಲ್ಲಬೇಕಾದ ವೇಳೆ ಬರ್ತ್ ಡೇ ಆಚರಿಸಿಕೊಳ್ಳುತ್ತಾ ಬ್ಯುಸಿಯಿದ್ದಾರೆ. ಇಂತಹ ನಡವಳಿಕೆ ನಿಜಕ್ಕೂ ಆಶ್ಚರ್ಯ ತಂದಿದೆ. ಇವರನ್ನ ಗೆಲ್ಲಿಸಿದ ಜನ ಯಾಕಾದ್ರು ಗೆಲ್ಲಿಸಿದ್ವಿ ಅಂತಿದ್ದಾರೆ ಎಂದು ಸಂಸದೆ ಸುಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಶನಿವಾರದಿಂದ ಬೃಹತ್ ಹೋರಾಟ ಮಾಡುತ್ತೇವೆ, ರೈತರ ಸಮಸ್ಯೆ ಕೇಳುವ ಆಸಕ್ತಿ ಈ ಸರ್ಕಾರಕ್ಕೆ ಇಲ್ಲ. ಕಳೆದ ಸಲ ನೀರು ಬಿಟ್ಟಾಗಲೇ ಅಚ್ಚರಿಯಾಯ್ತು. ಯಾವ ಉದ್ದೇಶಕ್ಕೆ ನೀರು ಬಿಟ್ಟಿದ್ದಾರೆ ಅಂತಾ ಅಚ್ಚರಿಯಾಯ್ತು, ಸರ್ವ ಪಕ್ಷ ಸಭೆಯಲ್ಲಿ ರೈತರ ಹಿತ ಕಾಯುವುದಾಗಿ ಹೇಳಿತ್ತು. ನಿನ್ನೆ ರಾತ್ರಿಯಿಂದಲೇ ಮತ್ತೆ ನೀರು ಬಿಡ್ತಿದ್ದಾರೆ. ಎಲ್ಲಾ ಸರ್ಕಾರಗಳ ನೀರು ಬಿಟ್ಟಿವೆ ಸತ್ಯ. ಆದ್ರೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನೀರು ಬಿಟ್ಟಿರೋದು. ನಮ್ಮ ಅವಶ್ಯಕತೆ ಎತ್ತಿ ಹಿಡಿಯುವ ಕೆಲಸವನ್ನ ಸರ್ಕಾರ ಮಾಡ್ತಿಲ್ಲ. ಕಟ್ಟು ಪದ್ಧತಿ ಅಂತೇಳಿ ಮೊದಲು ಹೇಳಿದರು. ಕಟ್ಟು ಪದ್ಧತಿಯಲ್ಲಿ ನೀರು ಬಿಡೋದ್ರಿಂದ ಬೆಳೆ ಉಳಿಸಲು ಆಗಲ್ಲ. ಈ ಸರ್ಕಾರಕ್ಕೆ ರೈತರ ಕಂಡರೆ ಉದಾಸೀನ. ರೈತರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.