ಮಂಡ್ಯ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ ; ಅಧಿಕೃತ ಪ್ರಕಟಣೆ ಮಾತ್ರ ಬಾಕಿ ; ಚಲುವರಾಯಸ್ವಾಮಿ
ಮಂಡ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಮಂಡ್ಯ: ಕೆಲಸದ ಒತ್ತಡದಲ್ಲಿ ಒಂದು ದಿನ ರಿಲ್ಯಾಕ್ಸ್ ಬೇಕಿತ್ತು ಹಾಗಾಗಿ ಒಂದು ದಿನ ರೆಸಾರ್ಟ್ ಗೆ ಹೋಗ್ತಿದ್ದೀವಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ನಮಗೆ ಮಾತ್ರ ಭಯ, ಜೆಡಿಎಸ್ ಬಿಜೆಪಿಗೆ ಭಯ ಅನ್ನೋದೆ ಇಲ್ಲ. ಸಂಖ್ಯೆ ಇಲ್ಲದೆ ಇರೋರು ಪರದಾಡ್ತಾರೆ ಎಂದು ಹೇಳಿದರು. ಇನ್ನೂ ಮಂಡ್ಯ ಶಾಸಕರ ಕುರಿತು ಪುಟ್ಟರಾಜು ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅವರ ಜೊತೆಗೆ ನಾವು ಹೋಲಿಕೆ ಮಾಡಲಾಗುತ್ತಾ?, ನಮ್ಮ ಅಪ್ಪ ರೈತ, ಅವರಪ್ಪ ಕೆಎಸ್ಆರ್ಟಿಸಿ ಸಿಬ್ಬಂದಿ, ಅವರೆದ್ದೆಲ್ಲ ಮಹರಾಜರ ಕುಟುಂಬ, ಅವರು ಮಾತನಾಡದೇ ಇನ್ಯಾರು ಮಾತನಾಡುತ್ತಾರೆ, ಪುಟ್ಟರಾಜುಗು ನಮಗೂ ಹೋಲಿಕೆ ಮಾಡಲಾಗುತ್ತಾ ಹೇಳಿ, 30 ವರ್ಷದಿಂದ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದಾರೆ, ಅವರ ಬಗ್ಗೆ ನಾವು ಮಾತನಾಡೋದು ತಪ್ಪಾಗುತ್ತೆ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನೂ ಮಂಡ್ಯ ಲೋಕಸಭೆ ವಿಚಾರ ಟಿಕೆಟ್ ಚರ್ಚೆ ಆಗೋಗಿದೆ. ಫೈನಲ್ ಆಗೋಗಿದೆ. ಆದ್ರೆ ಚುನಾವಣೆ ಕಮಿಟಿ ಪ್ರಕಟ ಮಾಡ್ತಾರೆ. ಸ್ಟಾರ್ ಚಂದ್ರು ಫೈನಲ್ ಆಗಿರೋದು ಫಿಕ್ಸ್. ಅವರು ಸಿಎಂ ಕಾರ್ಯಕ್ರಮದಿಂದಲೇ ಓಡಾಡ್ತಿದ್ದಾರೆ. ಈಗಾಗಲೇ ಚುನಾವಣೆ ಕೆಲಸ ಆರಂಭಿಸಲಾಗಿದೆ. ಆದ್ರೆ ಪಕ್ಷ ಅಧಿಕೃತವಾಗಿ ಪ್ರಕಟ ಮಾಡುತ್ತೆ ಎಂದು ಹೇಳಿದರು. ಮಾರ್ಚ್ 10ರಂದು ಸಿಎಂ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಗೆ ಬರಲಿದ್ದಾರೆ. ಬಹುಶಃ ಅಂದಿನಿಂದಲೇ ಚುನಾವಣೆಗೆ ಅಧಿಕೃತ ಪ್ರಚಾರ ಆರಂಭವಾಗಬಹುದು ಎಂದು ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ನಮಗೆ ಮಾತ್ರ ಭಯ, ಜೆಡಿಎಸ್ ಬಿಜೆಪಿಗೆ ಭಯ ಅನ್ನೋದೆ ಇಲ್ಲ. ಸಂಖ್ಯೆ ಇಲ್ಲದೆ ಇರೋರು ಪರದಾಡ್ತಾರೆ ಎಂದು ಹೇಳಿದರು. ಇನ್ನೂ ಮಂಡ್ಯ ಶಾಸಕರ ಕುರಿತು ಪುಟ್ಟರಾಜು ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅವರ ಜೊತೆಗೆ ನಾವು ಹೋಲಿಕೆ ಮಾಡಲಾಗುತ್ತಾ?, ನಮ್ಮ ಅಪ್ಪ ರೈತ, ಅವರಪ್ಪ ಕೆಎಸ್ಆರ್ಟಿಸಿ ಸಿಬ್ಬಂದಿ, ಅವರೆದ್ದೆಲ್ಲ ಮಹರಾಜರ ಕುಟುಂಬ, ಅವರು ಮಾತನಾಡದೇ ಇನ್ಯಾರು ಮಾತನಾಡುತ್ತಾರೆ, ಪುಟ್ಟರಾಜುಗು ನಮಗೂ ಹೋಲಿಕೆ ಮಾಡಲಾಗುತ್ತಾ ಹೇಳಿ, 30 ವರ್ಷದಿಂದ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದಾರೆ, ಅವರ ಬಗ್ಗೆ ನಾವು ಮಾತನಾಡೋದು ತಪ್ಪಾಗುತ್ತೆ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನೂ ಮಂಡ್ಯ ಲೋಕಸಭೆ ವಿಚಾರ ಟಿಕೆಟ್ ಚರ್ಚೆ ಆಗೋಗಿದೆ. ಫೈನಲ್ ಆಗೋಗಿದೆ. ಆದ್ರೆ ಚುನಾವಣೆ ಕಮಿಟಿ ಪ್ರಕಟ ಮಾಡ್ತಾರೆ. ಸ್ಟಾರ್ ಚಂದ್ರು ಫೈನಲ್ ಆಗಿರೋದು ಫಿಕ್ಸ್. ಅವರು ಸಿಎಂ ಕಾರ್ಯಕ್ರಮದಿಂದಲೇ ಓಡಾಡ್ತಿದ್ದಾರೆ. ಈಗಾಗಲೇ ಚುನಾವಣೆ ಕೆಲಸ ಆರಂಭಿಸಲಾಗಿದೆ. ಆದ್ರೆ ಪಕ್ಷ ಅಧಿಕೃತವಾಗಿ ಪ್ರಕಟ ಮಾಡುತ್ತೆ ಎಂದು ಹೇಳಿದರು. ಮಾರ್ಚ್ 10ರಂದು ಸಿಎಂ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಗೆ ಬರಲಿದ್ದಾರೆ. ಬಹುಶಃ ಅಂದಿನಿಂದಲೇ ಚುನಾವಣೆಗೆ ಅಧಿಕೃತ ಪ್ರಚಾರ ಆರಂಭವಾಗಬಹುದು ಎಂದು ಹೇಳಿದರು.