ನಂಗಿನ್ನು ವಯಸ್ಸಿದೆ, ಮಂಡ್ಯದಿಂದ ಹಿರಿಯರು ಸ್ಪರ್ಧಿಸಲಿ; ನಿಖಿಲ್ ಕುಮಾರಸ್ವಾಮಿ
1135 views
ಮಂಡ್ಯ ವಿಡಿಯೋಗಳಿಗೆ ಚಂದಾದಾರರಾಗಿಕೋಲಾರ: ಮಂಡ್ಯ ಕ್ಷೇತ್ರದಿಂದ ನಾನು ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಬೆಳವಣಿಗೆಗೆ ದುಡಿಯಬೇಕು ಎನ್ನುವ ಸ್ಪಷ್ಟವಾದ ತೀರ್ಮಾನ ಕೈಗೊಂಡಿದ್ದೇನೆ. ನನಗಿನ್ನು ವಯಸ್ಸಿದೆ ಕಾರ್ಯಕರ್ತರ ಜೊತೆ ಹುಮ್ಮಸ್ಸಿನಿಂದ ಕೆಲಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರ್ ಸ್ವಾಮಿ ಹೇಳಿದರು.
ಕೋಲಾರದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯಲ್ಲಿ ಸಮರ್ಥ ನಾಯಕರಿದ್ದಾರೆ ಹಿರಿಯರಿಗೆ ಒಂದು ಅವಕಾಶ ಸಿಗಲಿ ಎನ್ನುವ ಭಾವನೆಯಿಂದ ಮಂಡ್ಯ ಜಿಲ್ಲೆಯಲ್ಲಿ ಸ್ಪರ್ದೆಯಿಂದ ಹಿಂದೆ ಸರಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಕುಮಾರಸ್ವಾಮಿಯವರು ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರ ಒತ್ತಾಯ ಇದೆ. ಈ ಬಗ್ಗೆ ಕುಮಾರಸ್ವಾಮಿಯವರು ಕೇಂದ್ರಕ್ಕೆ ಹೋಗಬೇಕ ಬೇಡ್ವೋ ಅನ್ನೋ ಯೋಚನೆಯನ್ನು ಮಾಡುತ್ತಿದ್ದಾರೆ. ಆದ್ರೆ ಇನ್ನೂ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ, ಪಕ್ಷದ ವರಿಷ್ಟರು ರಾಷ್ಟ್ರೀಯ ನಾಯಕರುಗಳು ಹೇಗೆ ನಿರ್ದೇಶನ ನೀಡುತ್ತಾರೆ. ಆ ರೀತಿ ಪಕ್ಷದ ಬೆಳವಣಿಗೆಗೋಸ್ಕರ ಕುಮಾರಸ್ವಾಮಿಯವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗುಡೆ ಸಮಯ ಕೂಡಿ ಬಂದಿದೆ. ನಾಲ್ಕೈದು ದಿನದಲ್ಲಿ ಅಧಿಕೃತ ಪಟ್ಟಿ ಬಿಡುಗಡೆಯಾಗುತ್ತದೆ ಯಾವುದೇ ಗೊಂದಲ ಬೇಡ ಎಂದರು. ಬಿಜೆಪಿಯ ರಾಷ್ಟ್ರೀಯ ನಾಯಕರು ಜೆಡಿಎಸ್ಗೆ ಎಷ್ಟು ಸೀಟುಗಳನ್ನು ಬಿಟ್ಟುಕೊಡುತ್ತಾರೆ ಅನ್ನೋದು ನಾಲ್ಕೈದು ದಿನದಲ್ಲಿ ಉತ್ತರ ಸಿಗುತ್ತದೆ. ಬಿಜೆಪಿ ಚಿಹ್ನೆಯಲ್ಲಿ ಬಿಜೆಪಿ ಅಭ್ಯರ್ಥಿಗಳು, ಜೆಡಿಎಸ್ ಚಿಹ್ನೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ದಿಸುತ್ತಾರೆ ಸೂಕ್ತವಾದ ಸಮಯದಲ್ಲಿ ಸೂಕ್ತವಾದ ತೀರ್ಮಾನವನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಕೋಲಾರದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯಲ್ಲಿ ಸಮರ್ಥ ನಾಯಕರಿದ್ದಾರೆ ಹಿರಿಯರಿಗೆ ಒಂದು ಅವಕಾಶ ಸಿಗಲಿ ಎನ್ನುವ ಭಾವನೆಯಿಂದ ಮಂಡ್ಯ ಜಿಲ್ಲೆಯಲ್ಲಿ ಸ್ಪರ್ದೆಯಿಂದ ಹಿಂದೆ ಸರಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಕುಮಾರಸ್ವಾಮಿಯವರು ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರ ಒತ್ತಾಯ ಇದೆ. ಈ ಬಗ್ಗೆ ಕುಮಾರಸ್ವಾಮಿಯವರು ಕೇಂದ್ರಕ್ಕೆ ಹೋಗಬೇಕ ಬೇಡ್ವೋ ಅನ್ನೋ ಯೋಚನೆಯನ್ನು ಮಾಡುತ್ತಿದ್ದಾರೆ. ಆದ್ರೆ ಇನ್ನೂ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ, ಪಕ್ಷದ ವರಿಷ್ಟರು ರಾಷ್ಟ್ರೀಯ ನಾಯಕರುಗಳು ಹೇಗೆ ನಿರ್ದೇಶನ ನೀಡುತ್ತಾರೆ. ಆ ರೀತಿ ಪಕ್ಷದ ಬೆಳವಣಿಗೆಗೋಸ್ಕರ ಕುಮಾರಸ್ವಾಮಿಯವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗುಡೆ ಸಮಯ ಕೂಡಿ ಬಂದಿದೆ. ನಾಲ್ಕೈದು ದಿನದಲ್ಲಿ ಅಧಿಕೃತ ಪಟ್ಟಿ ಬಿಡುಗಡೆಯಾಗುತ್ತದೆ ಯಾವುದೇ ಗೊಂದಲ ಬೇಡ ಎಂದರು. ಬಿಜೆಪಿಯ ರಾಷ್ಟ್ರೀಯ ನಾಯಕರು ಜೆಡಿಎಸ್ಗೆ ಎಷ್ಟು ಸೀಟುಗಳನ್ನು ಬಿಟ್ಟುಕೊಡುತ್ತಾರೆ ಅನ್ನೋದು ನಾಲ್ಕೈದು ದಿನದಲ್ಲಿ ಉತ್ತರ ಸಿಗುತ್ತದೆ. ಬಿಜೆಪಿ ಚಿಹ್ನೆಯಲ್ಲಿ ಬಿಜೆಪಿ ಅಭ್ಯರ್ಥಿಗಳು, ಜೆಡಿಎಸ್ ಚಿಹ್ನೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ದಿಸುತ್ತಾರೆ ಸೂಕ್ತವಾದ ಸಮಯದಲ್ಲಿ ಸೂಕ್ತವಾದ ತೀರ್ಮಾನವನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.