ವ್ಹಾಹ್… ಮೇಲುಕೋಟೆ ವೈರಮುಡಿ ಉತ್ಸವ ನೋಡಲು ಕಣ್ಣೆರಡು ಸಾಲದು
1006 views
ಮಂಡ್ಯ ವಿಡಿಯೋಗಳಿಗೆ ಚಂದಾದಾರರಾಗಿಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ಜರುಗಿತು. ಸ್ಥಳೀಯ ಸಾವಿರಾರು ಭಕ್ತರು ವಜ್ರ ಖಚಿತ ವೈರಮುಡಿ ಧಾರಣೆಯಿಂದ ಕಂಗೊಳಿಸುತ್ತಿದ್ದ ಚೆಲುವನಾರಾಯಣ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಕರೋನಾ ಅಟ್ಟಹಾಸ ಹಿನ್ನೆಲೆಯಲ್ಲಿ ಕಳೆದ ವರ್ಷ ವೈರಮುಡಿ ಉತ್ಸವವನ್ನ ರದ್ದು ಮಾಡಲಾಗಿತ್ತು. ಈ ಬಾರಿ ಸಾಂಪ್ರದಾಯಿಕ ಉತ್ಸವವನ್ನ, ಸರಳವಾಗಿ ಆಚರಿಸೋಕೆ ಜಿಲ್ಲಾಡಳಿತ ನಿರ್ಧರಿಸಿತ್ತು. ವೈರಮುಡಿ ಉತ್ಸವ ಹಿನ್ನೆಲೆಯಲ್ಲಿ ಮೇಲುಕೋಟೆಯ ಬೆಟ್ಟದ ಯೋಗನರಸಿಂಹಸ್ವಾಮಿ ಹಾಗೂ ಚಲುವನಾರಾಯಣ ಸ್ವಾಮಿ ದೇಗುಲ ಮತ್ತು ರಾಜಬೀದಿಗಳು ವರ್ಣರಂಜಿತ ದೀಪಾಲಂಕಾರದಿಂದ ಝಗಮಗಿಸುತ್ತಿದ್ವು. ಭಕ್ತಿ ಪರಾಕಷ್ಟೆಯನ್ನ ಮೆರೆದು ಬರ್ತಿದ್ದ ಭಕ್ತರು ವೈರಮುಡಿ ಧಾರಿತ ಚೆಲುವನಾರಾಯಣನನ್ನ ಕಂಡು ಗೋವಿಂದ ಗೋವಿಂದ ನಾಮ ಸ್ಮರಣೆ ಮೂಲಕ ಹರ್ಷ ವ್ಯಕ್ತಪಡಿಸಿದರು.