Bhavya: ಮಂಗಳೂರಿನ ಮಹಿಳಾ ಪೊಲೀಸರೊಂದಿಗೆ ಭವ್ಯಾ ಸಂವಾದ; ಯುಗ ಯುಗಗಳೇ ಸಾಗಲಿ ಹಾಡು ಹಾಡಿ ಸಂಭ್ರಮ
1001 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಮಂಗಳೂರು: ಕನ್ನಡದ ಹಿರಿಯ ನಟಿ ಭವ್ಯಾ ಭಾನುವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು ಪ್ರೇರಣಾದಾಯಕ ಮಾತುಗಳಿಂದ ಹುರಿದುಂಬಿಸಿದರು. ನಗರದಲ್ಲಿ 'ಕರಿಹೈದ ಕೊರಗಜ್ಜ' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಭವ್ಯ, ತಮ್ಮ ಬಿಡುವಿನ ವೇಳೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ್ದರು. ಗುಲಾಬಿ ರಂಗಿನ ವಸ್ತ್ರದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾಣಿಸಿಕೊಂಡು ನಟಿ ಭವ್ಯರನ್ನು ಸ್ವಾಗತಿಸಿದರು.
ಈ ವೇಳೆ ಭವ್ಯ ಅವರೊಂದಿಗೆ ಮಂಗಳೂರಿನ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆಲ್ಸಿ ತೆಗೆದು ಸಂಭ್ರಮಿಸಿದರು. ನಟಿ ಭವ್ಯಾ ಹೃದಯ ಗೀತೆ ಸಿನಿಮಾದ 'ಯುಗಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಹಾಡನ್ನು ಹಾಡಿ ಎಲ್ಲರನ್ನೂ ಸಂತೋಷ ಪಡಿಸಿದರು.
ನಮ್ಮ ಸಾಧನೆಗಳಿಗೆ ನಮ್ಮ ವ್ಯಕ್ತಿತ್ವವೇ ಕಾರಣ. ನಾನು ಚಿತ್ರರಂಗಕ್ಕೆ 14 ವರ್ಷಕ್ಕೆ ಪ್ರವೇಶ ಮಾಡಿದ್ದು, ಈಗ 40 ವರ್ಷ ಪೂರೈಸಿದ್ದೇನೆ. ನನ್ನ ವ್ಯಕ್ತಿತ್ವವನ್ನು ರೂಪಿಸಲು ನನ್ನ ತಾಯಿ ಕಾರಣ. ವ್ಯಕ್ತಿತ್ವದೊಂದಿಗೆ ಶಿಸ್ತು, ವಿನಯ ಅಗತ್ಯ ಅದನ್ನು ಈ ಸಿನಿಮಾರಂಗ ನನಗೆ ಕಲಿಸಿಕೊಟ್ಟಿದೆ. ನನ್ನ ಮೊದಲ ಸಿನಿಮಾ ನಿರ್ದೇಶಿಸಿದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರು ನನಗೆ ಬಹಳಷ್ಟು ಜೀವನಪಾಠವನ್ನು ಬೋಧಿಸಿದ್ದಾರೆ ಎಂದು ನಟಿ ಭವ್ಯ ಹೇಳಿದರು. ಈ ವೇಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಡಿಸಿಪಿ ಅಂಶುಕುಮಾರ್, ದಿನೇಶ್ ಕುಮಾರ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಭವ್ಯ ಅವರೊಂದಿಗೆ ಮಂಗಳೂರಿನ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆಲ್ಸಿ ತೆಗೆದು ಸಂಭ್ರಮಿಸಿದರು. ನಟಿ ಭವ್ಯಾ ಹೃದಯ ಗೀತೆ ಸಿನಿಮಾದ 'ಯುಗಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಹಾಡನ್ನು ಹಾಡಿ ಎಲ್ಲರನ್ನೂ ಸಂತೋಷ ಪಡಿಸಿದರು.
ನಮ್ಮ ಸಾಧನೆಗಳಿಗೆ ನಮ್ಮ ವ್ಯಕ್ತಿತ್ವವೇ ಕಾರಣ. ನಾನು ಚಿತ್ರರಂಗಕ್ಕೆ 14 ವರ್ಷಕ್ಕೆ ಪ್ರವೇಶ ಮಾಡಿದ್ದು, ಈಗ 40 ವರ್ಷ ಪೂರೈಸಿದ್ದೇನೆ. ನನ್ನ ವ್ಯಕ್ತಿತ್ವವನ್ನು ರೂಪಿಸಲು ನನ್ನ ತಾಯಿ ಕಾರಣ. ವ್ಯಕ್ತಿತ್ವದೊಂದಿಗೆ ಶಿಸ್ತು, ವಿನಯ ಅಗತ್ಯ ಅದನ್ನು ಈ ಸಿನಿಮಾರಂಗ ನನಗೆ ಕಲಿಸಿಕೊಟ್ಟಿದೆ. ನನ್ನ ಮೊದಲ ಸಿನಿಮಾ ನಿರ್ದೇಶಿಸಿದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರು ನನಗೆ ಬಹಳಷ್ಟು ಜೀವನಪಾಠವನ್ನು ಬೋಧಿಸಿದ್ದಾರೆ ಎಂದು ನಟಿ ಭವ್ಯ ಹೇಳಿದರು. ಈ ವೇಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಡಿಸಿಪಿ ಅಂಶುಕುಮಾರ್, ದಿನೇಶ್ ಕುಮಾರ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.