ಇಲ್ಲಿನ ಕೊರಗಜ್ಜ ತುಂಬಾ ಪವರ್ ಫುಲ್ ; ಬೇಡಿದಂತೆ ಎಲ್ಲವೂ ಈಡೇರಿದೆ ; ನಟಿ ಮಾಲಾಶ್ರೀ
1547 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿದಕ್ಷಿಣ ಕನ್ನಡ: ಕೊರಗಜ್ಜನ ಆದಿಸ್ಥಳ ಕುತ್ತಾರಿನ ದೆಕ್ಕಾಡ್ಗೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಹಾಗೂ ಅವರ ಪುತ್ರಿ ಅನನ್ಯಾ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ದೇವರ ದರ್ಶನ ಬಳಿಕ ಮಾತನಾಡಿದ ಅವರು, ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಭೇಟಿ ಕೊಟ್ಟಿದ್ದೆ, ಎಲ್ಲವೂ ಅಚಾತುರ್ಯವೆಂಬಂತೆ ನಡೆಯಿತು. ಕ್ಷೇತ್ರದ ಶಕ್ತಿಯನ್ನು ಹೇಳತೀರದು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತಿರುತ್ತೇನೆ ಎಂದರು.
ಈ ದೇವರು ತುಂಬಾ ಫವರ್ ಫುಲ್ ಎಂದು ನನ್ನ ಗೆಳೆಯರೆಲ್ಲ ಹೇಳುತ್ತಿದ್ದರು, ಅವರು ಹೇಳಿದಂತೆ ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟಿದೆ, ಹರಕೆ ಕಟ್ಟಿಕೊಂಡಿದ್ದೆ ಅದೆಲ್ಲವೂ ಈಡೇರಿದೆ, ಹಾಗಾಗಿ ಹರಕೆ ತೀರಸಲು ಬಂದಿದ್ದೆ ಎಂದು ಹೇಳಿದರು. ಈ ಜಾಗ ತುಂಬಾ ಖುಷಿ ಕೊಡುತ್ತೆ ಮತ್ತೆ ಮತ್ತೆ ಬರುತ್ತೇನೆ ಎಂದು ಹೇಳಿದರು..
ದೇವರ ದರ್ಶನ ಬಳಿಕ ಮಾತನಾಡಿದ ಅವರು, ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಭೇಟಿ ಕೊಟ್ಟಿದ್ದೆ, ಎಲ್ಲವೂ ಅಚಾತುರ್ಯವೆಂಬಂತೆ ನಡೆಯಿತು. ಕ್ಷೇತ್ರದ ಶಕ್ತಿಯನ್ನು ಹೇಳತೀರದು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತಿರುತ್ತೇನೆ ಎಂದರು.
ಈ ದೇವರು ತುಂಬಾ ಫವರ್ ಫುಲ್ ಎಂದು ನನ್ನ ಗೆಳೆಯರೆಲ್ಲ ಹೇಳುತ್ತಿದ್ದರು, ಅವರು ಹೇಳಿದಂತೆ ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟಿದೆ, ಹರಕೆ ಕಟ್ಟಿಕೊಂಡಿದ್ದೆ ಅದೆಲ್ಲವೂ ಈಡೇರಿದೆ, ಹಾಗಾಗಿ ಹರಕೆ ತೀರಸಲು ಬಂದಿದ್ದೆ ಎಂದು ಹೇಳಿದರು. ಈ ಜಾಗ ತುಂಬಾ ಖುಷಿ ಕೊಡುತ್ತೆ ಮತ್ತೆ ಮತ್ತೆ ಬರುತ್ತೇನೆ ಎಂದು ಹೇಳಿದರು..