ಇಂಥ ಓಲೈಕೆ ರಾಜಕೀಯದಿಂದಲೇ ಭಾರತದ ವಿಭಜನೆ ಆಯ್ತು, ಸಿಎಂ ಹೇಳಿಕೆ ಸರಿಯಲ್ಲ: ಸಿಟಿ ರವಿ
1122 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ''ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯು ಅಪಾಯಕಾರಿಯಾದುದು. ಇಂಥ ಮನಸ್ಥಿತಿಯೇ ದೇಶದ ವಿಭಜನೆಗೆ ಕಾರಣವಾಗಿದ್ದು, ಅದರಿಂದ ಸಾಕಷ್ಟು ಜನರು ತೊಂದರೆ ಅನುಭವಿಸಿದ್ದು. ಮುಖ್ಯಮಂತ್ರಿಗಳು ದೇಶದ ಸಂಪತ್ತು ಬಡವರಿಗೆ ಸೇರಿದ್ದು ಎಂದು ಹೇಳಬಹುದಿತ್ತು. ಆದರೆ, ಓಲೈಕೆ ರಾಜಕಾರಣದಿಂದಾಗಿ, ವೋಟ್ ಬ್ಯಾಂಕ್ಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ದೇಶದ ಸಂಪತ್ತು, ಭಾರತೀಯರಿಗೆ ಸೇರಿದ್ದು, ಭಾರತದಲ್ಲೇ ಇದ್ದು ದೇಶಕ್ಕೆ ದ್ರೋಹ ಮಾಡುವವರಿಗೆ ಇದರಲ್ಲಿ ಅಧಿಕಾರವಿಲ್ಲ'' ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದರು.
ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಮಹಾಪರಿನಿರ್ವಾಣ ಸಭೆಯ ಬಳಿಕ ಮಾತನಾಡಿ, ''ಸಿಎಂ ಸಿದ್ದರಾಮಯ್ಯ ಅವರ ಕೋಮುವಾದಿ ರಾಜಕಾರಣದ ಪ್ರತ್ಯಕ್ಷ ದರ್ಶನ ಆಗಿದೆ, ಕಾಂಗ್ರೆಸ್ ನಿಜವಾದ ಕೋಮುವಾದಿ ಪಕ್ಷ. ನಾನು ಅವರ ಹೇಳಿಕೆಯನ್ನು ಖಂಡಿಸುತ್ತೇನೆ'' ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿರುವ ಕಾಂಗ್ರೆಸ್ ಯಾವ ಮುಖ ಇಡ್ಕೊಂಡು ಅವರ ಸ್ಮರಣೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ಚುನಾವಣೆ ವೇಳೆ ಅಂಬೇಡ್ಕರ್ ಬೆನ್ನಿಗೆ ನಿಂತಿದ್ದು ಜನಸಂಘ. ಆದ್ದರಿಂದ ದೇಶಭಕ್ತ ಅಂಬೇಡ್ಕರ್ ಅವರ ವೈಚಾರಿಕ ವಾರಸುದಾರರು ಬಿಜೆಪಿಯವರು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಮಹಾಪರಿನಿರ್ವಾಣ ಸಭೆಯ ಬಳಿಕ ಮಾತನಾಡಿ, ''ಸಿಎಂ ಸಿದ್ದರಾಮಯ್ಯ ಅವರ ಕೋಮುವಾದಿ ರಾಜಕಾರಣದ ಪ್ರತ್ಯಕ್ಷ ದರ್ಶನ ಆಗಿದೆ, ಕಾಂಗ್ರೆಸ್ ನಿಜವಾದ ಕೋಮುವಾದಿ ಪಕ್ಷ. ನಾನು ಅವರ ಹೇಳಿಕೆಯನ್ನು ಖಂಡಿಸುತ್ತೇನೆ'' ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿರುವ ಕಾಂಗ್ರೆಸ್ ಯಾವ ಮುಖ ಇಡ್ಕೊಂಡು ಅವರ ಸ್ಮರಣೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ಚುನಾವಣೆ ವೇಳೆ ಅಂಬೇಡ್ಕರ್ ಬೆನ್ನಿಗೆ ನಿಂತಿದ್ದು ಜನಸಂಘ. ಆದ್ದರಿಂದ ದೇಶಭಕ್ತ ಅಂಬೇಡ್ಕರ್ ಅವರ ವೈಚಾರಿಕ ವಾರಸುದಾರರು ಬಿಜೆಪಿಯವರು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.