ನ್ಯಾಯಯುತವಾಗಿ ಆದ ಕೆಲಸಗಳಿಗೆ ಬಿಲ್ ಪಾವತಿ, ಕಳಪೆ ಕೆಲಸಕ್ಕೆ ಬಿಲ್ ಕೊಡಲ್ಲ: ದಿನೇಶ್ ಗುಂಡೂರಾವ್
1123 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಮಂಗಳೂರು: ‘‘ಕಾಮಗಾರಿಗಳು ಪೂರ್ಣವಾಗದೆ ಬಿಲ್ ಪಾವತಿ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಇನ್ನು 30 ದಿನದೊಳಗೆ ಈ ವರದಿ ಸರಕಾರ ಕೈಸೇರಲಿದೆ,’’ ಎಂದು ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ‘‘ಬೆಂಗಳೂರಿನ ರಸ್ತೆಗಳು, ಸಿವಿಲ್ ವಿಚಾರ ಮಾತ್ರವಲ್ಲದೆ ಕಸ ವಿಲೇವಾರಿ ಗುತ್ತಿಗೆಯ ತನಿಖೆಯೂ ನಡೆಯಲಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗದೇ ಇರುವುದು ದೊಡ್ಡ ಸಮಸ್ಯೆ. ಆದರೆ ಇದು ಈಗಿನ ಸಮಸ್ಯೆ ಅಲ್ಲ, ಎರಡು ವರ್ಷದಿಂದ ಪಾವತಿಯಾಗಿಲ್ಲ, ಕಳಪೆ ಮತ್ತು ಸರಿಯಾಗಿ ಕೆಲಸ ಆಗದೇ ಇರುವುದರಿಂದಲೇ ಸದ್ಯ ಗುತ್ತಿಗೆದಾರರಿಗೆ ಬಿಲ್ ಪಾವತಿ ತಡೆ ಹಿಡಿಯಲಾಗಿದ್ದು, ನ್ಯಾಯಯುತ ಕೆಲಸಗಳಿಗೆ ಖಂಡಿತವಾಗಿಯೂ ಬಿಲ್ ಪಾವತಿಯಾಗಲಿದೆ. ಕಳಪೆ, ಕಾಮಗಾರಿಯೇ ನಡೆದಿಲ್ಲವಾದರೆ ಖಂಡಿತಾ ಬಿಲ್ ಪಾವತಿ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ತೆರಿಗೆ ಹಣ ಪೋಲಾಗಲು ಬಿಡುವುದಿಲ್ಲ, ’’ ಎಂದರು.
‘‘ನಮ್ಮ ಗ್ಯಾರಂಟಿ ಸ್ಕೀಮ್ ಜನತೆಗೆ ತಲುಪುತ್ತಿದೆ. ಇದರಿಂದ ಸಾಕಷ್ಟು ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಇದನ್ನು ಸಹಿಸಲಾಗದ ಮಂದಿ ಹೇಗಾದರೂ ಸರಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿವಿನಾ ಕಾರಣ ಆಪಾದನೆಗೆ ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿಪೆನ್ಡ್ರೈವ್, ಸಿಡಿ, ದಾಖಲೆ ಇದೆ ಎಂದು ಸುಮ್ಮನೆ ಹೇಳುತ್ತಿದ್ದಾರೆ. ಪ್ರತಿಪಕ್ಷ ದಾರಿ ತಪ್ಪಿಸಲು ಆಧಾರ ರಹಿತವಾಗಿ ಆರೋಪಿಸುತ್ತಿದ್ದಾರೆ. ಬಿಜೆಪಿಯ ಕರ್ಮಕಾಂಡ ಹೊರಗೆ ಬರಲು ಹೆಚ್ಚು ಸಮಯ ಬೇಕಾಗಿಲ್ಲ, ಎಲ್ಲವೂ ಹೊರಗೆ ಬರಲಿದೆ, ತನಿಖೆಯೂ ನಡೆಯಲಿದೆ, ’’ ಎಂದರು
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ‘‘ಬೆಂಗಳೂರಿನ ರಸ್ತೆಗಳು, ಸಿವಿಲ್ ವಿಚಾರ ಮಾತ್ರವಲ್ಲದೆ ಕಸ ವಿಲೇವಾರಿ ಗುತ್ತಿಗೆಯ ತನಿಖೆಯೂ ನಡೆಯಲಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗದೇ ಇರುವುದು ದೊಡ್ಡ ಸಮಸ್ಯೆ. ಆದರೆ ಇದು ಈಗಿನ ಸಮಸ್ಯೆ ಅಲ್ಲ, ಎರಡು ವರ್ಷದಿಂದ ಪಾವತಿಯಾಗಿಲ್ಲ, ಕಳಪೆ ಮತ್ತು ಸರಿಯಾಗಿ ಕೆಲಸ ಆಗದೇ ಇರುವುದರಿಂದಲೇ ಸದ್ಯ ಗುತ್ತಿಗೆದಾರರಿಗೆ ಬಿಲ್ ಪಾವತಿ ತಡೆ ಹಿಡಿಯಲಾಗಿದ್ದು, ನ್ಯಾಯಯುತ ಕೆಲಸಗಳಿಗೆ ಖಂಡಿತವಾಗಿಯೂ ಬಿಲ್ ಪಾವತಿಯಾಗಲಿದೆ. ಕಳಪೆ, ಕಾಮಗಾರಿಯೇ ನಡೆದಿಲ್ಲವಾದರೆ ಖಂಡಿತಾ ಬಿಲ್ ಪಾವತಿ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ತೆರಿಗೆ ಹಣ ಪೋಲಾಗಲು ಬಿಡುವುದಿಲ್ಲ, ’’ ಎಂದರು.
‘‘ನಮ್ಮ ಗ್ಯಾರಂಟಿ ಸ್ಕೀಮ್ ಜನತೆಗೆ ತಲುಪುತ್ತಿದೆ. ಇದರಿಂದ ಸಾಕಷ್ಟು ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಇದನ್ನು ಸಹಿಸಲಾಗದ ಮಂದಿ ಹೇಗಾದರೂ ಸರಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿವಿನಾ ಕಾರಣ ಆಪಾದನೆಗೆ ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿಪೆನ್ಡ್ರೈವ್, ಸಿಡಿ, ದಾಖಲೆ ಇದೆ ಎಂದು ಸುಮ್ಮನೆ ಹೇಳುತ್ತಿದ್ದಾರೆ. ಪ್ರತಿಪಕ್ಷ ದಾರಿ ತಪ್ಪಿಸಲು ಆಧಾರ ರಹಿತವಾಗಿ ಆರೋಪಿಸುತ್ತಿದ್ದಾರೆ. ಬಿಜೆಪಿಯ ಕರ್ಮಕಾಂಡ ಹೊರಗೆ ಬರಲು ಹೆಚ್ಚು ಸಮಯ ಬೇಕಾಗಿಲ್ಲ, ಎಲ್ಲವೂ ಹೊರಗೆ ಬರಲಿದೆ, ತನಿಖೆಯೂ ನಡೆಯಲಿದೆ, ’’ ಎಂದರು