ಕಾಂಗ್ರೆಸ್ ಗ್ಯಾರಂಟಿಗಾಗಿ ಪರಿಶಿಷ್ಟರ ನಿಧಿಯ 11 ಸಾವಿರ ಕೋಟಿ ರೂ. ಬಳಕೆ: ವೇದವ್ಯಾಸ ಕಾಮತ್
1981 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಮಂಗಳೂರು: ರಾಜ್ಯ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ನಿಧಿಗೆ ಮೀಸಲಿಟ್ಟಿದ್ದ ನಿಧಿಯಿಂದ 11 ಸಾವಿರ ಕೋಟಿ ರೂ. ಮೊತ್ತವನ್ನು ಉಚಿತ ಗ್ಯಾರಂಟಿಗೆ ಬಳಕೆ ಮಾಡುವ ಮೂಲಕ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆರೋಪಿಸಿದರು. ಉಪ ನೋಂದಣಿ ಕಚೇರಿಗಳಿಗೆ ರಿಜಿಸ್ಟ್ರೇಷನ್ ಮಾಡಿಸಲು ಹೋದರೆ, ನಿಮ್ಮ ಬ್ಯಾಂಕ್ ಖಾತೆಗಳಲ್ಲಿನ ಹಣವು ಮಾಯವಾಗಬಹುದು ಎಂದು ಅವರ ಎಚ್ಚರಿಸಿದರು.
ಸೈಬರ್ ವಂಚನೆಯಲ್ಲಿ ಜನರು ಹಣ ಕಳೆದುಕೊಳ್ಳುತ್ತಿದ್ದರೂ ಸರಕಾರವು ಅದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು. ನಗರದ ಆರ್ಟಿಒ, ಮಹಾನಗರ ಪಾಲಿಕೆ ಕಚೇರಿ, ಉಪ ನೋಂದಣಿ ಕಚೇರಿ, ರೇಷನ್ ಕಾರ್ಡ್ ತಿದ್ದುಪಡಿಯ ಸರ್ವರ್ ಸಮಸ್ಯೆಯಿಂದ ಜನರ ತತ್ತರಿಸಿದ್ದಾರೆ. ಇ-ಖಾತಾ ನೋಂದಣಿಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಗೆ ಬಯೋಮೆಟ್ರಿಕ್ ನೀಡುವವರ ಖಾತೆಗೆ ಸೈಬರ್ ವಂಚಕರು ಕನ್ನ ಹಾಕಿದ್ದು, ಸರಕಾರ ಆ ಮೊತ್ತ ಮರುಪಾವತಿಸಬೇಕು ಎಂದರು.
ಸರಕಾರ ವಿದ್ಯುತ್ ಬಿಲ್ ಹೆಚ್ಚಳ ಮಾಡಿದ್ದು, ಲೋಡ್ ಶೆಡ್ಡಿಂಗ್ ಆರಂಭಿಸಿ ಜನರನ್ನು ಕತ್ತಲೆಗೆ ದೂಡಿದೆ. ಸಂಧ್ಯಾ ಸುರಕ್ಷಾ, ಮನಸ್ವಿನಿ, ವಿಧವಾ ವೇತನ ವಿತರಣೆಯಲ್ಲಿವ್ಯತ್ಯಯವಾಗಿದೆ. ಸರಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆಗೆ ಕಾಂಗ್ರೆಸ್ ಸರಕಾರದ ವೈಫಲ್ಯವೇ ಕಾರಣ. ಮಾಹಿತಿ ಹಕ್ಕು ಹೋರಾಟಗಾರರನ್ನು ದಮನಿಸಲು ಹೊರಟಿದೆ. ಸಮಸ್ಯೆಗಳ ಪಟ್ಟಿಯ ಸರಮಾಲೆಯೇ ಇದೆ ಎಂದು ಅವರು ಹೇಳಿದರು.
ಸೈಬರ್ ವಂಚನೆಯಲ್ಲಿ ಜನರು ಹಣ ಕಳೆದುಕೊಳ್ಳುತ್ತಿದ್ದರೂ ಸರಕಾರವು ಅದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು. ನಗರದ ಆರ್ಟಿಒ, ಮಹಾನಗರ ಪಾಲಿಕೆ ಕಚೇರಿ, ಉಪ ನೋಂದಣಿ ಕಚೇರಿ, ರೇಷನ್ ಕಾರ್ಡ್ ತಿದ್ದುಪಡಿಯ ಸರ್ವರ್ ಸಮಸ್ಯೆಯಿಂದ ಜನರ ತತ್ತರಿಸಿದ್ದಾರೆ. ಇ-ಖಾತಾ ನೋಂದಣಿಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಗೆ ಬಯೋಮೆಟ್ರಿಕ್ ನೀಡುವವರ ಖಾತೆಗೆ ಸೈಬರ್ ವಂಚಕರು ಕನ್ನ ಹಾಕಿದ್ದು, ಸರಕಾರ ಆ ಮೊತ್ತ ಮರುಪಾವತಿಸಬೇಕು ಎಂದರು.
ಸರಕಾರ ವಿದ್ಯುತ್ ಬಿಲ್ ಹೆಚ್ಚಳ ಮಾಡಿದ್ದು, ಲೋಡ್ ಶೆಡ್ಡಿಂಗ್ ಆರಂಭಿಸಿ ಜನರನ್ನು ಕತ್ತಲೆಗೆ ದೂಡಿದೆ. ಸಂಧ್ಯಾ ಸುರಕ್ಷಾ, ಮನಸ್ವಿನಿ, ವಿಧವಾ ವೇತನ ವಿತರಣೆಯಲ್ಲಿವ್ಯತ್ಯಯವಾಗಿದೆ. ಸರಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆಗೆ ಕಾಂಗ್ರೆಸ್ ಸರಕಾರದ ವೈಫಲ್ಯವೇ ಕಾರಣ. ಮಾಹಿತಿ ಹಕ್ಕು ಹೋರಾಟಗಾರರನ್ನು ದಮನಿಸಲು ಹೊರಟಿದೆ. ಸಮಸ್ಯೆಗಳ ಪಟ್ಟಿಯ ಸರಮಾಲೆಯೇ ಇದೆ ಎಂದು ಅವರು ಹೇಳಿದರು.