ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಬಹಿರಂಗ, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ: ನಳಿನ್ ಕುಮಾರ್ ಕಟೀಲ್
1153 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಮಂಗಳೂರಿನ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂಬ ವಿಚಾರವಾಗಿ ನಡೆದಿರುವ ಬೆಳವಣಿಗೆಗಳು ಚರ್ಚೆಗೆ ಗ್ರಾಸವಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಕ್ಕಾಗಿ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜೆರೋಸಾ ಶಾಲೆ ವಿಚಾರದಲ್ಲಿ ಕೋಮು ಭಾವನೆಗೆ ಪ್ರಚೋದಿಸಿರುವ ಶಿಕ್ಷಕಿಯ ಅಮಾನತಿಗೆ ನೈತಿಕ ಬೆಂಬಲ ನೀಡಿರುವ ಶಾಸಕರು, ಕಾರ್ಪೊರೇಟರ್ಗಳ ಮೇಲೆ ಕೇಸು ದಾಖಲಿಸಿರುವುದು, ಕಾನೂನು ಕ್ರಮ ಕೈಗೊಂಡ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಕಾಂಗ್ರೆಸ್ ತುಷ್ಠೀಕರಣ ನೀತಿಯ ಪರಮಾವಧಿ. ಇದು ಮತಬ್ಯಾಂಕಿಗೆ ಮಾಡಿರುವ ಕಾಂಗ್ರೆಸ್ನ ಹೀನ ರಾಜಕಾರಣ. ಇದನ್ನು ನಾವು ಖಂಡಿಸುತ್ತೇವೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ನ ಹಿಂದೂ ವಿರೋಧಿ ನೀತಿಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಜೆರೋಸಾ ಶಾಲೆ ವಿಚಾರದಲ್ಲಿ ವರ್ಗಾವಣೆ ಮಾಡಿರುವ ಡಿಡಿಪಿಐಯನ್ನು ವಾಪಾಸ್ ಕರೆಸಿಕೊಳ್ಳಬೇಕು. ಶಾಸಕರು, ಕಾರ್ಪೊರೇಟರ್ಗಳ ಮೇಲಿನ ಕೇಸ್ ವಾಪಾಸ್ ತೆಗೆದುಕೊಳ್ಳಬೇಕು. ರಾಮವಿರೋಧಿ ಹೇಳಿಕೆ ನೀಡಿರುವ ಶಿಕ್ಷಕಿಯ ಮೇಲೆ ಏನು ಕ್ರಮ ಆಗಿದೆ ಎಂದು ತಿಳಿಸಿ ಎಂದು ನಳಿನ್ ಕುಮಾರ್ ತಾಕೀತು ಮಾಡಿದರು.
ಜೆರೋಸಾ ಶಾಲೆ ವಿಚಾರದಲ್ಲಿ ಕೋಮು ಭಾವನೆಗೆ ಪ್ರಚೋದಿಸಿರುವ ಶಿಕ್ಷಕಿಯ ಅಮಾನತಿಗೆ ನೈತಿಕ ಬೆಂಬಲ ನೀಡಿರುವ ಶಾಸಕರು, ಕಾರ್ಪೊರೇಟರ್ಗಳ ಮೇಲೆ ಕೇಸು ದಾಖಲಿಸಿರುವುದು, ಕಾನೂನು ಕ್ರಮ ಕೈಗೊಂಡ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಕಾಂಗ್ರೆಸ್ ತುಷ್ಠೀಕರಣ ನೀತಿಯ ಪರಮಾವಧಿ. ಇದು ಮತಬ್ಯಾಂಕಿಗೆ ಮಾಡಿರುವ ಕಾಂಗ್ರೆಸ್ನ ಹೀನ ರಾಜಕಾರಣ. ಇದನ್ನು ನಾವು ಖಂಡಿಸುತ್ತೇವೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ನ ಹಿಂದೂ ವಿರೋಧಿ ನೀತಿಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಜೆರೋಸಾ ಶಾಲೆ ವಿಚಾರದಲ್ಲಿ ವರ್ಗಾವಣೆ ಮಾಡಿರುವ ಡಿಡಿಪಿಐಯನ್ನು ವಾಪಾಸ್ ಕರೆಸಿಕೊಳ್ಳಬೇಕು. ಶಾಸಕರು, ಕಾರ್ಪೊರೇಟರ್ಗಳ ಮೇಲಿನ ಕೇಸ್ ವಾಪಾಸ್ ತೆಗೆದುಕೊಳ್ಳಬೇಕು. ರಾಮವಿರೋಧಿ ಹೇಳಿಕೆ ನೀಡಿರುವ ಶಿಕ್ಷಕಿಯ ಮೇಲೆ ಏನು ಕ್ರಮ ಆಗಿದೆ ಎಂದು ತಿಳಿಸಿ ಎಂದು ನಳಿನ್ ಕುಮಾರ್ ತಾಕೀತು ಮಾಡಿದರು.