ಬಿಜೆಪಿಯವರು ಏಕಪಕ್ಷೀಯ ದೇಶ, ಒಬ್ಬನೇ ನಾಯಕ ಇರಬೇಕು ಅಂದುಕೊಂಡಿದ್ದಾರೆ; ದಿನೇಶ್ ಗುಂಡೂರಾವ್
1046 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿದಕ್ಷಿಣ ಕನ್ನಡ: ಹರೀಶ್ ಪೂಂಜಾ ಉದ್ದೇಶ ಬೇರೆ ಇದೆ, ನಾವು ರಾಜ್ಯಕ್ಕೆ ಅನ್ಯಾಯ ಆಗ್ತಿದೆ ಅಂತಿದ್ದೇವೆ. ರಾಜ್ಯಕ್ಕೆ ಅನ್ಯಾಯ ಆಗೋದ್ರಲ್ಲಿ ಸತ್ಯಾಂಶವನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಲ್ಲಿ ಮಾತನಾಡಿದ ಅವರು, ಹರೀಶ್ ಪೂಂಜಾ ಸತ್ಯ ಒಪ್ಪಿಕೊಳ್ಳದೇ ಮೊಂಡುವಾದ ಪ್ರದರ್ಶನ ಮಾಡಿದ್ರೆ ಏನ್ ಹೇಳೋದು, ರಾಜ್ಯಕ್ಕೆ ಬರೋ ತೆರಿಗೆ ಪ್ರಮಾಣದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಇದು ರಾಜ್ಯಕ್ಕೆ ಅನ್ಯಾಯ, ಆ ವಿಚಾರ ಪೂಂಜಾ ಮಾತನಾಡಬೇಕು. ಇದರಲ್ಲೂ ಅವರು ಜನರನ್ನು ಒಡೀಬೇಕಂದ್ರೆ ಇದು ದುರ್ದೈವ, ಇವರದ್ದೆಲ್ಲ ಇದೇ ಕುತಂತ್ರ, ಧರ್ಮದ ಹೆಸರಿನಲ್ಲಿ ಅನ್ಯಾಯದ ಕೆಲಸ ಮಾಡ್ತಾ ಇದಾರೆ ಎಂದರು.
ಕಾನೂನು ಯಾರೇ ಕೈಗೆ ತೆಗೆದುಕೊಂಡರು, ನಾವು ಸಹಿಸಲ್ಲ, ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ, ನೈತಿಕ ಪೊಲೀಸ್ ಗಿರಿ ಮಾಡೋರ ವಿರುದ್ದ ಕ್ರಮ ಆಗ್ತಿದೆ. ಮೊನ್ನೆಯೂ ಮೂರು ಜನರ ಬಂಧನ ಆಗಿದೆ, ಇದು ಜಿಲ್ಲೆಗೆ ಕೆಟ್ಟ ಹೆಸರು, ಇಡೀ ದಕ್ಷಿಣ ಕನ್ನಡಕ್ಕೆ ಇದೆಲ್ಲ ಕಳಂಕ, ಅದಕ್ಕೆ ದ.ಕ ಜಿಲ್ಲೆಗೆ ಇವತ್ತು ಬೇರೆ ಜನರು ಬರ್ತಾ ಇಲ್ಲ, ಈ ಕಳಂಕದಿಂದ ಹೊರ ಬರಬೇಕು. ಸುರಕ್ಷಿತ ವಾತಾವರಣ ಸೃಷ್ಟಿಯಾಗಬೇಕು ಇಲ್ಲಿ ಆರ್ಎಸ್ಎಸ್, ಭಜರಂಗದಳ ಪ್ರಚೋದನೆ ಮಾಡ್ತಾ ಇದೆ, ಇವರ ಪ್ರಚೋದನೆಯಲ್ಲಿ ಇವರು ಹೇಳಿದ್ದೇ ನಡೀಬೇಕು ಅಂದುಕೊಂಡಿದ್ದಾರೆ ಇದು ಹಿಂದೂ ದೇಶ, ಹಿಂದುತ್ವ ಅಂತ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.
ಮೊನ್ನೆ ಕೊಡಗಿನಲ್ಲಿ ಒಬ್ಬ ಹಿಂದೂ ಚುಚ್ಚಿದ ಕಾರಣ ಒಬ್ಬ ಮುಸ್ಲಿಂ ತೀರಿ ಹೋಗಿ ಬಿಟ್ಟ, ಆದರೆ ಅದು ದೊಡ್ಡ ಗಲಾಟೆ ಆಗಿಲ್ಲ, ಅದು ವೈಯಕ್ತಿಕ ಕಾರಣದಿಂದ ಆಗಿದ್ದು, ಯಾವುದೋ ಸಂಧರ್ಭದಲ್ಲಿ ಮಾತುಕತೆ ಆಗಿ ಅಲ್ಲಿ ಕೊಲೆಯಾಯ್ತು, ಆದರೆ ನಮ್ಮ ಅದೃಷ್ಟ ಏನಂದ್ರೆ ಅಲ್ಲಿ ಮುಸ್ಲಿಂ ತೀರಿ ಹೋಗಿದ್ದು, ಹಿಂದೂ ತೀರಿ ಹೋಗಿದ್ರೆ ಇಡೀ ಊರಿಗೆ ಬೆಂಕಿ ಹಚ್ಚಿರೋರು, ಯಾವುದೇ ಕಾರಣ ಇರಲಿ, ಹಿಂದೂ ಮುಸ್ಲಿಂ ಇದ್ರೆ ಇವರಿಗೆ ಅರ್ಥ ಬೇರೆಯೇ ಆಗಿದೆ ಎಂದು ಹೇಳಿದರು.
ಸಹೋದರತ್ವ ಮತ್ತು ಕೋಮು ಸೌಹಾರ್ದ ನಮಗೆ ಮುಖ್ಯ, ಅನಂತಕುಮಾರ್, ನಳಿನ್ ಕಟೀಲ್, ಸುನೀಲ್ ಕುಮಾರ್ಗೆ ದ್ವೇಷವೇ ಬಂಡವಾಳ, ಬಿಜೆಪಿಯವರದ್ದು ಇದೇ ಆಗಿದೆ, ಹೆದರಿಸೋದು ಮತ್ತು ಸರ್ವಾಧಿಕಾರ ವಿರೋಧ ಪಕ್ಷ ರಹಿತ ದೇಶ ಮಾಡಲು ಬಿಜೆಪಿ ಹೊರಟಿದೆ. ಏಕಪಕ್ಷೀಯ ದೇಶ ಮತ್ತು ಒಬ್ಬನೇ ನಾಯಕ ಇರಬೇಕು ಅಂದುಕೊಂಡಿದ್ದಾರೆ
ಈ ಥರ ಪ್ರಜಾಪ್ರಭುತ್ವ ಈ ದೇಶಕ್ಕೆ ಒಳ್ಳೆದಲ್ಲ, ಬಹಳ ಬುದ್ದಿವಂತಿಕೆಯಿಂದ ಧರ್ಮದ ಹೆಸರಲ್ಲಿ ತಂದು ಮಾಡ್ತಾ ಇದಾರೆ ಈ ದೇಶದ ಸಮಸ್ಯೆ ಬಗ್ಗೆ ನರೇಂದ್ರ ಮೋದಿ ಮಾತನಾಡಲ್ಲ ಎಂದರು.
ಮಂಗಳೂರಲ್ಲಿ ಮಾತನಾಡಿದ ಅವರು, ಹರೀಶ್ ಪೂಂಜಾ ಸತ್ಯ ಒಪ್ಪಿಕೊಳ್ಳದೇ ಮೊಂಡುವಾದ ಪ್ರದರ್ಶನ ಮಾಡಿದ್ರೆ ಏನ್ ಹೇಳೋದು, ರಾಜ್ಯಕ್ಕೆ ಬರೋ ತೆರಿಗೆ ಪ್ರಮಾಣದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಇದು ರಾಜ್ಯಕ್ಕೆ ಅನ್ಯಾಯ, ಆ ವಿಚಾರ ಪೂಂಜಾ ಮಾತನಾಡಬೇಕು. ಇದರಲ್ಲೂ ಅವರು ಜನರನ್ನು ಒಡೀಬೇಕಂದ್ರೆ ಇದು ದುರ್ದೈವ, ಇವರದ್ದೆಲ್ಲ ಇದೇ ಕುತಂತ್ರ, ಧರ್ಮದ ಹೆಸರಿನಲ್ಲಿ ಅನ್ಯಾಯದ ಕೆಲಸ ಮಾಡ್ತಾ ಇದಾರೆ ಎಂದರು.
ಕಾನೂನು ಯಾರೇ ಕೈಗೆ ತೆಗೆದುಕೊಂಡರು, ನಾವು ಸಹಿಸಲ್ಲ, ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ, ನೈತಿಕ ಪೊಲೀಸ್ ಗಿರಿ ಮಾಡೋರ ವಿರುದ್ದ ಕ್ರಮ ಆಗ್ತಿದೆ. ಮೊನ್ನೆಯೂ ಮೂರು ಜನರ ಬಂಧನ ಆಗಿದೆ, ಇದು ಜಿಲ್ಲೆಗೆ ಕೆಟ್ಟ ಹೆಸರು, ಇಡೀ ದಕ್ಷಿಣ ಕನ್ನಡಕ್ಕೆ ಇದೆಲ್ಲ ಕಳಂಕ, ಅದಕ್ಕೆ ದ.ಕ ಜಿಲ್ಲೆಗೆ ಇವತ್ತು ಬೇರೆ ಜನರು ಬರ್ತಾ ಇಲ್ಲ, ಈ ಕಳಂಕದಿಂದ ಹೊರ ಬರಬೇಕು. ಸುರಕ್ಷಿತ ವಾತಾವರಣ ಸೃಷ್ಟಿಯಾಗಬೇಕು ಇಲ್ಲಿ ಆರ್ಎಸ್ಎಸ್, ಭಜರಂಗದಳ ಪ್ರಚೋದನೆ ಮಾಡ್ತಾ ಇದೆ, ಇವರ ಪ್ರಚೋದನೆಯಲ್ಲಿ ಇವರು ಹೇಳಿದ್ದೇ ನಡೀಬೇಕು ಅಂದುಕೊಂಡಿದ್ದಾರೆ ಇದು ಹಿಂದೂ ದೇಶ, ಹಿಂದುತ್ವ ಅಂತ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.
ಮೊನ್ನೆ ಕೊಡಗಿನಲ್ಲಿ ಒಬ್ಬ ಹಿಂದೂ ಚುಚ್ಚಿದ ಕಾರಣ ಒಬ್ಬ ಮುಸ್ಲಿಂ ತೀರಿ ಹೋಗಿ ಬಿಟ್ಟ, ಆದರೆ ಅದು ದೊಡ್ಡ ಗಲಾಟೆ ಆಗಿಲ್ಲ, ಅದು ವೈಯಕ್ತಿಕ ಕಾರಣದಿಂದ ಆಗಿದ್ದು, ಯಾವುದೋ ಸಂಧರ್ಭದಲ್ಲಿ ಮಾತುಕತೆ ಆಗಿ ಅಲ್ಲಿ ಕೊಲೆಯಾಯ್ತು, ಆದರೆ ನಮ್ಮ ಅದೃಷ್ಟ ಏನಂದ್ರೆ ಅಲ್ಲಿ ಮುಸ್ಲಿಂ ತೀರಿ ಹೋಗಿದ್ದು, ಹಿಂದೂ ತೀರಿ ಹೋಗಿದ್ರೆ ಇಡೀ ಊರಿಗೆ ಬೆಂಕಿ ಹಚ್ಚಿರೋರು, ಯಾವುದೇ ಕಾರಣ ಇರಲಿ, ಹಿಂದೂ ಮುಸ್ಲಿಂ ಇದ್ರೆ ಇವರಿಗೆ ಅರ್ಥ ಬೇರೆಯೇ ಆಗಿದೆ ಎಂದು ಹೇಳಿದರು.
ಸಹೋದರತ್ವ ಮತ್ತು ಕೋಮು ಸೌಹಾರ್ದ ನಮಗೆ ಮುಖ್ಯ, ಅನಂತಕುಮಾರ್, ನಳಿನ್ ಕಟೀಲ್, ಸುನೀಲ್ ಕುಮಾರ್ಗೆ ದ್ವೇಷವೇ ಬಂಡವಾಳ, ಬಿಜೆಪಿಯವರದ್ದು ಇದೇ ಆಗಿದೆ, ಹೆದರಿಸೋದು ಮತ್ತು ಸರ್ವಾಧಿಕಾರ ವಿರೋಧ ಪಕ್ಷ ರಹಿತ ದೇಶ ಮಾಡಲು ಬಿಜೆಪಿ ಹೊರಟಿದೆ. ಏಕಪಕ್ಷೀಯ ದೇಶ ಮತ್ತು ಒಬ್ಬನೇ ನಾಯಕ ಇರಬೇಕು ಅಂದುಕೊಂಡಿದ್ದಾರೆ
ಈ ಥರ ಪ್ರಜಾಪ್ರಭುತ್ವ ಈ ದೇಶಕ್ಕೆ ಒಳ್ಳೆದಲ್ಲ, ಬಹಳ ಬುದ್ದಿವಂತಿಕೆಯಿಂದ ಧರ್ಮದ ಹೆಸರಲ್ಲಿ ತಂದು ಮಾಡ್ತಾ ಇದಾರೆ ಈ ದೇಶದ ಸಮಸ್ಯೆ ಬಗ್ಗೆ ನರೇಂದ್ರ ಮೋದಿ ಮಾತನಾಡಲ್ಲ ಎಂದರು.