ಉಕ್ರೇನ್ನಲ್ಲಿ ಸಿಲುಕಿರುವ ಮಂಗಳೂರಿನ ವಿದ್ಯಾರ್ಥಿ ಕ್ಲೇಟನ್! ಶೀಘ್ರ ಮಗನನ್ನು ಕರೆಸಿ ಎಂದು ತಾಯಿಯ ಮನವಿ
1002 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಮಂಗಳೂರು: ಉಕ್ರೇನ್ನಲ್ಲಿ ಮಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ಕ್ಲೇಟನ್ ಸಿಲುಕಿಕೊಂಡಿದ್ದಾರೆ. ದಯವಿಟ್ಟು ನಮ್ಮ ಮಗನನ್ನು ಆದಷ್ಟು ಬೇಗ ಕರೆದುಕೊಂಡು ಬನ್ನಿ ಎಂದು ಕ್ಲೇಟನ್ ತಾಯಿ ಮನವಿ ಮಾಡಿದ್ದಾರೆ. ಕ್ಲೇಟನ್ ಸದ್ಯ ಉಕ್ರೇನ್ ಕ್ಯಾಪಿಟಲ್ ಕೀವ್ ನಗರದಲ್ಲೇ ಇದ್ದು, ಬೆಳಗ್ಗೆ ಅಷ್ಟು ಆತಂಕ ಇರಲಿಲ್ಲ. ಆದರೆ, ಈಗ ಸ್ವಲ್ಪ ಭಯದಲ್ಲಿ ಇದ್ದು, ಬೆಳಗ್ಗೆ 9 ಗಂಟೆಯಿಂದ ಪ್ರತೀ ಅರ್ಧ ಗಂಟೆಗೊಮ್ಮೆ ನಮ್ಮ ಜೊತೆ ಮಾತನಾಡುತ್ತಿದ್ದಾನೆ. ಈಗ ಅವರ ಹತ್ತಿರದ ಒಂದು ಏರ್ಪೋರ್ಟ್ನಲ್ಲಿ ದೊಡ್ಡ ಮಿಸೈಲ್ ದಾಳಿ ಆಗಿದೆ ಎಂದು ಕ್ಲೇಟನ್ ತಾಯಿ ಆತಂಕಗೊಂಡಿದ್ದಾರೆ.
ಕ್ಲೇಟನ್ ಡಿಸೆಂಬರ್ ಮೊದಲ ವಾರ ಉಕ್ರೇನ್ಗೆ ತೆರಳಿದ್ದಯ, ಇಲ್ಲಿನ ಮಾಧ್ಯಮಗಳಲ್ಲಿ ಯುದ್ಧ ಪರಿಸ್ಥಿತಿ ಬಗ್ಗೆ ಬರ್ತಾ ಇತ್ತು, ಆದರೆ ಅವನು ಆ ರೀತಿ ಯಾವ ಪರಿಸ್ಥಿತಿಯೂ ಇಲ್ಲ ಎಂದಿದ್ದ. ಆದರೆ, ಈಗ ಮಿಸೈಲ್ ದಾಳಿ ಆದ ಜಾಗ ಹತ್ತಿರದಲ್ಲಿಯೇ ಇದೆ. ದಿನನಿತ್ಯ ಚಟುವಟಿಕೆ ಬಂದ್ ಆಗುತ್ತೆ ಎನ್ನುವ ಭಯದಲ್ಲಿ ಕ್ಲೇಟನ್ ಇದ್ದು, ಭಾರತೀಯ ರಾಯಭಾರಿ ಕಚೇರಿ ಅವರ ಸಂಪರ್ಕದಲ್ಲಿ ಇದೆ. ಆದಷ್ಟು ಶೀಘ್ರ ಬೇರೆ ಕಡೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ. ಸರ್ಕಾರ ದಯವಿಟ್ಟು ಆದಷ್ಟು ಬೇಗ ನಮ್ಮ ಮಗನನ್ನ ಕರೆ ತರಲಿ ಎಂದು ಹೇಳಿದರು.
ಕ್ಲೇಟನ್ ಡಿಸೆಂಬರ್ ಮೊದಲ ವಾರ ಉಕ್ರೇನ್ಗೆ ತೆರಳಿದ್ದಯ, ಇಲ್ಲಿನ ಮಾಧ್ಯಮಗಳಲ್ಲಿ ಯುದ್ಧ ಪರಿಸ್ಥಿತಿ ಬಗ್ಗೆ ಬರ್ತಾ ಇತ್ತು, ಆದರೆ ಅವನು ಆ ರೀತಿ ಯಾವ ಪರಿಸ್ಥಿತಿಯೂ ಇಲ್ಲ ಎಂದಿದ್ದ. ಆದರೆ, ಈಗ ಮಿಸೈಲ್ ದಾಳಿ ಆದ ಜಾಗ ಹತ್ತಿರದಲ್ಲಿಯೇ ಇದೆ. ದಿನನಿತ್ಯ ಚಟುವಟಿಕೆ ಬಂದ್ ಆಗುತ್ತೆ ಎನ್ನುವ ಭಯದಲ್ಲಿ ಕ್ಲೇಟನ್ ಇದ್ದು, ಭಾರತೀಯ ರಾಯಭಾರಿ ಕಚೇರಿ ಅವರ ಸಂಪರ್ಕದಲ್ಲಿ ಇದೆ. ಆದಷ್ಟು ಶೀಘ್ರ ಬೇರೆ ಕಡೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ. ಸರ್ಕಾರ ದಯವಿಟ್ಟು ಆದಷ್ಟು ಬೇಗ ನಮ್ಮ ಮಗನನ್ನ ಕರೆ ತರಲಿ ಎಂದು ಹೇಳಿದರು.