ಸ್ತ್ರೀ ಶೋಷಣೆಯನ್ನು ತಡೆಯಲು ದೈವವಾದ ಮಹಿಳೆ, ತುಳುನಾಡಿನಲ್ಲಿ ನಡೆಯುವ ಸಿರಿ ಜಾತ್ರೆ
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಮಂಗಳೂರು: ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲಿ ಸಿರಿ ಜಾತ್ರೆಯೂ ಒಂದು. ಸ್ತ್ರೀ ಶೋಷಣೆಯನ್ನು ತಡೆಯಲು ಮಹಿಳೆ ದೈವವಾದದ್ದು ಜಾನಪದವಾಗಿ ಜನಜನಿತ. ಸಿರಿ ಆಚರಣೆಯನ್ನು ಜಾನಪದ ಸಂಸ್ಕೃತಿಯ ಭಾಗವೆಂದು ಜನಪದ ವಿದ್ವಾಂಸರು ಕರೆದರೆ, ವಿಚಾರವಾದಿಗಳು ಇದು ಮೂಢನಂಬಿಕೆ ಎನ್ನುತ್ತಾರೆ. ಇದು ಅಂದಿನಿಂದಲೂ ಚರ್ಚೆಯಲ್ಲಿರುವ ಸಂಗತಿ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಚರಿಸಲಾಗುವ ಸಿರಿಜಾತ್ರೆಯ ಕಾಲ ತುಳುವಿನ ಸುಗ್ಗಿ ತಿಂಗಳು. ಕೇವಲ ಒಂದು ತಿಂಗಳ ಕಾಲ ಮಾತ್ರ ಆಚರಿಸಲಾಗುವ ಈ ಸಿರಿಜಾತ್ರೆಗೆ ತನ್ನದೇ ಆದ ಮಹತ್ವವಿದೆ. ತುಳುವರು ತಮ್ಮ ಕುಲದೇವರಿಗೆ, ಆರಾಧ್ಯ ದೈವಕ್ಕೆ ಹರಕೆ ಸಲ್ಲಿಸುವುದು ಸಿರಿ ಜಾತ್ರೆಯ ವಿಶೇಷ. ಈ ಜಾತ್ರೆ ನಡೆಯುವ ಸ್ಥಳಗಳನ್ನು ಆಲಡೆ ಎಂದು ಕರೆಯಲಾಗುತ್ತದೆ. ತುಳುನಾಡಿನಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಸಿರಿ ಆಲಡೆಗಳಿವೆ ಎನ್ನುವುದು ಒಂದು ಅಂದಾಜು. ಇದರಲ್ಲಿ ಮರೋಡಿ ಶ್ರೀ ಉಮಾಮಹೇಶ್ವರ ಕೂಡ ಒಂದು. ಇಲ್ಲಿ ಕೂಡ ಸಿರಿ-ಕುಮಾರರಿರುತ್ತಾರೆ. ಸಿರಿ ಮತ್ತು ಕುಮಾರ ಸಹೋದರಿ-ಸಹೋದರರು. ಮನೆಯಲ್ಲಿ ಕಷ್ಟ ಬಂದಾಗ, ಸಹಿಸಲಾಗದಂಥ ಸಂಕಟ ಬಂದಾಗ, ಸಂತಾನ ಭಾಗ್ಯವಿಲ್ಲದಿದ್ದಾಗ ಹರಕೆ ಹೇಳುವ ಕ್ರಮವಿದೆ. ಸಿರಿ ಜಾತ್ರೆಗೆ ಬಂದು ಸಿರಿಯಾಗಿ, ಕುಮಾರನಾಗಿ ದೇವರ ಸನ್ನಿಧಿಯಲ್ಲಿ ಹರಕೆ ತೀರಿಸುವುದಾಗಿ ಹೇಳಿಕೊಂಡಿರುತ್ತಾರೆ. ಹೀಗೆ ಹರಕೆ ಹೇಳಿಕೊಂಡರೆ ಫಲ ಸಿಗುತ್ತದೆ ಎನ್ನುವುದು ಬಲವಾದ ನಂಬಿಕೆ. ಹೀಗೆ ಹರಕೆ ಹೇಳಿಕೊಂಡವರು ತಮ್ಮ ಮನೆ ಮಂದಿ ಜೊತೆ ಬಂದು ಸಿರಿಜಾತ್ರೆಯಲ್ಲಿ ಹರಕೆ ಸಲ್ಲಿಸುತ್ತಾರೆ.
ದೇವರಿಗೆ ವಿಶೇಷ ಪೂಜೆ ಆದಮೇಲೆ ದೇವಸ್ಥಾನದ ಹೊರಗೆ ಅಥವಾ ಕಡಿಮೆ ಸಂಖ್ಯೆಯಲ್ಲಿದ್ದರೆ ಪ್ರಾಂಗಣದಲ್ಲಿ ಸಿರಿಗಳ ಹರಕೆ ಸಂದಾಯ. ಹುರುಳಿ ಮತ್ತು ತೆಂಗಿನಕಾಯಿ ಇಲ್ಲಿನ ಹರಕೆಯ ವೈಶಿಷ್ಟ್ಯತೆ. ತುಳುನಾಡಿನ ಜಮೀನ್ದಾರಿ ಪದ್ದತಿಯಲ್ಲಿ ಅತಿಯಾದ ಶೋಷಣೆ ಇತ್ತು, ಅದರಲ್ಲೂ ಮಹಿಳೆಯರ ಮೇಲೆ ಅನೇಕ ಕಟ್ಟುಪಾಡುಗಳು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿತ್ತು. ಇದನ್ನು ಮೆಟ್ಟಿ ನಿಂತವಳು ಮಹಿಳೆ. ಶೋಷಣೆಯನ್ನು ವಿರೋಧಿಸುತ್ತಾ ಆಕೆ ದೈವವಾದಳು ಎನ್ನುವುದು ಜನಪದ ಹೇಳುವ ಕತೆ. ತುಳುನಾಡಿನ ದೈವಗಳ ಹಿಂದೆ ಇಂಥದ್ದೇ ಕತೆ ಇದೆ. ಅದರಲ್ಲೂ ದಲಿತ, ಶೂದ್ರ ಸಂಸ್ಕೃತಿಯಲ್ಲಿ ಇಂಥ ಶೋಷಣೆಯನ್ನು ವಿರೋಧಿಸಿದವರೇ ವೀರೋಚಿತ ಮರಣಹೊಂದಿ ದೈವಗಳ ಸ್ಥಾನಕ್ಕೇರಿದರು ಎನ್ನುವ ಬಲವಾದ ನಂಬಿಕೆ ಇಂಥ ಆಚರಣೆಗಳೊಂದಿಗೆ ಥಳುಕು ಹಾಕಿಕೊಂಡಿದೆ.
ಸಿರಿ ಧಾರ್ಮಿಕ ಆಚರಣೆಯಾಗಿ ಭದ್ರವಾಗಿರುವಂತೆಯೇ ಸಾಂಸ್ಕೃತಿಕವಾಗಿಯೂ, ಜಾನಪದ ಹಿನ್ನೆಲೆಯಲ್ಲೂ ತನ್ನದೇ ಆದ ಸ್ಥಾನ ಪಡೆದಿದೆ. ಸಾರ್ವತ್ರಿಕವಾಗಿ ನಂಬದಿದ್ದರೂ ತಮ್ಮ ಬದುಕು-ಅಸ್ತಿತ್ವವನ್ನು ನಂಬುವಷ್ಟೇ ಗಟ್ಟಿಯಾಗಿ ಸಿರಿ ಆಚರಣೆಯನ್ನು ನಂಬುವವರಿದ್ದಾರೆ. ಆದ್ದರಿಂದಲೇ ತುಳುನಾಡಿನಲ್ಲಿ ಸಿರಿಜಾತ್ರೆ ಈಗಲೂ ಮಹತ್ವದ್ದೆನಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಚರಿಸಲಾಗುವ ಸಿರಿಜಾತ್ರೆಯ ಕಾಲ ತುಳುವಿನ ಸುಗ್ಗಿ ತಿಂಗಳು. ಕೇವಲ ಒಂದು ತಿಂಗಳ ಕಾಲ ಮಾತ್ರ ಆಚರಿಸಲಾಗುವ ಈ ಸಿರಿಜಾತ್ರೆಗೆ ತನ್ನದೇ ಆದ ಮಹತ್ವವಿದೆ. ತುಳುವರು ತಮ್ಮ ಕುಲದೇವರಿಗೆ, ಆರಾಧ್ಯ ದೈವಕ್ಕೆ ಹರಕೆ ಸಲ್ಲಿಸುವುದು ಸಿರಿ ಜಾತ್ರೆಯ ವಿಶೇಷ. ಈ ಜಾತ್ರೆ ನಡೆಯುವ ಸ್ಥಳಗಳನ್ನು ಆಲಡೆ ಎಂದು ಕರೆಯಲಾಗುತ್ತದೆ. ತುಳುನಾಡಿನಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಸಿರಿ ಆಲಡೆಗಳಿವೆ ಎನ್ನುವುದು ಒಂದು ಅಂದಾಜು. ಇದರಲ್ಲಿ ಮರೋಡಿ ಶ್ರೀ ಉಮಾಮಹೇಶ್ವರ ಕೂಡ ಒಂದು. ಇಲ್ಲಿ ಕೂಡ ಸಿರಿ-ಕುಮಾರರಿರುತ್ತಾರೆ. ಸಿರಿ ಮತ್ತು ಕುಮಾರ ಸಹೋದರಿ-ಸಹೋದರರು. ಮನೆಯಲ್ಲಿ ಕಷ್ಟ ಬಂದಾಗ, ಸಹಿಸಲಾಗದಂಥ ಸಂಕಟ ಬಂದಾಗ, ಸಂತಾನ ಭಾಗ್ಯವಿಲ್ಲದಿದ್ದಾಗ ಹರಕೆ ಹೇಳುವ ಕ್ರಮವಿದೆ. ಸಿರಿ ಜಾತ್ರೆಗೆ ಬಂದು ಸಿರಿಯಾಗಿ, ಕುಮಾರನಾಗಿ ದೇವರ ಸನ್ನಿಧಿಯಲ್ಲಿ ಹರಕೆ ತೀರಿಸುವುದಾಗಿ ಹೇಳಿಕೊಂಡಿರುತ್ತಾರೆ. ಹೀಗೆ ಹರಕೆ ಹೇಳಿಕೊಂಡರೆ ಫಲ ಸಿಗುತ್ತದೆ ಎನ್ನುವುದು ಬಲವಾದ ನಂಬಿಕೆ. ಹೀಗೆ ಹರಕೆ ಹೇಳಿಕೊಂಡವರು ತಮ್ಮ ಮನೆ ಮಂದಿ ಜೊತೆ ಬಂದು ಸಿರಿಜಾತ್ರೆಯಲ್ಲಿ ಹರಕೆ ಸಲ್ಲಿಸುತ್ತಾರೆ.
ದೇವರಿಗೆ ವಿಶೇಷ ಪೂಜೆ ಆದಮೇಲೆ ದೇವಸ್ಥಾನದ ಹೊರಗೆ ಅಥವಾ ಕಡಿಮೆ ಸಂಖ್ಯೆಯಲ್ಲಿದ್ದರೆ ಪ್ರಾಂಗಣದಲ್ಲಿ ಸಿರಿಗಳ ಹರಕೆ ಸಂದಾಯ. ಹುರುಳಿ ಮತ್ತು ತೆಂಗಿನಕಾಯಿ ಇಲ್ಲಿನ ಹರಕೆಯ ವೈಶಿಷ್ಟ್ಯತೆ. ತುಳುನಾಡಿನ ಜಮೀನ್ದಾರಿ ಪದ್ದತಿಯಲ್ಲಿ ಅತಿಯಾದ ಶೋಷಣೆ ಇತ್ತು, ಅದರಲ್ಲೂ ಮಹಿಳೆಯರ ಮೇಲೆ ಅನೇಕ ಕಟ್ಟುಪಾಡುಗಳು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿತ್ತು. ಇದನ್ನು ಮೆಟ್ಟಿ ನಿಂತವಳು ಮಹಿಳೆ. ಶೋಷಣೆಯನ್ನು ವಿರೋಧಿಸುತ್ತಾ ಆಕೆ ದೈವವಾದಳು ಎನ್ನುವುದು ಜನಪದ ಹೇಳುವ ಕತೆ. ತುಳುನಾಡಿನ ದೈವಗಳ ಹಿಂದೆ ಇಂಥದ್ದೇ ಕತೆ ಇದೆ. ಅದರಲ್ಲೂ ದಲಿತ, ಶೂದ್ರ ಸಂಸ್ಕೃತಿಯಲ್ಲಿ ಇಂಥ ಶೋಷಣೆಯನ್ನು ವಿರೋಧಿಸಿದವರೇ ವೀರೋಚಿತ ಮರಣಹೊಂದಿ ದೈವಗಳ ಸ್ಥಾನಕ್ಕೇರಿದರು ಎನ್ನುವ ಬಲವಾದ ನಂಬಿಕೆ ಇಂಥ ಆಚರಣೆಗಳೊಂದಿಗೆ ಥಳುಕು ಹಾಕಿಕೊಂಡಿದೆ.
ಸಿರಿ ಧಾರ್ಮಿಕ ಆಚರಣೆಯಾಗಿ ಭದ್ರವಾಗಿರುವಂತೆಯೇ ಸಾಂಸ್ಕೃತಿಕವಾಗಿಯೂ, ಜಾನಪದ ಹಿನ್ನೆಲೆಯಲ್ಲೂ ತನ್ನದೇ ಆದ ಸ್ಥಾನ ಪಡೆದಿದೆ. ಸಾರ್ವತ್ರಿಕವಾಗಿ ನಂಬದಿದ್ದರೂ ತಮ್ಮ ಬದುಕು-ಅಸ್ತಿತ್ವವನ್ನು ನಂಬುವಷ್ಟೇ ಗಟ್ಟಿಯಾಗಿ ಸಿರಿ ಆಚರಣೆಯನ್ನು ನಂಬುವವರಿದ್ದಾರೆ. ಆದ್ದರಿಂದಲೇ ತುಳುನಾಡಿನಲ್ಲಿ ಸಿರಿಜಾತ್ರೆ ಈಗಲೂ ಮಹತ್ವದ್ದೆನಿಸಿದೆ.