ಕಾಂತರಾಜು ಜಾತಿಗಣತಿ ವರದಿಯು ನನ್ನ ಕೈ ಸೇರಿಲ್ಲ, ಆಗಲೇ ವರದಿಗೆ ವಿರೋಧ ಅಂದ್ರೆ ಏನು ಹೇಳಲಿ?- ಸಿಎಂ ಸಿದ್ದರಾಮಯ್ಯ
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿ
ಜೆಡಿಎಸ್ ಮತ್ತು ಬಿಜೆಪಿಯವರು ಹತಾಶರಾಗಿದ್ದಾರೆ. ಬಿಜೆಪಿಯವರು ಸಿಎಂ ಬದಲಾವಣೆಯ ಬಗ್ಗೆ ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಬಗ್ಗೆ ಮಾತನಾಡಂತೆ ನಮ್ಮ ನಾಯಕರಿಗೆ ತಿಳಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಡಿಕೆ ಶಿವಕುಮಾರ್ ಸಿಎಂ ಆದರೆ, ಜೆಡಿಎಸ್ ನಾಯಕರು ಬೆಂಬಲ ಕೊಡುವುದಾಗಿ ಎಚ್ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, 'ಕುಮಾರಸ್ವಾಮಿಗೂ ವ್ಯಂಗ್ಯ ಮಾಡೋಕೆ ಬರುತ್ತದೆ ಅನ್ನೋದೆ ಖುಷಿ' ಎಂದರು.
''ಕಾಂತರಾಜು ಜಾತಿ ಗಣತಿ ವರದಿಯು ನನ್ನ ಕೈ ಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಎಂದರೆ ನಾನು ಏನು ಮಾಡಲಿ. ವರದಿಯಲ್ಲಿ ಏನಿದೆ ಏಂಬುದೇ ಗೊತ್ತಿಲ್ಲ. ಅಂಕಿ ಅಂಶವೇ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡುವುದು ಹೇಗೆ? ನವೆಂಬರ್ನಲ್ಲಿ ವರದಿ ಕೊಡುವುದಾಗಿ ಹೇಳಿದ್ದರು. ವರದಿ ಕೊಡಲಿ ಆಮೇಲೆ ನೋಡೊಣ'' ಎಂದರು.
ಕಾಂತರಾಜು ವರದಿಗೆ ಈಶ್ವರಪ್ಪ ವಿರೋಧದ ಬಗ್ಗೆ ಪ್ರತಿಕ್ರಿಯಿಸಿ, ''ಈಶ್ವರಪ್ಪ ಒಂದು ಸವಕಲು ನಾಣ್ಯ. ಅವರು ಸವಕಲು ಆಗಿರುವ ಕಾರಣಕ್ಕೆ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ. ಕಾಂತರಾಜು ವರದಿ ಪರ ವಿಧಾನಸಭೆಯಲ್ಲಿ ಈಶ್ವರಪ್ಪ ಮಾತನಾಡಿಲ್ವ. ಈಗ ಅದನ್ನ ಸುಟ್ಟು ಹಾಕುತ್ತೇವೆ ಎಂದರೆ ಅದರ ಅರ್ಥ ಏನು?'' ಎಂದರು.
ಡಿಕೆ ಶಿವಕುಮಾರ್ ಸಿಎಂ ಆದರೆ, ಜೆಡಿಎಸ್ ನಾಯಕರು ಬೆಂಬಲ ಕೊಡುವುದಾಗಿ ಎಚ್ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, 'ಕುಮಾರಸ್ವಾಮಿಗೂ ವ್ಯಂಗ್ಯ ಮಾಡೋಕೆ ಬರುತ್ತದೆ ಅನ್ನೋದೆ ಖುಷಿ' ಎಂದರು.
''ಕಾಂತರಾಜು ಜಾತಿ ಗಣತಿ ವರದಿಯು ನನ್ನ ಕೈ ಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಎಂದರೆ ನಾನು ಏನು ಮಾಡಲಿ. ವರದಿಯಲ್ಲಿ ಏನಿದೆ ಏಂಬುದೇ ಗೊತ್ತಿಲ್ಲ. ಅಂಕಿ ಅಂಶವೇ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡುವುದು ಹೇಗೆ? ನವೆಂಬರ್ನಲ್ಲಿ ವರದಿ ಕೊಡುವುದಾಗಿ ಹೇಳಿದ್ದರು. ವರದಿ ಕೊಡಲಿ ಆಮೇಲೆ ನೋಡೊಣ'' ಎಂದರು.
ಕಾಂತರಾಜು ವರದಿಗೆ ಈಶ್ವರಪ್ಪ ವಿರೋಧದ ಬಗ್ಗೆ ಪ್ರತಿಕ್ರಿಯಿಸಿ, ''ಈಶ್ವರಪ್ಪ ಒಂದು ಸವಕಲು ನಾಣ್ಯ. ಅವರು ಸವಕಲು ಆಗಿರುವ ಕಾರಣಕ್ಕೆ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ. ಕಾಂತರಾಜು ವರದಿ ಪರ ವಿಧಾನಸಭೆಯಲ್ಲಿ ಈಶ್ವರಪ್ಪ ಮಾತನಾಡಿಲ್ವ. ಈಗ ಅದನ್ನ ಸುಟ್ಟು ಹಾಕುತ್ತೇವೆ ಎಂದರೆ ಅದರ ಅರ್ಥ ಏನು?'' ಎಂದರು.