ಜೆಡಿಎಸ್-ಬಿಜೆಪಿ ನಡುವೆ ಸಿದ್ಧಾಂತಗಳ ಮೈತ್ರಿ ಇಲ್ಲ, ಲೋಕಸಭಾ ಚುನಾವಣೆಗೆ ಸೀಮಿತ: ಶಾಸಕ ಜಿಟಿ ದೇವೇಗೌಡ
1103 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಅನುದಾನ ತಾರತಮ್ಯ ವಿಚಾರವು ಕರ್ನಾಟಕದಲ್ಲಿ ವ್ಯಾಪಾಕ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕರು ದಿಲ್ಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ಇದೆಲ್ಲದರ ಮಧ್ಯೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಶಾಸಕ ಜಿಟಿ ದೇವೇಗೌಡ ಇದೇ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟಿಸೋದು ಸರಿಯಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯ ಪಟ್ಟರು.
ಮೈಸೂರಿನಲ್ಲಿ ಮಾತನಾಡಿದ ಅವರು, ''ನಿರ್ಮಲಾ ಸೀತಾರಾಮ್ ಕೊಟ್ಟಿದ್ದೇವೆ ಅಂತಾರೆ, ಇವ್ರು ಇಲ್ಲ ಅಂತಾರೆ. ಏನೇ ಇದ್ದರೂ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಅನುದಾನ ಕೊಟ್ಟಿಲ್ಲ ಅಂತ ಹೇಳಿ ದಿಲ್ಲಿಗೆ ಹೋಗಿ ಕಾಂಗ್ರೆಸ್ ಪ್ರತಿಭಟನೆ ಮಾಡುವ ಅಗತ್ಯ ಇರಲಿಲ್ಲ'' ಎಂದರು.
''ಬಿಜೆಪಿ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅಷ್ಟೇ. ನಮ್ಮ ತತ್ವ-ಸಿದ್ಧಾಂತವೇ ಬೇರೆ, ಬಿಜೆಪಿ ತತ್ವ-ಸಿದ್ಧಾಂತವೇ ಬೇರೆ. ನಮ್ಮ ತತ್ವ, ಸಿದ್ಧಾಂತದಲ್ಲಿ ಒಂದಿಂಚು ಕೂಡ ಬದಲಾಗಲ್ಲ. ಜಯಪ್ರಕಾಶ್ ನಾರಾಯಣ್ ಕಟ್ಟಿದ ಜೆಡಿಎಸ್ನ ಉಳಿಸಿದ್ದು ದೇವೇಗೌಡರು. ಈಗ ಅವರ ಹಾದಿಯಲ್ಲಿ ನಾವು ಸಾಗುತ್ತೇವೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಾತ್ರ ನಾವು ಒಂದಾಗಿದ್ದೇವೆ'' ಎಂದರು.
ಎಚ್ಡಿ ಕುಮಾರಸ್ವಾಮಿ ಹಾಕಿದ್ದು ಕೇಸರಿ ಟವಲ್, ಬಿಜೆಪಿಯವರ ಟವಲ್ ಅಲ್ಲ. ಆಂಜನೇಯನ ದೇವಸ್ಥಾನಕ್ಕೆ ಹೋಗಿದ್ದಾಗ ಒಬ್ಬ ಹುಡುಗ ಕೇಸರಿ ಟವಲ್ ಹಾಕಿದ್ದು, ಅದನ್ನ ಕಾಂಗ್ರೆಸ್ನವರು ದೊಡ್ಡದು ಮಾಡಿದ್ದಾರೆ ಅಷ್ಟೇ ಎಂದು ಮಂಡ್ಯ ಕೆರಗೋಡು ವಿವಾದ ಸಂಬಂಧ ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟನೆ ಕೊಟ್ಟರು. ಕೆರಗೋಡಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದ ವೇಳೆ ಕೇಸರಿ ಶಾಲು ಹಾಕಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಕುಮಾರಸ್ವಾಮಿ ಇದ್ರ ಬಗ್ಗೆ ಸ್ಪಷ್ಟನೆ ಸಹ ನೀಡಿದ್ದರು. ಇದೀಗ ಜಿಟಿ ದೇವೇಗೌಡ ಸಹ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ತತ್ವ ಸಿದ್ದಾಂತ ಬೇರೆ ಬೇರೆ ಅನ್ನೋದನ್ನು ಒತ್ತಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ''ನಿರ್ಮಲಾ ಸೀತಾರಾಮ್ ಕೊಟ್ಟಿದ್ದೇವೆ ಅಂತಾರೆ, ಇವ್ರು ಇಲ್ಲ ಅಂತಾರೆ. ಏನೇ ಇದ್ದರೂ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಅನುದಾನ ಕೊಟ್ಟಿಲ್ಲ ಅಂತ ಹೇಳಿ ದಿಲ್ಲಿಗೆ ಹೋಗಿ ಕಾಂಗ್ರೆಸ್ ಪ್ರತಿಭಟನೆ ಮಾಡುವ ಅಗತ್ಯ ಇರಲಿಲ್ಲ'' ಎಂದರು.
''ಬಿಜೆಪಿ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅಷ್ಟೇ. ನಮ್ಮ ತತ್ವ-ಸಿದ್ಧಾಂತವೇ ಬೇರೆ, ಬಿಜೆಪಿ ತತ್ವ-ಸಿದ್ಧಾಂತವೇ ಬೇರೆ. ನಮ್ಮ ತತ್ವ, ಸಿದ್ಧಾಂತದಲ್ಲಿ ಒಂದಿಂಚು ಕೂಡ ಬದಲಾಗಲ್ಲ. ಜಯಪ್ರಕಾಶ್ ನಾರಾಯಣ್ ಕಟ್ಟಿದ ಜೆಡಿಎಸ್ನ ಉಳಿಸಿದ್ದು ದೇವೇಗೌಡರು. ಈಗ ಅವರ ಹಾದಿಯಲ್ಲಿ ನಾವು ಸಾಗುತ್ತೇವೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಾತ್ರ ನಾವು ಒಂದಾಗಿದ್ದೇವೆ'' ಎಂದರು.
ಎಚ್ಡಿ ಕುಮಾರಸ್ವಾಮಿ ಹಾಕಿದ್ದು ಕೇಸರಿ ಟವಲ್, ಬಿಜೆಪಿಯವರ ಟವಲ್ ಅಲ್ಲ. ಆಂಜನೇಯನ ದೇವಸ್ಥಾನಕ್ಕೆ ಹೋಗಿದ್ದಾಗ ಒಬ್ಬ ಹುಡುಗ ಕೇಸರಿ ಟವಲ್ ಹಾಕಿದ್ದು, ಅದನ್ನ ಕಾಂಗ್ರೆಸ್ನವರು ದೊಡ್ಡದು ಮಾಡಿದ್ದಾರೆ ಅಷ್ಟೇ ಎಂದು ಮಂಡ್ಯ ಕೆರಗೋಡು ವಿವಾದ ಸಂಬಂಧ ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟನೆ ಕೊಟ್ಟರು. ಕೆರಗೋಡಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದ ವೇಳೆ ಕೇಸರಿ ಶಾಲು ಹಾಕಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಕುಮಾರಸ್ವಾಮಿ ಇದ್ರ ಬಗ್ಗೆ ಸ್ಪಷ್ಟನೆ ಸಹ ನೀಡಿದ್ದರು. ಇದೀಗ ಜಿಟಿ ದೇವೇಗೌಡ ಸಹ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ತತ್ವ ಸಿದ್ದಾಂತ ಬೇರೆ ಬೇರೆ ಅನ್ನೋದನ್ನು ಒತ್ತಿ ಹೇಳಿದ್ದಾರೆ.