ಮೈಸೂರು: ಕನಿಷ್ಠ 24 ಸ್ಥಾನಗಳನ್ನು ಎನ್ಡಿಎ ಗೆಲ್ಲಲಿದೆ, ದೇಶ ಉಳಿಸಲು ಮೋದಿ ಜೊತೆಗೆ: ಎಚ್ಡಿ ದೇವೇಗೌಡ
1083 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಮೈಸೂರಿನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಎನ್ಡಿಎ ಅಭ್ಯರ್ಥಿಗಳ ಪರವಾಗಿ ಬೃಹತ್ ಸಮಾವೇಶದಲ್ಲಿ ಭಾಗಿಯಾದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು, ಎನ್ಡಿಎಗೆ ಕರ್ನಾಟಕದಲ್ಲಿ ಕನಿಷ್ಠ 24 ಸ್ಥಾನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯ ಕುರಿತು ಮಾತನಾಡಿದ ಅವರು, ''ನನಗೆ ಬುದ್ಧಿ ಇಲ್ಲದೆಯೇ ಕುಮಾರಸ್ವಾಮಿಗೆ ಮೋದಿ ಅವರ ಜೊತೆಗೆ ಹೋಗು ಎಂದು ಹೇಳಿಲ್ಲ. ದೇಶವನ್ನು ಉಳಿಸಬೇಕಿದೆ. ರಾಜ್ಯವು ಕಾಂಗ್ರೆಸ್ ಲಂಚಕೋರರಿಂದ ಉಳಿಯಬೇಕಿದೆ. ಕಾಂಗ್ರೆಸ್ ಕೈಯಲ್ಲಿ ರಾಜ್ಯ ಹಾಳಾಗುವುದನ್ನು ತಪ್ಪಿಸಲು ಮೋದಿ ಅವರೊಂದಿಗೆ ಕೈಜೋಡಿಸಿದ್ದೇವೆ'' ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಚ್ಡಿ ದೇವೇಗೌಡ ಅವರು, ರಾಜ್ಯವನ್ನು ಆಳುತ್ತಿರುವ ಪುಣ್ಯಾತ್ಮರಿಗೆ ನಮೋ ನಮಃ ಎಂದು ಕೈಮುಗಿದರು. ಇದೇ ವೇಳೆ ಎನ್ಡಿಎ ಲೋಕಸಭಾ ಅಭ್ಯರ್ಥಿಗಳನ್ನು ಹೊಗಳಿದರು.
ಕರ್ನಾಟಕದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯ ಕುರಿತು ಮಾತನಾಡಿದ ಅವರು, ''ನನಗೆ ಬುದ್ಧಿ ಇಲ್ಲದೆಯೇ ಕುಮಾರಸ್ವಾಮಿಗೆ ಮೋದಿ ಅವರ ಜೊತೆಗೆ ಹೋಗು ಎಂದು ಹೇಳಿಲ್ಲ. ದೇಶವನ್ನು ಉಳಿಸಬೇಕಿದೆ. ರಾಜ್ಯವು ಕಾಂಗ್ರೆಸ್ ಲಂಚಕೋರರಿಂದ ಉಳಿಯಬೇಕಿದೆ. ಕಾಂಗ್ರೆಸ್ ಕೈಯಲ್ಲಿ ರಾಜ್ಯ ಹಾಳಾಗುವುದನ್ನು ತಪ್ಪಿಸಲು ಮೋದಿ ಅವರೊಂದಿಗೆ ಕೈಜೋಡಿಸಿದ್ದೇವೆ'' ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಚ್ಡಿ ದೇವೇಗೌಡ ಅವರು, ರಾಜ್ಯವನ್ನು ಆಳುತ್ತಿರುವ ಪುಣ್ಯಾತ್ಮರಿಗೆ ನಮೋ ನಮಃ ಎಂದು ಕೈಮುಗಿದರು. ಇದೇ ವೇಳೆ ಎನ್ಡಿಎ ಲೋಕಸಭಾ ಅಭ್ಯರ್ಥಿಗಳನ್ನು ಹೊಗಳಿದರು.