ಪತ್ರಕರ್ತನನ್ನೇ ಗೆಲ್ಲಿಸಿದ್ದೇವೆ, ರಾಜರನ್ನ ಗೆಲ್ಲಿಸಲ್ವಾ..?; ಪ್ರತಾಪ್ ಸಿಂಹಗೆ ಟಾಂಗ್ ಕೊಟ್ರಾ ಜಿಟಿ ದೇವೇಗೌಡ?
1168 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಮೈಸೂರು: ಯದುವೀರ್ ಒಡೆಯರ್ ನಮ್ಮ ಎಂಪಿ ಆಗುತ್ತಾರೆ ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆ, ಯದುವೀರ್ಗೆ ವೋಟ್ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಯದುವೀರ್ ಒಡೆಯರ್ ಪರ ಮಾತನಾಡಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಪ್ರತಾಪ ಸಿಂಹ ಒಬ್ಬ ಪತ್ರಕರ್ತ, ಅವನನ್ನೇ ಗೆಲ್ಲಿಸಿದ್ದೇವೆ, ನಾವು ಯಾರು ಹಣಕಾಸು ಪಡೆಯದೆ ಪ್ರತಾಪ್ ಸಿಂಹ ಗೆಲ್ಲಿಸಿದ್ದೇವೆ, ಯದುವೀರ್ ಅರಮನೆಯಲ್ಲಿ ಇದ್ದರೂ ಸಾಮಾಜಿಕ ಕಳಕಳಿ ಇದೆ ಅವರಿಗೆ ಮೀಸಲಾತಿಯನ್ನು ಜಾರಿಗೆ ತಂದಿದ್ದೆ ಒಡೆಯರ್ ಎಂದು ಹೇಳಿದರು.
ಶ್ರೀಕಂಠ ದತ್ತ ಚಾಮರಾಜ ಒಡೆಯರ್ ಅವರನ್ನು ಬೀದಿ ಬೀದಿಯಲ್ಲಿ ರಂಗೋಲಿ ಹಾಕಿ ಸ್ವಾಗತ ಮಾಡಿದ್ದರು. ನಿನ್ನೆ ಎಚ್ಡಿ ಕುಮಾರಸ್ವಾಮಿ ಮತ್ತು ನಾನು ಬರುವಾಗ ಯದುವೀರ್ ಗೆಲ್ಲಿಸಲೇ ಬೇಕೆಂದು ದೇವೇಗೌಡರು ಕರೆ ಮಾಡಿ ಹೇಳಿದ್ರು. ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಸೇರಿದರೆ ಆಗ್ತಿರಲಿಲ್ಲ ಈವಾಗ ಜನರೇ ಹೇಳ್ತಾರೆ ಮೊದಲು ಜೊತೆ ಸೇರಿ ಅಂತ. ಚಾಮುಂಡೇಶ್ವರಿ ಕ್ಷೇತ್ರ ಮಡಿಲಿಗೆ ಬಂದಿದ್ದಾರೆ ಯದುವೀರ್ ಒಡೆಯರ್. ರಾಜರ ಋಣ ತೀರಿಸಲು ಒಂದು ಅವಕಾಶ ಕೊಟ್ಟಿದ್ದಾರೆ, ಎಂಪಿ ಯಾರು ಎಂದರೆ ಮಹಾರಾಜರು ಎಂದು ಹೇಳಿಕೊಳ್ಳಬೇಕು ಎಂದು ಹೇಳಿದರು.
ನಾಯಕರು ಮಾಡದಿರುವ ಕೆಲಸವನ್ನು ರಾಜರು ಮಾಡುತ್ತಾರೆ. ಎಲ್ಲರೂ ನನಗೆ ಕೇಳುತ್ತಾರೆ ರಾಜರು ಹೊರಗಡೆ ಬರ್ತಾರಾ ಎಂದು, ನಾನು ಹೇಳುತ್ತೇನೆ ರಾಜರ ಅಭಿವೃದ್ದಿ ಕೆಲಸ ನೋಡಿ. ಇನ್ನೊಬ್ಬರು ಮತ ಲೆಕ್ಕವನ್ನೇ ಹಾಕಬಾರದು ರಾಜರ ಎದುರು ಪ್ರತಾಪ್ ಸಿಂಹ ಯಾರ ಮನೆಗೆ ಬಂದಿದ್ದರು ನಾವು ಗೆಲ್ಲಿಸಲ್ಲಿಲ್ವ,ರಾಜರು ಪುಟ್ ಬಾತ್ ನಲ್ಲಿ ಟೀ ಕುಡಿದಿದ್ದರೇ ಎಂದು ಪ್ರತಾಪ್ ಸಿಂಹನಿಗೆ ಟಕ್ಕರ್ ಕೊಟ್ಟರು.
ಯದುವೀರ್ ಒಡೆಯರ್ ಅರಮನೆ ಒಳಗಡೆ ಇದ್ದರೂ ಸಾಮಾಜಿಕ ಕಳಕಳಿ ಇರುವ ಅಭ್ಯರ್ಥಿ. ನಾವು ಹಾಗೂ ದೇವೇಗೌಡರು, ಕುಮಾರಸ್ವಾಮಿ ಮಾತುಕತೆ ನಡೆಸಿ ಯದುವೀರ್ ಒಡೆಯರ್ ಅವರನ್ನ ಗೆಲ್ಲಿಸುವಂತೆ ಮಾತುಕತೆ ಆಗಿದ್ದು ಸೀಟ್ ಹಂಚಿಕೆಯು ಸುಸೂತ್ರವಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಯದುವೀರ್ ಒಡೆಯರ್ ಪರ ಮಾತನಾಡಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಪ್ರತಾಪ ಸಿಂಹ ಒಬ್ಬ ಪತ್ರಕರ್ತ, ಅವನನ್ನೇ ಗೆಲ್ಲಿಸಿದ್ದೇವೆ, ನಾವು ಯಾರು ಹಣಕಾಸು ಪಡೆಯದೆ ಪ್ರತಾಪ್ ಸಿಂಹ ಗೆಲ್ಲಿಸಿದ್ದೇವೆ, ಯದುವೀರ್ ಅರಮನೆಯಲ್ಲಿ ಇದ್ದರೂ ಸಾಮಾಜಿಕ ಕಳಕಳಿ ಇದೆ ಅವರಿಗೆ ಮೀಸಲಾತಿಯನ್ನು ಜಾರಿಗೆ ತಂದಿದ್ದೆ ಒಡೆಯರ್ ಎಂದು ಹೇಳಿದರು.
ಶ್ರೀಕಂಠ ದತ್ತ ಚಾಮರಾಜ ಒಡೆಯರ್ ಅವರನ್ನು ಬೀದಿ ಬೀದಿಯಲ್ಲಿ ರಂಗೋಲಿ ಹಾಕಿ ಸ್ವಾಗತ ಮಾಡಿದ್ದರು. ನಿನ್ನೆ ಎಚ್ಡಿ ಕುಮಾರಸ್ವಾಮಿ ಮತ್ತು ನಾನು ಬರುವಾಗ ಯದುವೀರ್ ಗೆಲ್ಲಿಸಲೇ ಬೇಕೆಂದು ದೇವೇಗೌಡರು ಕರೆ ಮಾಡಿ ಹೇಳಿದ್ರು. ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಸೇರಿದರೆ ಆಗ್ತಿರಲಿಲ್ಲ ಈವಾಗ ಜನರೇ ಹೇಳ್ತಾರೆ ಮೊದಲು ಜೊತೆ ಸೇರಿ ಅಂತ. ಚಾಮುಂಡೇಶ್ವರಿ ಕ್ಷೇತ್ರ ಮಡಿಲಿಗೆ ಬಂದಿದ್ದಾರೆ ಯದುವೀರ್ ಒಡೆಯರ್. ರಾಜರ ಋಣ ತೀರಿಸಲು ಒಂದು ಅವಕಾಶ ಕೊಟ್ಟಿದ್ದಾರೆ, ಎಂಪಿ ಯಾರು ಎಂದರೆ ಮಹಾರಾಜರು ಎಂದು ಹೇಳಿಕೊಳ್ಳಬೇಕು ಎಂದು ಹೇಳಿದರು.
ನಾಯಕರು ಮಾಡದಿರುವ ಕೆಲಸವನ್ನು ರಾಜರು ಮಾಡುತ್ತಾರೆ. ಎಲ್ಲರೂ ನನಗೆ ಕೇಳುತ್ತಾರೆ ರಾಜರು ಹೊರಗಡೆ ಬರ್ತಾರಾ ಎಂದು, ನಾನು ಹೇಳುತ್ತೇನೆ ರಾಜರ ಅಭಿವೃದ್ದಿ ಕೆಲಸ ನೋಡಿ. ಇನ್ನೊಬ್ಬರು ಮತ ಲೆಕ್ಕವನ್ನೇ ಹಾಕಬಾರದು ರಾಜರ ಎದುರು ಪ್ರತಾಪ್ ಸಿಂಹ ಯಾರ ಮನೆಗೆ ಬಂದಿದ್ದರು ನಾವು ಗೆಲ್ಲಿಸಲ್ಲಿಲ್ವ,ರಾಜರು ಪುಟ್ ಬಾತ್ ನಲ್ಲಿ ಟೀ ಕುಡಿದಿದ್ದರೇ ಎಂದು ಪ್ರತಾಪ್ ಸಿಂಹನಿಗೆ ಟಕ್ಕರ್ ಕೊಟ್ಟರು.
ಯದುವೀರ್ ಒಡೆಯರ್ ಅರಮನೆ ಒಳಗಡೆ ಇದ್ದರೂ ಸಾಮಾಜಿಕ ಕಳಕಳಿ ಇರುವ ಅಭ್ಯರ್ಥಿ. ನಾವು ಹಾಗೂ ದೇವೇಗೌಡರು, ಕುಮಾರಸ್ವಾಮಿ ಮಾತುಕತೆ ನಡೆಸಿ ಯದುವೀರ್ ಒಡೆಯರ್ ಅವರನ್ನ ಗೆಲ್ಲಿಸುವಂತೆ ಮಾತುಕತೆ ಆಗಿದ್ದು ಸೀಟ್ ಹಂಚಿಕೆಯು ಸುಸೂತ್ರವಾಗಿದೆ ಎಂದು ಹೇಳಿದರು.