ಮಗಳನ್ನ ಕೊಟ್ಟು ಮದುವೆ ಮಾಡ್ಲಿಲ್ಲ ಎಂಬ ದ್ವೇಷಕ್ಕೆ 850 ಅಡಿಕೆ ಗಿಡ ನಾಶ ಮಾಡಿದ ಕಿಡಿಗೇಡಿ..!
1461 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಮೈಸೂರು : ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲ ಎಂಬ ದ್ವೇಷಕ್ಕೆ ಭಾರೀ ಪ್ರಮಾಣದ ಅಡಿಕೆ ಬೆಳೆಯನ್ನು ನಾಶ ಮಾಡಿದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತನ್ನ ಮಗಳನ್ನು ಆತನಿಗೆ ಮದುವೆ ಮಾಡಿ ಕೊಡದ್ದಕ್ಕೆ ಅಶೋಕ್ ಎಂಬಾತ ಸುಮಾರು 850 ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾನೆ ಎಂದು ಹುಡುಗಿಯ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಶುಂಠಿ ಬೆಳೆಯನ್ನ ಕತ್ತರಿಸಿ ಹಾಕಿದ್ದ ಆರೋಪಿ ಈಗ ಅಡಿಕೆ ಬೆಳೆಯನ್ನು ನಾಶಪಡಿಸಿದ್ದಾನೆ ಎಂದು ಹೇಳಲಾಗಿದೆ. ವೆಂಕಟೇಶ್ ಎಂಬುವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಶುಂಠಿ ಹಾಗೂ ಅಡಿಕೆ ಬೆಳೆಯನ್ನು ಹಾಕಲಾಗಿತ್ತು. ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಬೇಕಿತ್ತು. ಇದರ ನಡುವೆ ಬುಧವಾತ ಮಧ್ಯರಾತ್ರಿ ಕಿಡಿಗೇಡಿಗಳು ಅಡಿಕೆ ಬೆಳೆಯನ್ನು ಕತ್ತರಿಸಿದ್ದಾರೆ. ಎರಡು ಎಕರೆಯ ಅಡಿಕೆ ಬೆಳೆ ನೆಲಕಚ್ಚಿದೆ.
ವೆಂಕಟೇಶ್ ಅವರ ಪುತ್ರಿ ಸಿಂಚನಾಳನ್ನು ಅದೇ ಗ್ರಾಮದ ಅಶೋಕ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಲು ಮಾತುಕತೆಯಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಾರ್ತಿಕ ಮಾಸದಲ್ಲಿ ಸಿಂಚನಾ ಮತ್ತು ಅಶೋಕ್ ಮದುವೆ ಆಗಬೇಕಿತ್ತು. ಆದರೆ, ಅಶೋಕ್ ವರ್ತನೆಯಲ್ಲಿ ಬದಲಾವಣೆ ಗಮನಿಸಿದ್ದ ಸಿಂಚನಾ, ಅಪ್ಪನ ಬಳಿ ಮದುವೆ ಬೇಡ ಎಂದು ಹೇಳಿದ್ದಳು. ಅದಲ್ಲದೇ ಗ್ರಾಮದ ಇತರೆಡೆ ಹಾಗೂ ಅಶೋಕ್ ಆಪ್ತವಲಯದಲ್ಲಿ ಆತನ ಕುರಿತು ವೆಂಕಟೇಶ್ ಅವರು ವಿಚಾರಿಸಿ ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ಆತನ ವರ್ತನೆ ಸರಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಹೀಗಾಗಿಯೇ ಮದುವೆಯನ್ನ ಮೊಟಕುಗೊಳಿಸಲಾಗಿತ್ತು. ಇದನ್ನೇ ದ್ವೇಷದಿಂದ ಕಂಡ ಅಶೋಕ್ ಬೆಳೆಯನ್ನ ಸರ್ವನಾಶ ಮಾಡಿದ್ದಾನೆ ಎಂದು ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ ಬೆಳವಣಿಗೆಯಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ವೆಂಕಟೇಶ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ದಿನಗಳ ಹಿಂದೆ ಶುಂಠಿ ಬೆಳೆಯನ್ನ ಕತ್ತರಿಸಿ ಹಾಕಿದ್ದ ಆರೋಪಿ ಈಗ ಅಡಿಕೆ ಬೆಳೆಯನ್ನು ನಾಶಪಡಿಸಿದ್ದಾನೆ ಎಂದು ಹೇಳಲಾಗಿದೆ. ವೆಂಕಟೇಶ್ ಎಂಬುವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಶುಂಠಿ ಹಾಗೂ ಅಡಿಕೆ ಬೆಳೆಯನ್ನು ಹಾಕಲಾಗಿತ್ತು. ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಬೇಕಿತ್ತು. ಇದರ ನಡುವೆ ಬುಧವಾತ ಮಧ್ಯರಾತ್ರಿ ಕಿಡಿಗೇಡಿಗಳು ಅಡಿಕೆ ಬೆಳೆಯನ್ನು ಕತ್ತರಿಸಿದ್ದಾರೆ. ಎರಡು ಎಕರೆಯ ಅಡಿಕೆ ಬೆಳೆ ನೆಲಕಚ್ಚಿದೆ.
ವೆಂಕಟೇಶ್ ಅವರ ಪುತ್ರಿ ಸಿಂಚನಾಳನ್ನು ಅದೇ ಗ್ರಾಮದ ಅಶೋಕ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಲು ಮಾತುಕತೆಯಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಾರ್ತಿಕ ಮಾಸದಲ್ಲಿ ಸಿಂಚನಾ ಮತ್ತು ಅಶೋಕ್ ಮದುವೆ ಆಗಬೇಕಿತ್ತು. ಆದರೆ, ಅಶೋಕ್ ವರ್ತನೆಯಲ್ಲಿ ಬದಲಾವಣೆ ಗಮನಿಸಿದ್ದ ಸಿಂಚನಾ, ಅಪ್ಪನ ಬಳಿ ಮದುವೆ ಬೇಡ ಎಂದು ಹೇಳಿದ್ದಳು. ಅದಲ್ಲದೇ ಗ್ರಾಮದ ಇತರೆಡೆ ಹಾಗೂ ಅಶೋಕ್ ಆಪ್ತವಲಯದಲ್ಲಿ ಆತನ ಕುರಿತು ವೆಂಕಟೇಶ್ ಅವರು ವಿಚಾರಿಸಿ ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ಆತನ ವರ್ತನೆ ಸರಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಹೀಗಾಗಿಯೇ ಮದುವೆಯನ್ನ ಮೊಟಕುಗೊಳಿಸಲಾಗಿತ್ತು. ಇದನ್ನೇ ದ್ವೇಷದಿಂದ ಕಂಡ ಅಶೋಕ್ ಬೆಳೆಯನ್ನ ಸರ್ವನಾಶ ಮಾಡಿದ್ದಾನೆ ಎಂದು ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ ಬೆಳವಣಿಗೆಯಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ವೆಂಕಟೇಶ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.