ಯದುವೀರ್ ಅರಮನೆಯ ಎಸಿ ಕೊಠಡಿ ಬಿಟ್ಟು ಪ್ರಜೆಗಳ ನಡುವೆ ಬರುವುದಾದರೆ ಸ್ವಾಗತ: ಪ್ರತಾಪ್ ಸಿಂಹ
1584 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಮೈಸೂರಿನ ರಾಜ ವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ, ಸ್ವಾಗತಿಸುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಅರಮನೆಯ ಹವಾನಿಯಂತ್ರಿತ ಕೊಠಡಿಯಿಂದ ಸಾಮಾನ್ಯ ಜನರ ನಡುವೆ ಬರಲು ಅವರೇ ಸಿದ್ಧ ಎನ್ನುವುದಾದರೆ ಬರಲಿ, ಅದು ಖುಷಿಯ ವಿಚಾರವೇ ಎಂದು ಅಭಿಪ್ರಾಯ ಪಟ್ಟರು. ``ಯದುವೀರ್ ಒಡೆಯರ್ ಅವರಿಗೆ ಪಕ್ಷದಿಂದ ಟಿಕೆಟ್ ಕೊಟ್ರೆ ಸ್ವಾಗತ. ಒಂದು ವೇಳೆ ನನ್ನ ಬದಲಿಗೆ ಪಕ್ಷ ಅವರಿಗೆ ಟಿಕೆಟ್ ಕೊಟ್ಟರೆ ಸಾಮಾನ್ಯ ಕಾರ್ಯಕರ್ತನ ರೀತಿ ಕರಪತ್ರ ಹಂಚಿ ಗೆಲ್ಲಿಸಿಕೊಂಡು ಬರ್ತೇನೆ'' ಎಂದರು. ಮೈಸೂರಿನಲ್ಲಿ ಮಂಗಳವಾರ ಬೆಳಗ್ಗೆ ಸುದ್ದಿಗಾರರ ಪ್ರಶ್ವೆಗಳಿಗೆ ಉತ್ತರಿಸಿದ ಪ್ರತಾಪ್ ಸಿಂಹ, ''ನನಗೆ ಟಿಕೆಟ್ ಕೈತಪ್ಪಲು ಕಾರಣ ಕೊಡಿ. ನಾನು ಯಾವುದರಲ್ಲಿ ಕಡಿಮೆ ಇದ್ದೇನೆ ಹೇಳಿ ಎಂದು ಪ್ರಶ್ನಿಸಿದರು. ಬಿಜೆಪಿ ಹೈಕಮಾಂಡ್ ನನಗೇ ಟಿಕೆಟ್ ನೀಡುತ್ತದೆ ಎಂಬ ನಂಬಿಕೆ ಇದೆ. ಒಂದು ವೇಳೆ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವಂತೆ ನನ್ನ ಬದಲು ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡುವುದು ನಿಜವಾದಲ್ಲಿ ಅವರ ಪರವಾಗಿ ಕೆಲಸ ಮಾಡುವೆ'' ಎಂದು ಹೇಳಿದರು.ಯದುವೀರ್ ಒಡೆಯರ್ ಅವರ ಪರವಾಗಿ ಮಾಡುತ್ತಲೇ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಪ್ರತಾಪ್ ಸಿಂಹ. ``ಯದುವೀರ್ ಅವರು ರಾಜಕಾರಣಕ್ಕೆ ಬಂದರೆ ಅನುಕೂಲವಾಗಲಿದೆ. ಮಹಾರಾಜರೇ ಜನಸಾಮಾನ್ಯರ ಬಳಿ ತೆರಳಲಿದ್ದಾರೆ. ಆದರೆ ಮಹಾರಾಜರು ಸಾಮಾನ್ಯ ಜನರಿಗೆ ಕೈ ಮುಗಿಯಬೇಕು. ಪಕ್ಷದ ನಾಯಕರು ವೇದಿಕೆಯಲ್ಲಿದ್ದಾಗ ಸಾಮಾನ್ಯ ಕಾರ್ಯಕರ್ತರ ಸಾಲಿನಲ್ಲಿ ಕುಳಿತುಕೊಳ್ಳಬೇಕು. '' ಎಂದು ಹೇಳಿದರು.ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ತಕ್ಷಣವೇ ನಿನ್ನನ್ನು ಭೇಟಿ ಮಾಡಬೇಕೆಂದು ಸಂದೇಶ ಕಳಿಸಿದ್ದರು . ಇದೀಗ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ನಡೆಯುತ್ತಿದೆ. ಬೆಂಗಳೂರಿಗೆ ತೆರಳಿ ಅವರನ್ನು ಭೇಟಿ ಮಾಡುವೆ ಎಂದು ಮಾಹಿತಿ ನೀಡಿದರು.