ನಂಜನಗೂಡು: ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ, 25 ವಿದೇಶಿ ಕರೆನ್ಸಿಗಳು
1085 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಮೈಸೂರು: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ನಂಜನಗೂಡು ಮತ್ತೆ ಜೋರಾಗಿ ಸದ್ದು ಮಾಡುತ್ತಿದೆ. ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಮೇ ತಿಂಗಳ ಹುಂಡಿ ಎಣಿಕೆಯಲ್ಲಿ 1 ಕೋಟಿ 55 ಲಕ್ಷದ 103 ರೂ. ನಗದು ಸಂಗ್ರಹವಾಗಿದೆ. ಕಾಣಿಕೆ ರೂಪದಲ್ಲಿ 132 ಗ್ರಾಂ ಚಿನ್ನ, 3 ಕೆಜಿ 75 ಗ್ರಾಂ ಬೆಳ್ಳಿ, 25 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ. ಇನ್ನ ಹುಂಡಿಯಲ್ಲಿ 2 ಸಾವಿರ ಮುಖ ಬೆಲೆಯ 74 ನೋಟುಗಳು ಪತ್ತೆಯಾಗಿವೆ. ಈಗಾಗಲೇ ಆರ್ಬಿಐ 2 ಸಾವಿರ ನೋಟುಗಳನ್ನು ಹಿಂಪಡೆಯುತ್ತಿದ್ದು, ಭಕ್ತರು ನಂಜುಂಡನ ಹುಂಡಿಗೆ ನೋಟುಗಳನ್ನ ಹಾಕಿದ್ದಾರೆ.