ವಿಂಟೇಜ್ ಕಾರು ರ್ಯಾಲಿ ಮೂಲಕ ಮತದಾನ ಜಾಗೃತಿ..!<b>ಮೈಸೂರು: </b>ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಮೈಸೂರು ಜಿಲ್ಲಾಡಳಿತ. ಮತದಾರರಲ್ಲಿ ಮತದಾನದ ಮಹತ್ವ ಹಾಗು ಚುನಾವಣೆಯ ಬಗ್ಗೆ ಅರಿವು ಮೂಡಿಸಲು ಸ್ವೀಪ್ ಸಮಿತಿ ವತಿಯಿಂದ ಇಂದು ವಿಂಟೇಜ್ ಕಾರುಗಳ ರ್ಯಾಲಿ ಆಯೋಜನೆ. ಮೈಸೂರಿನ ಟೌನ್ ಹಾಲ್ ಆವರಣದಿಂದ ಆರಂಭಗೊಂಡ ವಿಂಟೇಜ್ ಕಾರುಗಳ ರ್ಯಾಲಿ.<i></i>ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಹಸಿರು ನಿಶಾನೆ. ಜಿಲ್ಲಾ ಪಂಚಾಯ್ತಿ ಸಿಇಒ., ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತೆ ಮಧು, ಜಿಲ್ಲಾ ಎಸ್ ಪಿ., ಸೀಮಾ ಲಾಟ್ಕರ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ವಿಂಟೇಜ್ ಕಾರುಗಳ ರ್ಯಾಲಿಯಲ್ಲಿ ಭಾಗಿ.<i></i>ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ದೇವರಾಜ ಅರಸು ರಸ್ತೆ ಸೇರಿದಂತೆ ವಿವಿಧ ಮಾರ್ಗದಲ್ಲಿ ಸಾಗಿ ಟೌನ್ ಹಾಲ್ ಆವರಣದಲ್ಲಿ ಅಂತ್ಯಗೊಂಡ ವಿಂಟೇಜ್ ಕಾರುಗಳ ರ್ಯಾಲಿ. ವಿಂಟೇಜ್ ಕಾರುಗಳ ಜೊತೆಗೆ ಟಾಂಗಾ ಗಾಡಿಗಳು ಕೂಡ ರ್ಯಾಲಿಯಲ್ಲಿ ಸಾಗುವ ಮೂಲಕ ವಿಶೇಷ ಮೆರುಗು.<i></i>