ಮೈಸೂರು ದಕ್ಷಿಣ ಭಾರತದ ಪ್ರವಾಸೋದ್ಯಮದ ಕೇಂದ್ರವಾಗಬೇಕು, ಅದೇ ನನ್ನ ಕನಸು: ಯದುವೀರ್ ಒಡೆಯರ್
2039 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಮೈಸೂರು: ''ರಾಜಕೀಯಕ್ಕೆ ತಾವು ಹಠಾತ್ತಾಗಿ ಬಂದಿದ್ದಲ್ಲ, ಕಳೆದೊಂದು ವರ್ಷದಿಂದಲೂ ರಾಜಕೀಯಕ್ಕೆ ಬರಲು ಸಿದ್ಧತೆ ಮಾಡಿಕೊಂಡಿದ್ದೆ ಎಂದು ಹೇಳುವ ಮೂಲಕ, ಲೋಕಸಭಾ ಚುನಾವಣೆ 2024ರಲ್ಲಿ ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವುದು ಆಕಸ್ಮಿಕವಲ್ಲ'' ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಮೈಸೂರು ಮಹಾರಾಜರಾದ ಅವರಿಗೆ ಇಂದಿನ ರಾಜಕೀಯ ಒಗ್ಗುತ್ತದೆಯೇ, ಅವರು ಹೇಗೆ ನಿಭಾಯಿಸಬಲ್ಲರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. ರಾಜಕಾರಣವೇ ದೊಡ್ಡ ಚಾಲೆಂಜ್. ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಮೈಸೂರಿನ ಮಹಾರಾಜ ಹಾಗೂ ಈ ಬಾರಿಯ ಲೋಕಸಭೆಯಲ್ಲಿ ಮೈಸೂರು - ಕೊಡಗಿನ ಲೋಕಸಭಾ ಅಭ್ಯರ್ಥಿ ಯದುವೀರ್ ಹೇಳಿದ್ದಾರೆ.
'ರಾಜಕೀಯಕ್ಕೆ ತಾವು ಬಂದಿರುವುದು ತೀರಾ ಆಕಸ್ಮಿಕವೇನಲ್ಲ, ರಾಜಕೀಯಕ್ಕೆ ಬರಲು ವರ್ಷದಿಂದಲೂ ತಯಾರಿ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ. ಜೊತೆಗೆ, ತಮ್ಮ ಮೇಲೆ ಯಾರದ್ದೂ ಒತ್ತಡವಿಲ್ಲ. ಸ್ವಯಂಪ್ರೇರಿತರಾಗಿಯೇ ಜನಸೇವೆಗೆ ಧುಮುಕಿರುವುದಾಗಿ ಅವರು ತಿಳಿಸಿದ್ದಾರೆ.
ರಾಜಕಾರಣದಲ್ಲಿ ಟೀಕೆ- ಟಿಪ್ಪಣಿಗಳು, ವಾದ- ಪ್ರತಿವಾದಗಳು ಸಾಮಾನ್ಯವಾಗಿದ್ದು, ರಾಜಮನೆತನದಲ್ಲಿ ಬೆಳೆದ ಯದುವೀರ್ ಅವರಿಗೆ ಅದನ್ನು ಅರಗಿಸಿಕೊಳ್ಳಲಾದೀತೇ ಎಂಬ ಅನುಮಾನಗಳಿಗೂ ಅವರು ಉತ್ತರಿಸಿದ್ದಾರೆ. ''ಸಾಂಬರಿನಲ್ಲಿ ಮೆಣಸಿನಕಾಯಿ ಸಿಕ್ಕಂತೆ ರಾಜಕೀಯದಲ್ಲೂ ಟೀಕೆಗಳು ಬರುತ್ತವೆ. ರಾಜಕೀಯದಲ್ಲಿ ಅಂತಹ ಸಂದರ್ಭಗಳು ಹೆಚ್ಚಿರಬಹುದು. ಅದನ್ನು ನಾವು ಜೀರ್ಣಿಸಿಕೊಳ್ಳಬೇಕು. ರಾಜಕೀಯಕ್ಕೆ ಬಂದಾಗ ಅದೆಲ್ಲವೂ ಸಹಜ. ಎಲ್ಲದಕ್ಕೂ ಸಿದ್ದವಾಗಿದ್ದೇನೆ'' ಎಂದು ಅವರು ತಿಳಿಸಿದ್ದಾರೆ.
'ರಾಜಕೀಯಕ್ಕೆ ತಾವು ಬಂದಿರುವುದು ತೀರಾ ಆಕಸ್ಮಿಕವೇನಲ್ಲ, ರಾಜಕೀಯಕ್ಕೆ ಬರಲು ವರ್ಷದಿಂದಲೂ ತಯಾರಿ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ. ಜೊತೆಗೆ, ತಮ್ಮ ಮೇಲೆ ಯಾರದ್ದೂ ಒತ್ತಡವಿಲ್ಲ. ಸ್ವಯಂಪ್ರೇರಿತರಾಗಿಯೇ ಜನಸೇವೆಗೆ ಧುಮುಕಿರುವುದಾಗಿ ಅವರು ತಿಳಿಸಿದ್ದಾರೆ.
ರಾಜಕಾರಣದಲ್ಲಿ ಟೀಕೆ- ಟಿಪ್ಪಣಿಗಳು, ವಾದ- ಪ್ರತಿವಾದಗಳು ಸಾಮಾನ್ಯವಾಗಿದ್ದು, ರಾಜಮನೆತನದಲ್ಲಿ ಬೆಳೆದ ಯದುವೀರ್ ಅವರಿಗೆ ಅದನ್ನು ಅರಗಿಸಿಕೊಳ್ಳಲಾದೀತೇ ಎಂಬ ಅನುಮಾನಗಳಿಗೂ ಅವರು ಉತ್ತರಿಸಿದ್ದಾರೆ. ''ಸಾಂಬರಿನಲ್ಲಿ ಮೆಣಸಿನಕಾಯಿ ಸಿಕ್ಕಂತೆ ರಾಜಕೀಯದಲ್ಲೂ ಟೀಕೆಗಳು ಬರುತ್ತವೆ. ರಾಜಕೀಯದಲ್ಲಿ ಅಂತಹ ಸಂದರ್ಭಗಳು ಹೆಚ್ಚಿರಬಹುದು. ಅದನ್ನು ನಾವು ಜೀರ್ಣಿಸಿಕೊಳ್ಳಬೇಕು. ರಾಜಕೀಯಕ್ಕೆ ಬಂದಾಗ ಅದೆಲ್ಲವೂ ಸಹಜ. ಎಲ್ಲದಕ್ಕೂ ಸಿದ್ದವಾಗಿದ್ದೇನೆ'' ಎಂದು ಅವರು ತಿಳಿಸಿದ್ದಾರೆ.