ದೇವದುರ್ಗ: ಶ್ರೀಬೂದಿಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹ, ದಾಂಪತ್ಯ ಬದುಕಿಗೆ 225 ಜೋಡಿ
1093 views
ರಾಯಚೂರು ವಿಡಿಯೋಗಳಿಗೆ ಚಂದಾದಾರರಾಗಿರಾಯಚೂರು: ಆಡಂಬರದ ಮದುವೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆದರೆ ರಾಯಚೂರು ಐತಿಹಾಸಿಕ ಹಿನ್ನೆಲೆಯುಳ್ಳ ಗಬ್ಬೂರಿನ ಶ್ರೀಬೂದಿಬಸವೇಶ್ವರ ಮಠದಲ್ಲಿ ನೂರಾರು ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಸಂಭ್ರಮ-ಸಡಗರದಿಂದ ನೇರವೇರಿತ್ತು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಗ್ರಾಮದ ಆರಾಧ್ಯದೈವ ಶ್ರೀಬೂದಿಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀಗುರು ಪಟ್ಟಾಧಿಕಾರ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿತ್ತು.
ಶ್ರೀಮಠದ ಪೀಠಾಧಿಪತಿ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ ಉಚಿತ ವಿವಾಹ ಮಹೋತ್ಸವದಲ್ಲಿ 225 ಜೋಡಿಗಳು ಮದುವೆಯಾಗುವ ಮೂಲಕ ಹೊಸ ಬಾಳಿಗೆ ಕಾಲಿಟ್ಟರು.
ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನ ಆಯೋಜನೆ ಮಾಡುತ್ತಾ ಬರಲಾಗುತ್ತಿದ್ದು, ಇದುವರೆಗೆ 2 ಸಾವಿರ ಅಧಿಕ ಜೋಡಿಗಳಿಗೆ ವಿವಾಹ ಮಾಡಿಸಲಾಗಿದೆ. ಭಾನುವಾರ 225 ಜೋಡಿಗಳಿಗೆ ವಿವಾಹ ಮಾಡಿಸಲಾಯಿತು. ಯಾವುದೇ ಜಾತಿ ಭೇದವಿಲ್ಲದೆ ಸಾಮೂಹಿಕ ವಿವಾಹವಾಗಲು ಮುಂದೆ ಬಂದ ನವವಧುವವರಿಗೆ ಮದುವೆ ಮಾಡಿಸಿ, ಜೊತೆಗೆ ಗೌರವ ಧನವನ್ನು ಕೊಡಿಸುವ ಕೆಲಸವನ್ನು ಶ್ರೀಮಠದಿಂದ ಮಾಡಿಕೊಂಡು ಬರಲಾಗುತ್ತಿದೆ.
225 ವಿವಾಹಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಶ್ರೀ ಮಠಕ್ಕೆ ಆಗಮಿಸಿದ್ದರು. ಅವರಿಗೆ ಎಲ್ಲಾರಿಗೂ ಸಹ ಭೋಜನದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು. ಶ್ರೀಮಠದ ಆವರಣದಲ್ಲಿನ ಕಲ್ಯಾಣ ಮಠದ ಬಳಿ ದಾಸೋಹದಲ್ಲಿ ಮಹಿಳೆಯರಿಗೆ, ಪುರುಷರಿಗೆ ಪತ್ಯೇಕ ಊಟದ ವ್ಯವಸ್ಥೆ ಮಾಡಿದ್ದು, ಎಲ್ಲಾರಿಗೂ ಕುಡಿಸಿ ಊಟ ಮಾಡಿಸಲಾಯಿತು. ಲಕ್ಷಾಂತರ ಆಗಮಿಸಿದ ಜನರು ಸಹ ಯಾವುದೇ ನೂಕುನುಗಾಟವಿಲ್ಲದೆ ಸರತಿ ಸಾಲಿನಲ್ಲಿ ಊಟವನ್ನು ಸವಿದರು.
ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ರಾಜ್ಯ ವಿವಿಧ ಜಿಲ್ಲೆಗಳು ಮತ್ತು ಜಿಲ್ಲೆಯ ಸುತ್ತಮುತ್ತಲಿನವರು ಸಾಮೂಹಿಕ ವಿವಾಹದಲ್ಲಿ ಜೋಡಿಗಳು ಮದುವೆಯಾದರು.
ಶ್ರೀಮಠದ ಪೀಠಾಧಿಪತಿ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ ಉಚಿತ ವಿವಾಹ ಮಹೋತ್ಸವದಲ್ಲಿ 225 ಜೋಡಿಗಳು ಮದುವೆಯಾಗುವ ಮೂಲಕ ಹೊಸ ಬಾಳಿಗೆ ಕಾಲಿಟ್ಟರು.
ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನ ಆಯೋಜನೆ ಮಾಡುತ್ತಾ ಬರಲಾಗುತ್ತಿದ್ದು, ಇದುವರೆಗೆ 2 ಸಾವಿರ ಅಧಿಕ ಜೋಡಿಗಳಿಗೆ ವಿವಾಹ ಮಾಡಿಸಲಾಗಿದೆ. ಭಾನುವಾರ 225 ಜೋಡಿಗಳಿಗೆ ವಿವಾಹ ಮಾಡಿಸಲಾಯಿತು. ಯಾವುದೇ ಜಾತಿ ಭೇದವಿಲ್ಲದೆ ಸಾಮೂಹಿಕ ವಿವಾಹವಾಗಲು ಮುಂದೆ ಬಂದ ನವವಧುವವರಿಗೆ ಮದುವೆ ಮಾಡಿಸಿ, ಜೊತೆಗೆ ಗೌರವ ಧನವನ್ನು ಕೊಡಿಸುವ ಕೆಲಸವನ್ನು ಶ್ರೀಮಠದಿಂದ ಮಾಡಿಕೊಂಡು ಬರಲಾಗುತ್ತಿದೆ.
225 ವಿವಾಹಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಶ್ರೀ ಮಠಕ್ಕೆ ಆಗಮಿಸಿದ್ದರು. ಅವರಿಗೆ ಎಲ್ಲಾರಿಗೂ ಸಹ ಭೋಜನದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು. ಶ್ರೀಮಠದ ಆವರಣದಲ್ಲಿನ ಕಲ್ಯಾಣ ಮಠದ ಬಳಿ ದಾಸೋಹದಲ್ಲಿ ಮಹಿಳೆಯರಿಗೆ, ಪುರುಷರಿಗೆ ಪತ್ಯೇಕ ಊಟದ ವ್ಯವಸ್ಥೆ ಮಾಡಿದ್ದು, ಎಲ್ಲಾರಿಗೂ ಕುಡಿಸಿ ಊಟ ಮಾಡಿಸಲಾಯಿತು. ಲಕ್ಷಾಂತರ ಆಗಮಿಸಿದ ಜನರು ಸಹ ಯಾವುದೇ ನೂಕುನುಗಾಟವಿಲ್ಲದೆ ಸರತಿ ಸಾಲಿನಲ್ಲಿ ಊಟವನ್ನು ಸವಿದರು.
ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ರಾಜ್ಯ ವಿವಿಧ ಜಿಲ್ಲೆಗಳು ಮತ್ತು ಜಿಲ್ಲೆಯ ಸುತ್ತಮುತ್ತಲಿನವರು ಸಾಮೂಹಿಕ ವಿವಾಹದಲ್ಲಿ ಜೋಡಿಗಳು ಮದುವೆಯಾದರು.