ರಾಯಚೂರು ಜಿಲ್ಲೆಯಲ್ಲಿ ಬರಗಾಲ, ಮೇವಿನ ಕೊರತೆಯಿಂದ ಜಾನುವಾರುಗಳ ಮಾರಾಟ
ರಾಯಚೂರು ವಿಡಿಯೋಗಳಿಗೆ ಚಂದಾದಾರರಾಗಿ
ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬಿತ್ತಿದ ಬೆಳೆಗಳು ಒಣಗಿ ಹೋಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ರೈತರು ಎತ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ನಗರದ ಎಪಿಎಂಸಿ ಅವರಣದಲ್ಲಿ ನಡೆಯುತ್ತಿರುವ ಜಾನುವಾರು ಸಂತೆಯಲ್ಲಿ ಕಂಡು ಬಂದ ದೃಶ್ಯವಿದು. ಪ್ರೀತಿಯಿಂದ ಸಲಹಿದ ಎತ್ತುಗಳನ್ನು ಒಲ್ಲದ ಮನಸ್ಸಿನಿಂದಲೇ ರೈತರು ಮಾರಾಟ ಮಾಡಲು ಮುಂದಾಗಿದ್ದಾರೆ. ಮುಂಗಾರು ಮಳೆಯಾಗುತ್ತದೆ. ಬಿತ್ತನೆ ಮಾಡಲಿಕ್ಕೆ ಎತ್ತುಗಳು ಬೇಕು ಎಂದು ಸಾಲ ಸೋಲ ಮಾಡಿ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಕೊಟ್ಟು ತಂದ ಎತ್ತುಗಳನ್ನು ಈಗ ಬರೀ 82 ಸಾವಿರ ರೂಪಾಯಿಗೆ ಕೇಳುತ್ತಿದ್ದಾರೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ಎರಡು ವಾರಗಳಿಂದ ಕರುವಿಗೆ ಜನ್ಮ ನೀಡಿದ್ದ ಹಸುವಿಗೆ ತಿನ್ನಲು ಮೇವು ಇಲ್ಲದೇ ಇರುವುದರಿಂದ ಮಹಿಳೆಯೊಬ್ಬರು ಹಸು-ಕರುವಿನೊಂದಿಗೆ ಮಾರುಕಟ್ಟೆಗೆ ಬಂದಿದ್ದರು. ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಜಾನುವಾರುಗಳಿಗೆ ಕುಡಿಯುವ ನೀರು, ತಿನ್ನಲು ಮೇವಿನ ಕೊರತೆವುಂಟಾಗಿದೆ. ರಾಯಚೂರು ಜಿಲ್ಲೆಯ ತಾಲೂಕುಗಳನ್ನು ಸರಕಾರ ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದೆ. ಆದರೆ, ಸರಕಾರದಿಂದ ರೈತರಿಗೆ ಅನುದಾನ ಸಿಕ್ಕಿಲ್ಲ.
ನಗರದ ಎಪಿಎಂಸಿ ಅವರಣದಲ್ಲಿ ನಡೆಯುತ್ತಿರುವ ಜಾನುವಾರು ಸಂತೆಯಲ್ಲಿ ಕಂಡು ಬಂದ ದೃಶ್ಯವಿದು. ಪ್ರೀತಿಯಿಂದ ಸಲಹಿದ ಎತ್ತುಗಳನ್ನು ಒಲ್ಲದ ಮನಸ್ಸಿನಿಂದಲೇ ರೈತರು ಮಾರಾಟ ಮಾಡಲು ಮುಂದಾಗಿದ್ದಾರೆ. ಮುಂಗಾರು ಮಳೆಯಾಗುತ್ತದೆ. ಬಿತ್ತನೆ ಮಾಡಲಿಕ್ಕೆ ಎತ್ತುಗಳು ಬೇಕು ಎಂದು ಸಾಲ ಸೋಲ ಮಾಡಿ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಕೊಟ್ಟು ತಂದ ಎತ್ತುಗಳನ್ನು ಈಗ ಬರೀ 82 ಸಾವಿರ ರೂಪಾಯಿಗೆ ಕೇಳುತ್ತಿದ್ದಾರೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ಎರಡು ವಾರಗಳಿಂದ ಕರುವಿಗೆ ಜನ್ಮ ನೀಡಿದ್ದ ಹಸುವಿಗೆ ತಿನ್ನಲು ಮೇವು ಇಲ್ಲದೇ ಇರುವುದರಿಂದ ಮಹಿಳೆಯೊಬ್ಬರು ಹಸು-ಕರುವಿನೊಂದಿಗೆ ಮಾರುಕಟ್ಟೆಗೆ ಬಂದಿದ್ದರು. ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಜಾನುವಾರುಗಳಿಗೆ ಕುಡಿಯುವ ನೀರು, ತಿನ್ನಲು ಮೇವಿನ ಕೊರತೆವುಂಟಾಗಿದೆ. ರಾಯಚೂರು ಜಿಲ್ಲೆಯ ತಾಲೂಕುಗಳನ್ನು ಸರಕಾರ ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದೆ. ಆದರೆ, ಸರಕಾರದಿಂದ ರೈತರಿಗೆ ಅನುದಾನ ಸಿಕ್ಕಿಲ್ಲ.