ರಾಯಚೂರು: ಖರೀದಿ ಕೇಂದ್ರಕ್ಕೆ ಜೋಳ ಮಾರಾಟ, ಬಾಕಿ ಹಣ ಪಾವತಿಗೆ ರೈತರ ಆಗ್ರಹ
ರಾಯಚೂರು ವಿಡಿಯೋಗಳಿಗೆ ಚಂದಾದಾರರಾಗಿ
ರಾಯಚೂರು: ಖರೀದಿ ಕೇಂದ್ರದಲ್ಲಿ ಹಿಂಗಾರು ಹಂಗಾಮಿನಲ್ಲಿ ಮಾರಾಟ ಮಾಡಿದ ಜೋಳಕ್ಕೆ ಹಣ ಪಾವತಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ರೈತರು ರಾಯಚೂರಿನಲ್ಲಿ ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ರೈತರು ಪ್ರತಿಭಟನೆ ನಡೆಸಿದರು. ಹಿಂಗಾರು ಹಂಗಾಮಿನಲ್ಲಿ ಜೋಳ ಬೆಳೆದ ರೈತರು, ತಮ್ಮ ಬೆಳೆಯನ್ನು ಮಾನವಿ ತಾಲೂಕಿನಲ್ಲಿ ತೆರೆಯಲಾಗಿದ್ದ ಜೋಳ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು. ಒಟ್ಟು 1683 ರೈತರು ತಮ್ಮ ಜೋಳದ ಬೆಳೆಯನ್ನು ಮಾರಾಟ ಮಾಡಿದ್ದು, 23 ಕೋಟಿ ರೂಪಾಯಿ ಪಾವತಿಯಾಗಬೇಕಿತ್ತು. ಮಾರಾಟ ಮಾಡಿದ ರೈತರಲ್ಲಿ ಇನ್ನೂ 1065 ರೈತರಿಗೆ 13 ಕೋಟಿ ರೂಪಾಯಿ ಹಣವನ್ನು ಸಂದಾಯ ಮಾಡಿಲ್ಲ ಎಂದು ರೈತರು ಆರೋಪಿಸಿದರು.
ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಮಳೆ ಕೊರತೆ ಸಹ ಎದುರಾಗಿದೆ. ಇಂತಹ ಸಮಯದಲ್ಲಿ ತಾನು ಬೆಳೆದ ಫಸಲಿನಿಂದ ಆದಾಯದಲ್ಲಿ ಉಳುಮೆ ಮಾಡಿಕೊಳ್ಳುತ್ತೇನೆ. ಆದರೆ ಹಣ ಪಾವತಿ ಯಾಗಿದ್ದರಿಂದ ಹೊರಗಡೆ ಶೇ 3ರ ಬಡ್ಡಿಯಂತೆ ಹಣವನ್ನು ತಂದು ಕೃಷಿ ಹಾಗೂ ತಮ್ಮ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೂಡಲೇ ಇನ್ನುಳಿದ 1065 ರೈತರಿಗೆ ಕೂಡಲೇ ಹಣವನ್ನು ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ರೈತರು ಪ್ರತಿಭಟನೆ ನಡೆಸಿದರು. ಹಿಂಗಾರು ಹಂಗಾಮಿನಲ್ಲಿ ಜೋಳ ಬೆಳೆದ ರೈತರು, ತಮ್ಮ ಬೆಳೆಯನ್ನು ಮಾನವಿ ತಾಲೂಕಿನಲ್ಲಿ ತೆರೆಯಲಾಗಿದ್ದ ಜೋಳ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು. ಒಟ್ಟು 1683 ರೈತರು ತಮ್ಮ ಜೋಳದ ಬೆಳೆಯನ್ನು ಮಾರಾಟ ಮಾಡಿದ್ದು, 23 ಕೋಟಿ ರೂಪಾಯಿ ಪಾವತಿಯಾಗಬೇಕಿತ್ತು. ಮಾರಾಟ ಮಾಡಿದ ರೈತರಲ್ಲಿ ಇನ್ನೂ 1065 ರೈತರಿಗೆ 13 ಕೋಟಿ ರೂಪಾಯಿ ಹಣವನ್ನು ಸಂದಾಯ ಮಾಡಿಲ್ಲ ಎಂದು ರೈತರು ಆರೋಪಿಸಿದರು.
ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಮಳೆ ಕೊರತೆ ಸಹ ಎದುರಾಗಿದೆ. ಇಂತಹ ಸಮಯದಲ್ಲಿ ತಾನು ಬೆಳೆದ ಫಸಲಿನಿಂದ ಆದಾಯದಲ್ಲಿ ಉಳುಮೆ ಮಾಡಿಕೊಳ್ಳುತ್ತೇನೆ. ಆದರೆ ಹಣ ಪಾವತಿ ಯಾಗಿದ್ದರಿಂದ ಹೊರಗಡೆ ಶೇ 3ರ ಬಡ್ಡಿಯಂತೆ ಹಣವನ್ನು ತಂದು ಕೃಷಿ ಹಾಗೂ ತಮ್ಮ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೂಡಲೇ ಇನ್ನುಳಿದ 1065 ರೈತರಿಗೆ ಕೂಡಲೇ ಹಣವನ್ನು ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.